ವೈದೇಹಿಗೆ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ತುಂಬಾ ಖುಶಿ. ಅವರು ನಮ್ಮೂರವರು ಅಂತ ಸ್ವಲ್ಪ extra ಖುಶಿ. ಅವರ best ಕಥೆಗಳಲ್ಲಿ ಗಾಢವಾಗಿರುವುದು ದ.ಕ.ದ ಮಣ್ಣಿನ ವಾಸನೆಯೇ ಆದರೂ ಅವರು ಸುಮಾರು ವರ್ಷ ಶಿವಮೊಗ್ಗದಲ್ಲಿ ಇದ್ದದ್ದರಿಂದ ನಮ್ಮೂರವರು ಅಂತಲೂ ಅಂದುಕೊಂಡರೆ factually incorrect ಅಂತೂ ಅಲ್ಲ. (ಈಗ ನಾವು ಸುನಿತಾ ವಿಲಿಯಮ್ಸ್ ನಮ್ಮ ದೇಶದವಳು ಅಂತ ಜಂಬ ಪಟ್ಟುಕೊಳ್ಳುವುದಿಲ್ಲವಾ, ಹಾಗೆ!)
ಗಾಂಧಿತಾತ ಎಂಬ ಬ್ರಾಂಡ್
ಮೊದಲ ಬಾರಿ ಈ ಸುದ್ದಿಯನ್ನು PTI ಟಿಕ್ಕರ್ ನಲ್ಲಿ ನೋಡಿದಾಗ ಇದ್ಯಾವ ತಮಾಷೆ ಅನ್ನಿಸಿತು. ಮರುದಿನ ಪೇಪರ್ರುಗಳಲ್ಲಿ ಇದೇ ಸುದ್ದಿ: ಮೋ ಬ್ಲಾ ಎನ್ನುವ MNC ಸಂಸ್ಥೆ ೧೪೦ನೇ ಗಾಂಧಿಜಯಂತಿಯ ದಿನದಂದು limited edition ಪೆನ್ನುಗಳನ್ನು ತಂದಿದೆ. ಅದರ ೧೮ ಕ್ಯಾರೆಟ್ ಬಂಗಾರದ ನಿಬ್ಬಿನ ಮೇಲೆ ಗಾಂಧಿ ಚಿತ್ರ ಇದೆ. ಗಾಂಧಿ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಿದ ದೂರದ ದ್ಯೋತಕವಾಗಿ (೨೪೧ ಮೈಲಿಗಳು) ಕೇವಲ ೨೪೭ limited edition ಪೆನ್ನುಗಳನ್ನು ಮಾಡಲಾಗಿದೆ. ಈ ಪೆನ್ನಿಗೆ ಖಾದಿಯ ನೂಲಿನ ಬಟ್ಟೆಯಂತಹ finish ಇದೆ… ಇತ್ಯಾದಿ. ಬೆಲೆ: ಕೇವಲ ೧೪ ಲಕ್ಷ. ಪೆನ್ನನ್ನು ಬಿಡುಗಡೆ ಮಾಡಿದ್ದು ಗಾಂಧಿಯ ಮರಿಮಗ ತುಷಾರ್ ಗಾಂಧಿ. (http://beta.thehindu.com/news/national/article26755.ece) Read the rest of this entry »
ನಮ್ಮ ನಾಲಿಗೆ ಮೇಲಿನ ಸರ್ವಜ್ಞ ಕಲ್ಲಿನ ಪ್ರತಿಮೆ ಆದದ್ದು ಹೇಗೆ?
ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?
ಜಾತಿ ವಿಜಾತಿ ಎನಬೇಡ
ದೇವನೊಲಿದಾತನೆ ಜಾತ ಸರ್ವಜ್ಞ.
ಮೈಕೆಲ್ ಎಂಬ ಮಾಂತ್ರಿಕನಿಗೆ ಕಾಡಿದ್ದು ಯಾವ ಪೀಡೆ?
ಮೈಕೆಲ್ ಜಾಕ್ಸನ್ ತನ್ನ ಕೊನೆ ಶೋ ಗೆ ಬಂಗಾರದ ನೀರು ಎರೆದ ಪೆಟ್ಟಿಗೆಯಲ್ಲಿ ಲಾಸ್ ಎಂಜಲಿಸ್ಸಿನಲ್ಲಿ ತಯಾರಾಗ್ತಾ ಇದ್ದಾನೆ. ಅವನ ಮೆಮೊರಿಯಲ್ ಸರ್ವೀಸ್ ನೋಡಲಿಕ್ಕೂ ಟಿಕೆಟ್ಟುಗಳಿವೆಯಂತೆ…
ಈ ಮೂಳೆ-ರಹಿತ ಮಾಂತ್ರಿಕ ಸತ್ತ ದಿನದಿಂದ ಪೇಪರ್ರುಗಳ ತುಂಬ ಇವನ ಒಂದಲ್ಲ ಒಂದು ಪುರಾಣ : ಇವನ ಸಾವಿಗೆ ಹೊಣೆ ಯಾರು? ಅವನಿಗೆ ಸಾಲ ಎಷ್ಟಿತ್ತು? ಜುಲೈನಲ್ಲಿ ಆಗಬೇಕಿದ್ದ ಅವನ ಲಂಡನ್ ಟೂರ್ ಅವನ ಸಾಲದ ಹೊರೆಯನ್ನು ತಗ್ಗಿಸುತ್ತಿತ್ತೆ? ಸಾಯುವಾಗ ಅವನ ತಲೆಯಲ್ಲಿ ಎಷ್ಟು ಕೂದಲು ಉಳಿದಿತ್ತು? ಹೊಟ್ಟೆಯಲ್ಲಿ ಎಷ್ಟು ಔಷಧಿ ತುಂಬಿತ್ತು? ಅವನ ಮಕ್ಕಳ ನ್ಯಾನಿ ಅವನ ಬಗ್ಗೆ ಏನೇನು ಹೇಳ್ತಾಳೆ?… ಇತ್ಯಾದಿ. Read the rest of this entry »
ನೆರುಡಾನನ್ನು ಅನುಸರಿಸಿ
(ಈ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಹಿಗ್ಗಾಮಗ್ಗಾ ಹೊಡೆದಾಟ ಟಿವಿಯಲ್ಲಿ ನೋಡಿ ಇದರ ಹದಿನೈದು ವರ್ಷದ ಹಿಸ್ಟರಿ ಬಗ್ಗೆ ಸ್ವಲ್ಪ ಓದಿಕೊಳ್ಳಬೇಕು, ಬ್ಲಾಗಲ್ಲಿ ಬರೀಬೇಕು ಅಂತ ಕೂತವಳ ಕಣ್ಣಿಗೆ ನೆರುಡಾ ಪದ್ಯಗಳು ಬಿದ್ದು ಈಗ ಕತೆ ಬೇರೆ ಆಗಿದೆ. ಈ ಸ್ಪಾನಿಶ್ ಕವಿಗಳು ರೆವಲ್ಯುಶನ್ನಿನಿಂದ ಹಿಡಿದು ರೊಮಾನ್ಸಿನವರೆಗೆ ಎಲ್ಲವನ್ನೂ ಇಷ್ಟು ಲಿರಿಕಲ್ಲಾಗಿ ಹೇಗೆ ಬರೀತಾರಪ್ಪ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡೇ ಎರಡು ರೂಪಾಂತರದ ಪ್ರಯತ್ನ. ನಾನು original ಪದ್ಯಗಳ ಜೊತೆ ಸಿಕ್ಕಾಪಟ್ಟೆ ಜಾಸ್ತಿಯೇ liberty ತೆಗೆದುಕೊಂಡಿರುವುದರಿಂದ ರೂಪಾಂತರ ಅಥವಾ ನೆರುಡಾ ಪ್ರೇರಿತ ಅನ್ನುವುದೇ ಲೇಸು. ಮಸೂದೆ ಮತ್ತೊಮ್ಮೆ.)
ಸಲಾಮ್ ಕಮಲಾ
ಕಮಲಾ (ದಾಸ್ ಅಲಿಯಾಸ್ ಸುರಯ್ಯ) ಸತ್ತ ಸುದ್ದಿ ಕೇಳಿ ಒಂಥಾರಾ ಮಂಕಾಗಿ ಕೂತಿದ್ದೀನಿ. ಹಾಗಂತ ಈ ಇಂಗ್ಲಿಷ್-ಮಲಯಾಳಿ ಬರಹಗಾರ್ತಿ ನನ್ನ ಫೇವರೇಟ್ ಲೇಖಕಿ ಅಂತ ಹೇಳಲಾರೆ. ಆದರೆ ಈಕೆ ಜೀವನದುದ್ದಕ್ಕೂ ಯಾರಿಗೂ ಕ್ಯಾರೆ ಅನ್ನದೆ, ಅಡಿಗಡಿಗೂ ಮಧ್ಯಮ ವರ್ಗದ ಮಡಿವಂತಿಕೆಗೆ ಚುರಕ್ ಚುರಕ್ ಅಂತ ಶಾಕ್ ಹೊಡೆಸುತ್ತ ತನ್ನದೇ ದಾರಿಯಲ್ಲಿ ನಡೆದ ಪರಿ ಮೆಚ್ಚಬೇಕಾದದ್ದು. Read the rest of this entry »