<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
	>

<channel>
	<title>Bageshree</title>
	<atom:link href="http://bageshree.wordpress.com/feed/" rel="self" type="application/rss+xml" />
	<link>http://bageshree.wordpress.com</link>
	<description>Bageshree's Weblog</description>
	<lastBuildDate>Wed, 07 Oct 2009 04:06:11 +0000</lastBuildDate>
	<generator>http://wordpress.com/</generator>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<cloud domain='bageshree.wordpress.com' port='80' path='/?rsscloud=notify' registerProcedure='' protocol='http-post' />
<image>
		<url>http://www.gravatar.com/blavatar/aa27ad4700f80861df2ee644f929efa0?s=96&#038;d=http://s.wordpress.com/i/buttonw-com.png</url>
		<title>Bageshree</title>
		<link>http://bageshree.wordpress.com</link>
	</image>
	<atom:link rel="search" type="application/opensearchdescription+xml" href="http://bageshree.wordpress.com/osd.xml" title="Bageshree" />
		<item>
		<title>ಗಾಂಧಿತಾತ ಎಂಬ ಬ್ರಾಂಡ್</title>
		<link>http://bageshree.wordpress.com/2009/10/06/%e0%b2%97%e0%b2%be%e0%b2%82%e0%b2%a7%e0%b2%bf%e0%b2%a4%e0%b2%be%e0%b2%a4-%e0%b2%8e%e0%b2%82%e0%b2%ac-%e0%b2%ac%e0%b3%8d%e0%b2%b0%e0%b2%be%e0%b2%82%e0%b2%a1%e0%b3%8d/</link>
		<comments>http://bageshree.wordpress.com/2009/10/06/%e0%b2%97%e0%b2%be%e0%b2%82%e0%b2%a7%e0%b2%bf%e0%b2%a4%e0%b2%be%e0%b2%a4-%e0%b2%8e%e0%b2%82%e0%b2%ac-%e0%b2%ac%e0%b3%8d%e0%b2%b0%e0%b2%be%e0%b2%82%e0%b2%a1%e0%b3%8d/#comments</comments>
		<pubDate>Tue, 06 Oct 2009 15:23:27 +0000</pubDate>
		<dc:creator>Bageshree</dc:creator>
				<category><![CDATA[Uncategorized]]></category>

		<guid isPermaLink="false">http://bageshree.wordpress.com/?p=189</guid>
		<description><![CDATA[ಮೊದಲ ಬಾರಿ ಈ ಸುದ್ದಿಯನ್ನು PTI ಟಿಕ್ಕರ್ ನಲ್ಲಿ ನೋಡಿದಾಗ ಇದ್ಯಾವ ತಮಾಷೆ ಅನ್ನಿಸಿತು. ಮರುದಿನ ಪೇಪರ್ರುಗಳಲ್ಲಿ ಇದೇ ಸುದ್ದಿ: ಮೋ ಬ್ಲಾ ಎನ್ನುವ MNC ಸಂಸ್ಥೆ ೧೪೦ನೇ ಗಾಂಧಿಜಯಂತಿಯ ದಿನದಂದು  limited edition ಪೆನ್ನುಗಳನ್ನು ತಂದಿದೆ. ಅದರ ೧೮ ಕ್ಯಾರೆಟ್ ಬಂಗಾರದ ನಿಬ್ಬಿನ ಮೇಲೆ ಗಾಂಧಿ ಚಿತ್ರ ಇದೆ. ಗಾಂಧಿ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಿದ ದೂರದ ದ್ಯೋತಕವಾಗಿ (೨೪೧ ಮೈಲಿಗಳು) ಕೇವಲ ೨೪೭ limited edition ಪೆನ್ನುಗಳನ್ನು ಮಾಡಲಾಗಿದೆ. ಈ ಪೆನ್ನಿಗೆ ಖಾದಿಯ ನೂಲಿನ ಬಟ್ಟೆಯಂತಹ finish ಇದೆ&#8230; [...]<img alt="" border="0" src="http://stats.wordpress.com/b.gif?host=bageshree.wordpress.com&blog=3977069&post=189&subd=bageshree&ref=&feed=1" />]]></description>
			<content:encoded><![CDATA[<div class='snap_preview'><br /><p>ಮೊದಲ ಬಾರಿ ಈ ಸುದ್ದಿಯನ್ನು PTI ಟಿಕ್ಕರ್ ನಲ್ಲಿ ನೋಡಿದಾಗ ಇದ್ಯಾವ ತಮಾಷೆ ಅನ್ನಿಸಿತು. ಮರುದಿನ ಪೇಪರ್ರುಗಳಲ್ಲಿ ಇದೇ ಸುದ್ದಿ: ಮೋ ಬ್ಲಾ ಎನ್ನುವ MNC ಸಂಸ್ಥೆ ೧೪೦ನೇ ಗಾಂಧಿಜಯಂತಿಯ ದಿನದಂದು  limited edition ಪೆನ್ನುಗಳನ್ನು ತಂದಿದೆ. ಅದರ ೧೮ ಕ್ಯಾರೆಟ್ ಬಂಗಾರದ ನಿಬ್ಬಿನ ಮೇಲೆ ಗಾಂಧಿ ಚಿತ್ರ ಇದೆ. ಗಾಂಧಿ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಿದ ದೂರದ ದ್ಯೋತಕವಾಗಿ (೨೪೧ ಮೈಲಿಗಳು) ಕೇವಲ ೨೪೭ limited edition ಪೆನ್ನುಗಳನ್ನು ಮಾಡಲಾಗಿದೆ. ಈ ಪೆನ್ನಿಗೆ ಖಾದಿಯ ನೂಲಿನ ಬಟ್ಟೆಯಂತಹ finish ಇದೆ&#8230; ಇತ್ಯಾದಿ. ಬೆಲೆ: ಕೇವಲ ೧೪ ಲಕ್ಷ. ಪೆನ್ನನ್ನು ಬಿಡುಗಡೆ ಮಾಡಿದ್ದು ಗಾಂಧಿಯ ಮರಿಮಗ ತುಷಾರ್ ಗಾಂಧಿ.  <a href="http://beta.thehindu.com/news/national/article26755.ece">(http://beta.thehindu.com/news/national/article26755.ece</a>)<span id="more-189"></span></p>
<p>ನಮ್ಮ ಪ್ರೈಮರಿ ಶಾಲೆಯ ಕನ್ನಡ ಪುಸ್ತಕಗಳಲ್ಲಿ ಖಾಕಿಯ ಮುಂಡು ಪಂಚೆ ತೊಡುವ, ಆಡಿನ ಹಾಲು ಕುಡಿಯುವ ಸರಳತೆಯ ಸಾಕಾರ ಮೂರ್ತಿ ಅಂತ ಚಿತ್ರಿತವಾಗುವ ಗಾಂಧಿ ಯಾವುದೋ ದಷ್ಟಪುಷ್ಟ ವ್ಯಾಪಾರಿಯ ಕೋಟ್ ಜೇಬಿನಲ್ಲಿ ಸ್ಟೈಲಾಗಿ ಸಿಕ್ಕಿಸಿದ ಪೆನ್ನಿನ ಬಂಗಾರದ ನಿಬ್ಬಿನ ಮೇಲೂ ಕೂರಬಹುದಾದ ಈ ಅಂತರ್ರಾಷ್ಟ್ರೀಯ ಮಾರುಕಟ್ಟೆಯ ಚೋದ್ಯಕ್ಕೆ ಏನನ್ನಬೇಕು? ಇದು  farce, ವಿಪರ್ಯಾಸ ಇತ್ಯಾದಿ ಪದಗಳನ್ನೂ ಮೀರಿದ್ದು ಅಲ್ಲವಾ?</p>
<p>ನಯಗಾಗಿಯಾದರೂ ಗಟ್ಟಿಯಾಗಿ ಗಾಂಧಿಯ ಮೊಮ್ಮಗ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಗೋಪಾಲ್ ಗಾಂಧಿ ಇದಕ್ಕೆ ಉತ್ತರ ಬರೆದರು <a href="http://www.hindu.com/2009/10/02/stories/2009100255230900.htm">(http://www.hindu.com/2009/10/02/stories/2009100255230900.htm</a>). ಗಾಂಧಿಯನ್ನು ಐಷಾರಾಮಿ ವಸ್ತುಗಳ ಮಾರುಕಟ್ಟೆಗೆ ಬಳಸಿಕೊಳ್ಳುವ ಬಗ್ಗೆ ಇನ್ನೂ ಖಾರವಾದ ಪ್ರತಿಕ್ರಿಯೆಗಳೂ ವ್ಯಕ್ತವಾದವು. ನಾವು ಇದರಿಂದ ಬಂದ ಲಾಭದಲ್ಲಿ ೩೦ ಭಾಗವನ್ನು ದಾನ ಕೊಡ್ತೀವೆ ಅಂತ ಕಂಪನಿಯವರು ಸಮಜಾಯಿಶಿ ಕೊಟ್ಟಿದ್ದು, &#8220;ಇದು ಐಷಾರಾಮಿ ವಸ್ತುವಲ್ಲ. ಗಾಂಧಿಗೆ ಪ್ರಿಯವಾದ, ಪವಿತ್ರವಾದ ಬರೆಯುವ ಉಪಕರಣ, ನಾವು ಗಾಂಧಿಯನ್ನು ಗೌರವಿಸುವ ಬಗೆ&#8230;&#8221; ಹೀಗೆಲ್ಲ ಕಂಪನಿಯ PR ವಕ್ತಾರರು ಹೇಳಿದ್ದೂ ಆಯಿತು.</p>
<p>ಅದೆಲ್ಲಾ ಈಗ ಹಳೆ news. ಈ ವಿಷಯದ ಬಗ್ಗೆ ನನಗೆ ಮತ್ತೆ ಕುತೂಹಲ ಹುಟ್ಟಿದ್ದು ಮೊನ್ನೆ &#8220;ವಿ ದ ಪೀಪಲ್&#8221; ಅನ್ನುವ ಸುಖಾಸುಮ್ಮನೆ ಮಂದಿ ಕೂತು ಪಟ್ಟಾಂಗ ಹೊಡೆಯುವ ಎನ್ ಡಿ ಟಿ ವಿಯ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಮತ್ತೆ ಎತ್ತಿ ಹಿಗ್ಗಾಮಗ್ಗಾ ಎಳೆದು ಮಾತಾಡುತ್ತಿದ್ದಾಗ.</p>
<p>ಅಲ್ಲಿ ಮಾತನಾಡುತ್ತಿದ್ದ ಒಬ್ಬ ಪ್ರಸೂನ್ ಜೋಶಿ ಎಂಬ ಜಾಹಿರಾತು &#8216;ಗುರು&#8217;ವಿನ ಪ್ರಕಾರ ಪ್ರಶ್ನೆ ಗಾಂಧಿಯನ್ನು ಮಾರುಕಟ್ಟೆ ಬಳಸಿಕೊಳ್ಳಬಹುದಾ, ಇಲ್ಲವಾ ಅಂಬುವುದೇ ಅಲ್ಲ. ಪ್ರಶ್ನೆ  ಗಾಂಧಿ ಎಂಬ brand ಮತ್ತು ಒಂದು ಐಷಾರಾಮಿ ಪೆನ್ನಿನ brand ಒಂದಕ್ಕೊಂದು ಹೊಂದಿಕೆ ಆಗುತ್ತದಾ ಇಲ್ಲವಾ ಎಂಬುದು. ಈ ವ್ಯಕ್ತಿಯ ಪ್ರಕಾರ ಗಾಂಧಿಯ brand value ಸರಳತೆ ಮತ್ತು ದೇಸೀಯತೆ ಆದ್ದರಿಂದ ಇವು ಒಂದಕ್ಕೊಂದು ಸರಿಹೊಂದುವುದಿಲ್ಲ.</p>
<p>ಹಾಗಂದರೆ ಏನು?</p>
<p>ಶಿವಾಜಿನಗರದಲ್ಲಿ ಬಿರ್ಯಾನಿ ಮಾರಾಟ ಮಾಡುವವನು ಗಾಂಧಿ ಹೆಸರನ್ನು ತನ್ನ ಹೋಟೆಲ್ಲಿಗೆ ಇಟ್ಟುಕೊಂಡರೆ ಅದು ಅಭಾಸ, ಆದರೆ ಯಾವುದಾದರು organic foods ವ್ಯಾಪಾರಿ ಸಂಸ್ಥೆ ಗಾಂಧಿತಾತನ ಹೆಸರಿನಲ್ಲಿ ಆಡುಹಾಲಿನ ಟೆಟ್ರಾ ಪ್ಯಾಕೆಟ್ಟುಗಳನ್ನು ತಂದರೆ ಅದು ಪರವಾಗಿಲ್ಲ. ಖಾದಿ ಕುರ್ತಾಗೆ ೧,೦೦೦ ರೂ ಲೇಬಲ್ ಹಚ್ಚಿ ಮಾರಿದರೆ ಸರಿ ಹೋದೀತು, ಆದರೆ ನೂರು ರೂಪಾಯಿಯ ಟೆರಲಿನ್ ಶರ್ಟಿಗೆ  ಗಾಂಧಿ ಹೆಸರಿಟ್ಟರೆ  ಶಾಂತಂ ಪಾಪಂ.  ಅರ್ಥಾತ್, ಗಾಂಧಿಯ ಹೆಸರಿನಲ್ಲಿ ವ್ಯಾಪಾರ ಮಾಡಿ ದುಡ್ಡು ಮಾಡಿಕೊಂಡರೆ ಪರವಾಗಿಲ್ಲ. ಆದರೆ brandಮ್ಯಾಚ್ ಮಾಡಿ ವ್ಯಾಪಾರ ಮಾಡಬೇಕಷ್ಟೆ.</p>
<p>ನಾವು ತಲೆಕೆಡಿಸಿಕೊಳ್ಳುವುದು ಈ ರೀತಿ ಮೇಲ್ಮೈ brand value ಬಗ್ಗೆ ಮಾತ್ರವೇ ಆದರೆ brandಗಳು ನಾವು ನಾವು ಇಷ್ಟ ಬಂದಂತೆ ಅರ್ಥೈಸಿಕೊಳ್ಳುತ್ತಾ ಹೋಗಬಹುದು ಅಂತಲೂ ಒಪ್ಪಿಕೊಳ್ಳಬೇಕಾಗುತ್ತದೆ ಅಲ್ಲವಾ? ಹಾಗೆ ನೋಡಿದರೆ ಪುಂಖಾನುಪುಂಖವಾಗಿ ಬರೆದ ಗಾಂಧಿ ಮೋ ಬ್ಲಾದವರಿಗೆ ಹೊಂದುವ brand ಆಗಬಾರದು ಯಾಕೆ? ಆಪಲ್ ಕಂಪ್ಯೂಟರ್ ತನ್ನ &#8220;ಥಿಂಕ್ ಡಿಫರೆಂಟ್&#8221; ಜಾಹಿರಾತುಗಳಲ್ಲಿ ಗಾಂಧಿಯನ್ನು ಬಳಸಿದ್ದನ್ನು ಗಮನಿಸಿದರೆ ಇದೇನೂ ಅಂಥಾ brand mismatch ಅಲ್ಲ ಬಿಡಿ.</p>
<p>ಆದರೆ ಆರ್ಥಿಕ ವ್ಯವಸ್ಥೆಯ ಬಗ್ಗೆ ಗಾಂಧಿಯ ಪರಿಕಲ್ಪನೆ ಏನಿತ್ತು?  ಆ ವ್ಯವಸ್ಥೆಯ brand ಮತ್ತು ನಮ್ಮ ಜಾಗತಿಕ ಮಾರುಕಟ್ಟೆಯ ವ್ಯವಸ್ಥೆಯ brand ಮ್ಯಾಚ್ ಆಗುತ್ತದೆಯಾ? ಇವೆಲ್ಲಾ ಅಪ್ರಸ್ತುತ ಪ್ರಶ್ನೆಗಳು. ಸಿಂಬಲ್ಲುಗಳು ಸಾಕು ನಮಗೆ. ಅದರ ಹಿಂದಿನ  ಅರ್ಥದ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಹೇಳಿ. ನಮಗೆ ಇವತ್ತು ಚೆಗುವೆರಾ ಭಾರಿ ಸೆಕ್ಸಿ ಅಡ್ವೆಂಚರ್ ನ brand ಆಗಿ ಬೇರೆ ಎಲ್ಲವೂ ನಗಣ್ಯ ಆಗಿಬಿಟ್ಟಿರುವುದೂ ಇದೇ ತರ್ಕದಲ್ಲಿ. (by the way, ಈ ತಮಾಷೆ ಓದಿ: <a href="http://news.bbc.co.uk/2/hi/americas/7062274.stm">http://news.bbc.co.uk/2/hi/americas/7062274.stm</a>)</p>
<p>ಇದೇ ಚರ್ಚೆಯಲ್ಲಿ ನಮ್ಮ ಗುಂಡಿನ ಅಧಿಪತಿ ವಿಜಯ್ ಮಲ್ಯ ಗಾಂಧಿಯ ಕನ್ನಡಕ, ಚಪ್ಪಲಿ, ಹಾಲು ಕುಡಿಯುತ್ತಿದ್ದ  ಬಟ್ಟಲನ್ನು ೯ ಕೋಟಿಗೆ ಕೊಂಡು ದೇಶಭಕ್ತಿ ಮೆರೆದ ಬಗ್ಗೆಯೂ ಮಾತು ಬಂತು. ಈ ವ್ಯಾಪಾರದಲ್ಲಿ ಯಾವುದೇ ವಿಪರ್ಯಾಸ   ಜೋಶಿಗೆ  ಕಾಣಲಿಲ್ಲ. ನಮ್ಮ ದೇಶದ ವಸ್ತುವನ್ನು ನಮ್ಮ ದೇಶಕ್ಕೇ ವಾಪಾಸು ತರುವುದು ನ್ಯಾಯಸಮ್ಮತವೇ ಅಲ್ಲವಾ ಅನ್ನುವುದು ಅವರ ಅಂಬೋಣ.</p>
<p>ಇನ್ನೇನು ಹೇಳುವುದಿದೆ?</p>
  <a rel="nofollow" href="http://feeds.wordpress.com/1.0/gocomments/bageshree.wordpress.com/189/"><img alt="" border="0" src="http://feeds.wordpress.com/1.0/comments/bageshree.wordpress.com/189/" /></a> <a rel="nofollow" href="http://feeds.wordpress.com/1.0/godelicious/bageshree.wordpress.com/189/"><img alt="" border="0" src="http://feeds.wordpress.com/1.0/delicious/bageshree.wordpress.com/189/" /></a> <a rel="nofollow" href="http://feeds.wordpress.com/1.0/gostumble/bageshree.wordpress.com/189/"><img alt="" border="0" src="http://feeds.wordpress.com/1.0/stumble/bageshree.wordpress.com/189/" /></a> <a rel="nofollow" href="http://feeds.wordpress.com/1.0/godigg/bageshree.wordpress.com/189/"><img alt="" border="0" src="http://feeds.wordpress.com/1.0/digg/bageshree.wordpress.com/189/" /></a> <a rel="nofollow" href="http://feeds.wordpress.com/1.0/goreddit/bageshree.wordpress.com/189/"><img alt="" border="0" src="http://feeds.wordpress.com/1.0/reddit/bageshree.wordpress.com/189/" /></a> <img alt="" border="0" src="http://stats.wordpress.com/b.gif?host=bageshree.wordpress.com&blog=3977069&post=189&subd=bageshree&ref=&feed=1" /></div>]]></content:encoded>
			<wfw:commentRss>http://bageshree.wordpress.com/2009/10/06/%e0%b2%97%e0%b2%be%e0%b2%82%e0%b2%a7%e0%b2%bf%e0%b2%a4%e0%b2%be%e0%b2%a4-%e0%b2%8e%e0%b2%82%e0%b2%ac-%e0%b2%ac%e0%b3%8d%e0%b2%b0%e0%b2%be%e0%b2%82%e0%b2%a1%e0%b3%8d/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/5f2a5091a45da876c2ac1f5531cdc8b6?s=96&#38;d=identicon&#38;r=G" medium="image">
			<media:title type="html">Bageshree</media:title>
		</media:content>
	</item>
		<item>
		<title>ನಮ್ಮ ನಾಲಿಗೆ ಮೇಲಿನ ಸರ್ವಜ್ಞ ಕಲ್ಲಿನ ಪ್ರತಿಮೆ ಆದದ್ದು ಹೇಗೆ?</title>
		<link>http://bageshree.wordpress.com/2009/08/18/%e0%b2%a8%e0%b2%ae%e0%b3%8d%e0%b2%ae-%e0%b2%a8%e0%b2%be%e0%b2%b2%e0%b2%bf%e0%b2%97%e0%b3%86-%e0%b2%ae%e0%b3%87%e0%b2%b2%e0%b2%bf%e0%b2%a8-%e0%b2%b8%e0%b2%b0%e0%b3%8d%e0%b2%b5%e0%b2%9c%e0%b3%8d/</link>
		<comments>http://bageshree.wordpress.com/2009/08/18/%e0%b2%a8%e0%b2%ae%e0%b3%8d%e0%b2%ae-%e0%b2%a8%e0%b2%be%e0%b2%b2%e0%b2%bf%e0%b2%97%e0%b3%86-%e0%b2%ae%e0%b3%87%e0%b2%b2%e0%b2%bf%e0%b2%a8-%e0%b2%b8%e0%b2%b0%e0%b3%8d%e0%b2%b5%e0%b2%9c%e0%b3%8d/#comments</comments>
		<pubDate>Mon, 17 Aug 2009 18:51:49 +0000</pubDate>
		<dc:creator>Bageshree</dc:creator>
				<category><![CDATA[Uncategorized]]></category>

		<guid isPermaLink="false">http://bageshree.wordpress.com/?p=174</guid>
		<description><![CDATA[ ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?
ಜಾತಿ ವಿಜಾತಿ ಎನಬೇಡ
ದೇವನೊಲಿದಾತನೆ ಜಾತ ಸರ್ವಜ್ಞ.

 
ಅಂತೂ ಇಂತು quid pro quo ನ್ಯಾಯದಂತೆ ತಿರುವಳ್ಳುವರ್ ಮೂರ್ತಿ ಬೆಂಗಳೂರಿನಲ್ಲಿ ಸ್ಥಾಪನೆ ಆದ ನಂತರ ಸರ್ವಜ್ಞನ ಮೂರ್ತಿ ತಮಿಳುನಾಡಿನಲ್ಲಿ ಸ್ಥಾಪನೆಯಾದ ದಿನ ಎಲ್ಲಾ ಪತ್ರಿಕೆಗಳಲ್ಲಿ ಸರ್ಕಾರ ನೀಡಿದ ಅರ್ಧ ಪೇಜಿನ ಜಾಹೀರಾತಿನಲ್ಲಿ ಸರ್ವಜ್ಞನ ಈ ತ್ರಿಪದಿ ಪ್ರಕಟವಾಯಿತು. ಇಂಗ್ಲಿಷ್ ಪತ್ರಿಕೆಗಳಲ್ಲಿ ಇದರ ಸತ್ವ ಮತ್ತು ಸುಂದರ ಪದಗಳಾಟದ ಲಾಲಿತ್ಯವನ್ನು ಹಿಡಿದಿಡದ ಇದರ ಅನುವಾದವೂ ಪ್ರಕಟವಾಯಿತು:
The light of the home of a man of despised caste.
Is it despicable? [...]<img alt="" border="0" src="http://stats.wordpress.com/b.gif?host=bageshree.wordpress.com&blog=3977069&post=174&subd=bageshree&ref=&feed=1" />]]></description>
			<content:encoded><![CDATA[<div class='snap_preview'><br /><p> ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?</p>
<p>ಜಾತಿ ವಿಜಾತಿ ಎನಬೇಡ</p>
<p>ದೇವನೊಲಿದಾತನೆ ಜಾತ ಸರ್ವಜ್ಞ.</p>
<p><span id="more-174"></span></p>
<p> </p>
<p>ಅಂತೂ ಇಂತು quid pro quo ನ್ಯಾಯದಂತೆ ತಿರುವಳ್ಳುವರ್ ಮೂರ್ತಿ ಬೆಂಗಳೂರಿನಲ್ಲಿ ಸ್ಥಾಪನೆ ಆದ ನಂತರ ಸರ್ವಜ್ಞನ ಮೂರ್ತಿ ತಮಿಳುನಾಡಿನಲ್ಲಿ ಸ್ಥಾಪನೆಯಾದ ದಿನ ಎಲ್ಲಾ ಪತ್ರಿಕೆಗಳಲ್ಲಿ ಸರ್ಕಾರ ನೀಡಿದ ಅರ್ಧ ಪೇಜಿನ ಜಾಹೀರಾತಿನಲ್ಲಿ ಸರ್ವಜ್ಞನ ಈ ತ್ರಿಪದಿ ಪ್ರಕಟವಾಯಿತು. ಇಂಗ್ಲಿಷ್ ಪತ್ರಿಕೆಗಳಲ್ಲಿ ಇದರ ಸತ್ವ ಮತ್ತು ಸುಂದರ ಪದಗಳಾಟದ ಲಾಲಿತ್ಯವನ್ನು ಹಿಡಿದಿಡದ ಇದರ ಅನುವಾದವೂ ಪ್ರಕಟವಾಯಿತು:</p>
<p>The light of the home of a man of despised caste.</p>
<p>Is it despicable? Speak not of this caste or that.</p>
<p>He whom God loves alone is of a noble caste.</p>
<p> ಈ ಇಡೀ ಪ್ರತಿಮೆ ಅನಾವರಣದ ಹಿಂದಿನ ರಾಜಕೀಯದ ಬಗ್ಗೆ ಹೆಚ್ಚು ಹೇಳುವುದಕ್ಕೇನೂ ಉಳಿದಿಲ್ಲ. ಮರು ಚುನಾವಣೆಯಲ್ಲಿ ಜಾತಿವಾರು ಮತ ವಿಂಗಡಣೆಯ ಬಗ್ಗೆ,  ಮಹಾನಗರಪಾಲಿಕೆಯಲ್ಲಿ ತಮಿಳಿಗರ ಓಟುಗಳ ಬಗ್ಗೆ ಒಂದು ಕೈಯ್ಯಲ್ಲಿ ಲೆಕ್ಕ ಹಾಕುತ್ತಾ, ಇನ್ನೊಂದು ಕೈಯ್ಯಲ್ಲಿ ಪ್ರತಿಮೆ ಅನಾವರಣ ಮಾಡುವವರ ಬಗ್ಗೆ ಹೇಳುವುದಾದರೂ ಏನು? ಹದಿನೆಂಟು ವರ್ಷಗಳ ಹಿಂದೆ ತಿರುವಳ್ಳುವರ್ ಪ್ರತಿಮೆ ಅನಾವರಣದ ಬಗ್ಗೆ ವಿರೋಧಿಸಿದವರು ಆಳುವ ಪಕ್ಷದ ಮೇಲಿನ ಕಕ್ಕುಲತೆಯಿಂದ ಈಗ ಸುಮ್ಮನಿದ್ದುಬಿಟ್ಟದ್ದಾಗಲಿ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕವಿವಾಣಿಯನ್ನು literal ಆಗಿ ಅರ್ಥ ಮಾಡಿಕೊಂಡು ಸುಖವಾಗಿರುವ ಕೆಲವು ಕನ್ನಡ ನೇತಾರರು ಒಂದಷ್ಟು ಕಂಠ ಶೋಷಣೆ ಮಾಡಿಕೊಂಡು ಮತ್ತೆ ತೆಪ್ಪಗಾಗಿಬಿಟ್ಟಿದ್ದಾಗಲಿ ಯಾರಿಗೂ ಗೊತ್ತಿರದೆ ಇರುವ ವಿಷಯವಲ್ಲ. In fact, ಇವೆಲ್ಲ ಎಷ್ಟರಮಟ್ಟಿಗೆ ನಮ್ಮ common senseನ ಭಾಗವಾಗಿದೆಯೆಂದರೆ &#8221;ಜಾತಿ ವಿಜಾತಿ ಎನಬೇಡ ಅನ್ನುತ್ತಾ  ಸರ್ವಜ್ಞನನ್ನು quote ಮಾಡಿ ಭಾಷಣ ಮಾಡುವ ಮಂದಿಯ ಜಾತಿ ರಾಜಕೀಯದ ಪರಿ ನೋಡಿ&#8221; ಅನ್ನುವ ಮಾತೂ ಕೂಡ ಭಾಷಣದಷ್ಟೇ rhetorical ಆಗಿ ತೋರುತ್ತದೆ!</p>
<p>ಈ ಪ್ರತಿಮಾ ನಾಟಕ ರಾಜಕಾರಣ ಒಂದು ಕಡೆಯಾದರೆ, ನನಗೆ ವೈಯ್ಯಕ್ತಿಕವಾಗಿ ಈ ಪ್ರಕರಣ ನನ್ನ ಅಜ್ಜಿಯ ನೆನಪುಗಳನ್ನು ತಾಜಾ ಮಾಡಿದೆ. ನಾನು ಸರ್ವಜ್ಞನ ತ್ರಿಪದಿಗಳನ್ನು ಮತ್ತು ಸೊಮೇಶ್ವರ ಶತಕದ ಸಾಲುಗಳನ್ನು ಮೊದಲು ನಾನು ಕೇಳಿದ್ದು ನನ್ನ ಅಮ್ಮನ ಅಮ್ಮನ ಬಾಯಿಯಿಂದ. ಶಾಲೆಗೆ ಎಂದೂ ಹೋಗದ ನನ್ನಜ್ಜಿ ಅವಳ ಅಣ್ಣ ತಮ್ಮಂದಿರ ಪುಸ್ತಕಗಳನ್ನು ದೇವರ ಮನೆಯ ದೀಪದ ಬೆಳಕಿನಲ್ಲಿ ತಾನೇ ಓದಿಕೊಂಡು ಬರೆಯಲಿಕ್ಕೆ ಓದಲಿಕ್ಕೆ ಕಲಿತಿದ್ದಳು. ಅವರಪ್ಪ ಶಾಲೆಯ ಪ್ರಸ್ತಾಪ ಮಾಡಿದರೆ &#8220;ಹೆಣ್ಣು ಮಕ್ಕಳೇನು ಶಾನುಬೋಗಿಕೆ ಮಾಡಬೇಕಾ?&#8221; ಅಂತ ಸಿಡಿಮಿಡಿಗೊಂಡಿದ್ದರಂತೆ. ಮದುವೆ, ಮಕ್ಕಳು, ಅಡುಗೆ, ಮನೆ ಹಿತ್ತಲ ಕುಂಬಳ ಗಿಡ, ಅಡಿಕೆ ಕೊಯ್ಲು, ಮೊಮ್ಮೊಕ್ಕಳು&#8230; ಹೀಗೆ ಜೀವನ ಬೇರೆ ದಿಕ್ಕಿಗೆ ಎಳೆದುಕೊಂಡು ಹೋದರೂ ಅವಳನ್ನು ಮಿಣುಕು ಬೆಳಕಿನಲ್ಲಿ ಕಲಿಯುವುದಕ್ಕೆ ಪ್ರೇರೇಪಿಸಿದ್ದ  ಅಕ್ಷರದ ಆಕರ್ಷಣೆ ಎಂದೂ ಅವಳಲ್ಲಿ ಸಂಪೂರ್ಣ ಆರಿರಲಿಲ್ಲ. ಮನೆಯ ಗಂಡು ಮಕ್ಕಳಿಗಿಂತ ಚೆನ್ನಾಗಿ ಪದ್ಯಗಳನ್ನು ಬಾಯಿಪಾಠ ಮಾಡಿದ್ದ ನನ್ನಜ್ಜಿ ಇಳಿವಯಸ್ಸಿನಲ್ಲಿಯೂ ಅವೆಲ್ಲವನ್ನು ನೆನ್ನೆಯೇ ಕಲಿತವಳಂತೆ ಪಠಪಠ ಹೇಳುತ್ತಿದ್ದಳು. ರಾತ್ರಿ ಎಲ್ಲರೂ ಮಲಗಿದ ಮೇಲೆ ಬಾವಿಯ ಪಕ್ಕ ಇದ್ದ ವಿದ್ಯುತ್ ದೀಪವಿರದ ಹಳೆಯ ಬಚ್ಚಲಿನ ಮನೆಯಲ್ಲಿಯೋ, ಅತವ ಅವಳು ಹಟಹಿಡಿದು ಕೆಡವಲಿಕ್ಕೆ ಬಿಡದೆ ಇರಿಸಿಕೊಂಡಿದ್ದ ಹಿತ್ತಲಿನ ಹಳೆಯ ಹಂಚಿನ ಮನೆಯಲ್ಲಿಯೋ ಸೇರಿಕೊಂಡು ಎನೋ ಕೆಲಸ ಮಾಡುತ್ತಲೇ ಇರುವುದು ಅವಳಿಗೆ ಜನ್ಮಕ್ಕಂಟಿದ ಅಭ್ಯಾಸ. ಅವಳು ಎಲ್ಲಿದ್ದಾಳೆ ಎನ್ನುವುದ ಸುಳಿವು ನಮಗೆ ನೀಡುತ್ತಿದ್ದುದು ಅವಳ ಗುನುಗುನುಗುನು ಪದ್ಯಗಳ ಪಠಣ. ರಜದಲ್ಲಿ ನಮ್ಮ ಮನೆಗೆ ಬಂದಾಗಲೂ ಕೈಗೆ ಸಿಕ್ಕ ನಮ್ಮ ಕತೆ ಪುಸ್ತಕಗಳನ್ನೆಲ್ಲಾ ಬೇಜಾರಿಲ್ಲದೇ ಕೂತು ಓದುತ್ತಿದ್ದಳು.</p>
<p>ಆಗೆಲ್ಲ ನನಗೆ ಸರ್ವಜ್ಞ ಯಾರು ಅಂತೇನೂ ಗೊತ್ತಿರಲಿಲ್ಲ. ನನ್ನಜ್ಜಿ ತ್ರಿಪದಿಗಳನ್ನು ಹೇಳಿಕೊಳ್ಳುವುದೇ ಅಲ್ಲದೆ ಸಾಂದರ್ಭಿಕವಾಗಿ ಇವುಗಳ ಸಾಲುಗಳನ್ನು ಉದ್ಧರಿಸುತ್ತಿದ್ದಳು.  ಇದರಲ್ಲಿ ವಾಡಿಕೆಯಲ್ಲಿ ಬಂದ ಗಾದೆ ಯಾವುದು, ಸರ್ವಜ್ಞನ ವಚನ ಯಾವುದು ಅಂತ ಗೊತ್ತಾಗುತ್ತಿರಲಿಲ್ಲ.  &#8221;ಅಯ್ಯೋ ಉಲ್ಲಮ್ಮ (ಊರಿನ + ಅಮ್ಮ = ಊರಮ್ಮ ದ ಅಪಭ್ರಂಶ) ಹೊಟ್ಟೆ ತುಂಬಿದೆ, ಮೊಸರನ್ನ ಬೇಡ&#8221; ಅಂದರೆ ಒಂದು ತ್ರಿಪದಿ ತಯಾರಿರುತ್ತಿತ್ತು:</p>
<p>ಮಜ್ಜಿಗೆ ಇಲ್ಲದ ಊಟ,</p>
<p>ಮಜ್ಜನವ ಕಾಣದಾ ಲಜ್ಜೆಗೆಟ್ಟ</p>
<p>ಹೆಣ್ಣಂತೆ ಸರ್ವಜ್ಞ.</p>
<p><em>(ಎಂತ &#8216;ಜ್ಞ&#8217;ರೂ ಹೆಂಗಸರ ವಿಷಯ ಬಂದಾಗ ಮಾತ್ರ ಕೊಂಕಿಲ್ಲದೆ ಮಾತಾಡುವುದೇ ಇಲ್ಲ ಅಲ್ಲವಾ?!)</em></p>
<p>ಹೀಗೆ ನನ್ನ ಅಜ್ಜಿ ಹೇಳುತ್ತಿದ್ದ ಒಂದಷ್ಟು ತ್ರಿಪದಿಗಳನ್ನು ನಾನು ಮತ್ತು ನನ್ನಮ್ಮ ಮೊನ್ನೆ ಕೂತುಕೊಂಡು ನೆನಪಿಸಿಕೊಳ್ಳುತ್ತಾ ಇದ್ದೆವು.</p>
<p> </p>
<p>ಆರು ಬೆಟ್ಟವ ಹಾರುವೆನೆ೦ದರೆ,</p>
<p>ಅಹುದೆನಬೇಕು. ಮೂರ್ಖರೊಳು</p>
<p>ಕಲಹ ಸಲ್ಲ ಸರ್ವಜ್ನ</p>
<p>-</p>
<p>ಕರೆಯದೆ ಬರುವವನ, ಬರೆಯದೇ ಓದುವನ,</p>
<p>ಬರಿಗಾಲಲಿ ನಡೆವನ ಕರೆದು ಕೆರದಲ್ಲಿ</p>
<p>ಹೊಡೆ ಎಂದ ಸರ್ವಜ್ಞ</p>
<p>-</p>
<p>ಹಸಿವಿಲ್ಲದುಣಬೇಡ ಹಸಿದು ಇರಬೇಡ,</p>
<p>ಬಿಸಿ ಬೇಡ ತ೦ಗಳುಣಬೇಡ,</p>
<p>ವೈದ್ಯನ ಋಣ ಬೇಡ ಸರ್ವಜ್ಞ</p>
<p>-</p>
<p>ಬುದ್ಧಿ ಹೇಳದ ತಂದೆ ವಿದ್ಯೆ ಕಲಿಸದ ಗುರುವು</p>
<p>ಬಿದ್ದಿರಲು ಬಂದು ನೋಡದಾ ತಾಯಿ</p>
<p>ಶುದ್ಧವೈರಿಗಳು ಸರ್ವಜ್ಞ</p>
<p>-</p>
<p>ವೆಚ್ಚಕ್ಕೆ ಹೊನ್ನು ಬೆಚ್ಚನಾ ಮನೆಯು</p>
<p>ಇಚ್ಚೆಯನರಿತು ನಡೆವ ಸತಿ ಇದ್ದೊಡೆ</p>
<p>ಸ್ವರ್ಗಕ್ಕೆ ಕಿಚ್ಚು ಹಚ್ಚೆ೦ದ ಸರ್ವಜ್ಞ.</p>
<p>-</p>
<p>ಕಚ್ಚೆ ಕೈ ಬಾಯ್ಗಳು ಇಚ್ಚೆಯಲಿ ಇದ್ದರೆ</p>
<p>ಅಚ್ಯುತನಪ್ಪ ಅಜನಪ್ಪ</p>
<p>ಲೋಕದಲಿ ನಿಶ್ಚಿಂತನಪ್ಪ ಸರ್ವಜ್ಞ</p>
<p>-</p>
<p>ಹೀಗೆ ಸುಮಾರಷ್ಟು. ಕೆಲವು ಸಾಲುಗಳನ್ನು ಅವಳೇ ಸೇರಿಸಿಕೊಂಡೂ ಹೇಳುತ್ತಿದ್ದಳು ಅಂತಲೂ ನನ್ನ ಅನುಮಾನ.  ನನ್ನಜ್ಜಿಗೆ ಮಜ್ಜಿಗೆ ಊಟದ ಹಿರಿಮೆಯಿಂದ ಹಿಡಿದು ಕಚ್ಚೆ ಗಟ್ಟಿ ಇಟ್ಟುಕೊಳ್ಳುವ ವಿಷಯದವರೆಗೆ ಜೀವನದ ಅನೇಕ ವಿಷಯಗಳ ಬಗ್ಗೆ ಒಂದು ರೀತಿಯ collective wisdomನ ಆಗರ ಸರ್ವಜ್ಞ ಆಗಿದ್ದ. ಇಷ್ಟು ವರ್ಷಗಳ ನಂತರ ಹಿಂತಿರುಗಿ ನೋಡಿದಾಗ ಇನ್ನೊಂದು ವಿಷಯವೂ ನನಗೆ ಸೋಜಿಗ ತರುತ್ತದೆ. ನನ್ನ ಅಜ್ಜಿಯ ಬಾಯಲ್ಲಿ ನಲಿಯುತ್ತಿದ್ದ ಸರ್ವಜ್ಞ ವಚನಗಳಲ್ಲಿ ಬುದ್ಧಿವಾದ ಹೇಳುವ ಅಗ್ರಹಾರದ ತಾತನ ಹಾಗೆಯೇ ಕೇಳುತ್ತಿದ್ದ. ಅವನು ಜಾತಿ ಕುಲಗಳ,  ಪೂಜೆ ಪುನಸ್ಕಾರದ ಅರ್ಥಹೀನತೆಯ ಬಗ್ಗೆ ಹಾಡಿದ ವಚನಗಳು ಅವಳು ಹೇಳಿದ್ದು ನಾನೆಂದೂ ಕೇಳಿರಲಿಲ್ಲ.  After all, ಬೇರೆಯವರ ಮಾತುಗಳನ್ನು ಉದ್ಧರಿಸುವಾಗಲೂ ಎಲ್ಲರೂ ಅವರವರ ಭಾವಕ್ಕೆ, ಅವರವರ ಭಕುತಿಗೆ ಮತ್ತು ಅವರವರ prejudiceಗಳಿಗೆ ತಕ್ಕನಾಗಿಯೇ ಉದ್ಧರಿಸುವುದಲ್ಲವೇ? (ಮಾರ್ಕ್ಸ್ ನ ಪ್ರಸಿದ್ಧ ದೇವರ ಬಗೆಗಿನ ಮಾತುಗಳನ್ನು ಉದ್ಧರಿಸುವಾಗ &#8221;Religion is the opium of the people&#8221; ಅಂತಷ್ಟೆ ಉದ್ಧರಿಸಿ ಅದಕ್ಕೆ ಹಿಂದೆ ಮತ್ತು ಅವನು ಹೇಳಿದ್ದನ್ನು ಬಿಟ್ಟುಬಿಡುವ ಹಾಗೆ!)</p>
<p>ಸರ್ವಜ್ಞನ ಸಮಾಜ ಸುಧಾರಕ ಮುಖವನ್ನು ನಾನು ಕಂಡದ್ದು ನಂತರ ನಮ್ಮ ಕನ್ನಡ ಪಾಠದ ಪುಸ್ತಕಗಳಲ್ಲಿ ಇದ್ದ (ನಾನು ಶುರುವಿನಲ್ಲಿ ಉದ್ಧರಿಸಿದ ವಚನವೂ ಸೇರಿದಂತೆ) ತ್ರಿಪದಿಗಳ ಮೂಲಕ.</p>
<p>ಚಿತ್ತವಿಲ್ಲಡೆ ಗುಡಿಯ ಸುತ್ತಿದೊಡೆ ಫಲವೇನು,</p>
<p>ಎತ್ತು ಗಾಣವ ಹೊತ್ತು ನಿತ್ಯದಲಿ</p>
<p>ಸುತ್ತಿ ಬಂದಂತೆ ಸರ್ವಜ್ಞ</p>
<p>ಇತ್ಯಾದಿ ತ್ರಿಪದಿಗಳು. ಈಗಲೂ ಈ ತ್ರಿಪದಿಗಳು ಅರೆಬರೆಯಾಗಿಯಾದರೂ ನೆನಪಿರುವುದು ಇವು ನಾಲಿಗೆಯ ಮೇಲೆ ಚೆಂದ ಹೊರಳುವ ಭಾಷೆಯ ಸರಳ ಮತ್ತು ಸುಂದರ ಮೋಡಿಯಿಂದಾಗಿ. ಮನಸ್ಸಿಲ್ಲದಿದ್ದರೂ ಚಾಟಿ ಏಟಿಗೆ ಹೆದರಿ ಮಾಡುವ ಕೆಲಸಕ್ಕೆ ಇದಕ್ಕಿಂತ earthy ಆದ, ನಿಖರವಾದ ಉಪಮೆ ದೊರೆಯಲಾರದೇನೋ. ಸರ್ವಜ್ಞ ಹುಟ್ಟು ವರ್ಣಸಂಕರದಲ್ಲಿ, ಅವನು ಬೆಳೆದದ್ದು ಶೈವ ದ೦ಪತಿಗಳ ಬಳಿಯಲ್ಲಾದರೂ ಅವನ ತ೦ದೆ ಬ್ರಾಹ್ಮಣ ಮತ್ತು ತಾಯಿ ಶೂದ್ರ ಹೆ೦ಗಸು ಇತ್ಯಾದಿ ವಿವರಗಳು ನನಗೆ ಈ ಪ್ರತಿಮೆ ಆವರಣದ ಗಲಾಟೆ ಶುರುವಾಗುವವರೆಗೆ ಗೊತ್ತೇ ಇರಲಿಲ್ಲ!</p>
<p>ಈ ಸರ್ವಜ್ಞ ನನ್ನ ಮತ್ತು ನನ್ನಂತ ಅನೇಕರು referenceನಿಂದಲೇ ಮಾಯ ಆಗುತ್ತಾ ಹೋಗುತ್ತಿರುವುದು, ಪ್ರತಿಮೆ ಗಿತಿಮೆ ಅಂತೆಲ್ಲಾ ಗಲಟೆ ಆದಾಗ ಮಾತ್ರ ಅದರ news valueನಿಂದಾಗಿ ನೆನಪಾಗುವುದು ಯಾಕೆ? ನನ್ನ ಅಜ್ಜಿಯ ಹಾಗೆ ಕನ್ನಡ ಪದ್ಯಗಳನ್ನು ಆಸೆಪಟ್ಟು, ಕಷ್ಟಪಟ್ಟು ಕಲಿತು ಪಠಿಸುವವರು ಈಗ ಬಹಳ ಮಂದಿ ಇರಲಾರರೇನೋ. ಸರ್ವಜ್ಞನ ತ್ರಿಪದಿಗಳು ಮುಂಚೆ ಇದ್ದ ಹಾಗೆ ಕನ್ನಡದ ಪಠ್ಯಪುಸ್ತಕದಲ್ಲಿಯೂ ಹೆಚ್ಚು ಕಾಣುವುದಿಲ್ಲ. ಆದರೆ ಅದೊಂದೇ ಕಾರಣ ಅಂದುಬಿಡುವುದು  ಸರಳೀಕರಣ. ಇದೆಲ್ಲಕ್ಕಿಂತ ಹೆಚ್ಚಾಗಿ ಸರ್ವಜ್ಞ ಯಾವ ಜಾತಿ, ಪಂಥ ಅಥವಾ ಮಠದಲ್ಲಿ ಆರಾಧನೆಗೆ ಯೋಗ್ಯವಾದ ಗುರು ಎಂದು ಸಂಪೂರ್ಣವಾಗಿ institutionalise ಆಗಲಿಲ್ಲ. ಸರ್ವಜ್ಞನ ಹೆಸರಿನಲ್ಲಿಯೂ ಒಂದು ಮಠ ಮತ್ತು ಸ್ವಾಮೀಜಿ ಇರುವುದು ನನಗೆ ಮೊನ್ನೆ ಯಾವುದೋ ಉದಯ ಟಿವಿ ಸಂವಾದ ಕೇಳುತ್ತಿದ್ದಾಗ ಮಾತ್ರವೇ ಗೊತ್ತಾಗಿದ್ದು. ಆದರೆ ಈತನ institutionalisation ಬಸವ, ಅಕ್ಕ, ಪುರಂದರ, ಕನಕ&#8230; ಇವರಿಗೆಲ್ಲಾ ಹೋಲಿಸಬಹುದಾದ institutionalisation ಅಲ್ಲ. ಭಕ್ತಿ ಪಂಥದಲ್ಲಿ ಬೇರೆ ಬೇರೆ ಕಾಲದಲ್ಲಿ, ಬೇರೆ ಬೇರೆ ನಂಬಿಕೆಗಳ streamನಲ್ಲಿ ಬಂದ ಇವರೆಲ್ಲರೂ ಕೂಡ ಅಯಾ ಕಾಲದ ಕರ್ಮಟ ನಂಬಿಕೆಗಳ ವಿರುದ್ಧ ದನಿ ಎತ್ತಿದವರೇ ಆದರೂ ಅವರೆಲ್ಲಾ ಕಾಲಕ್ರಮದಲ್ಲಿ ಒಂದೊಂದು institutionಗಳ ಒಳಗೆ ಗಟ್ಟಿಯಾಗಿ ಸೇರಿಹೋಗಿದ್ದಾರೆ. ಒಂದೆಡೆ ಇವರಿಗೆ &#8216;ಗುರು&#8217; ಪಟ್ಟ ಇದ್ದರೆ ಇನ್ನೊಂದೆಡೆ ಶಾಸ್ತ್ರೀಯ ಮತ್ತು ಲಘು ಸಂಗೀತಗಾರರು ಇವರ ಹಾಡುಗಳನ್ನು ಹಾಡುವ ಮೂಲಕವೂ ಇವರು ನೆನಪಿನಿಂದ ಮರೆಯಾಗದಂತೆ ಇಟ್ಟಿದ್ದಾರೆ. ಇವೆರಡೂ ಸರ್ವಜ್ಞನ ವಿಷಯದಲ್ಲಿ ಆಗಿಲ್ಲ.</p>
<p>ಯಾಕೆ?</p>
<p>ಇದಕ್ಕೆ ಚಾರಿತ್ರಿಕ, ಸಾಮಾಜಿಕ ಕಾರಣಗಳು ಏನು? ಇದರ ಬಗ್ಗೆ ಯಾರಾದರೂ ಅಧ್ಯಯನ ಮಾಡಿರಬಹುದು. ನನಗಂತೂ ಗೊತ್ತಿಲ್ಲ. ಗೊತ್ತಿದ್ದವರು ಹೇಳಿ.</p>
<p>ಆದರೆ ಒಂದು ಮಾತು ಸತ್ಯ. ಒಂದು ಜಾತಿ ಪಂಥದ institution ಒಳಗೆ ಸೇರಿದ ಒಬ್ಬ ಕವಿ/ದಾರ್ಶನಿಕ ಅವನು ಬಳಸಿದ ಭಾಷೆಯನ್ನಾಡುವ ಮಂದಿ ಅವನನ್ನು ಮರೆತರೂ ಪೂರ್ತಿ ಮರೆಯಾಗಿ ಹೋಗುವುದಿಲ್ಲ. ಆದರೆ ಮಂದಿ ತಮ್ಮ ಭಾಷೆಯಲ್ಲಿ, ಜಾತಿ ವಿಜಾತಿಗಳ ಸೋಂಕಿಲ್ಲದೆ (&#8216;ಕನ್ನಡವೊಂದೇ ಜಾತಿ&#8217; ಎಂಬ ಬಾಲಿಶ ಅರ್ಥದಲ್ಲಿ ನಾನೀ ಮಾತು ಹೇಳುತ್ತಿಲ್ಲ) ನಾಲಿಗೆ ಹೊರಳಿಸುವುದನ್ನೇ ಕಡಿಮೆ ಮಾಡುತ್ತಾ ಹೋದ ಹಾಗೆ ಜನರ ನಾಲಿಗೆಯ ಮೇಲೆಯೇ ಜೀವಂತ ಇರುವ  ಸರ್ವಜ್ಞನಂತ ಕವಿ ಎಲ್ಲಿ ಹೋಗಬೇಕು? ಅದಕ್ಕೇ ಏನೋ ಪಾಪ ಬೇಜಾರಾಗಿ ಕಲ್ಲಿನ ಪ್ರತಿಮೆಯಾಗಿ ನಿಮ್ಮಗಳ ಸಹವಾಸವೇ ಬೇಡ ಅಂತ ತಮಿಳುನಾಡಿನಲ್ಲಿ ನಿಂತುಬಿಟ್ಟದ್ದು!</p>
  <a rel="nofollow" href="http://feeds.wordpress.com/1.0/gocomments/bageshree.wordpress.com/174/"><img alt="" border="0" src="http://feeds.wordpress.com/1.0/comments/bageshree.wordpress.com/174/" /></a> <a rel="nofollow" href="http://feeds.wordpress.com/1.0/godelicious/bageshree.wordpress.com/174/"><img alt="" border="0" src="http://feeds.wordpress.com/1.0/delicious/bageshree.wordpress.com/174/" /></a> <a rel="nofollow" href="http://feeds.wordpress.com/1.0/gostumble/bageshree.wordpress.com/174/"><img alt="" border="0" src="http://feeds.wordpress.com/1.0/stumble/bageshree.wordpress.com/174/" /></a> <a rel="nofollow" href="http://feeds.wordpress.com/1.0/godigg/bageshree.wordpress.com/174/"><img alt="" border="0" src="http://feeds.wordpress.com/1.0/digg/bageshree.wordpress.com/174/" /></a> <a rel="nofollow" href="http://feeds.wordpress.com/1.0/goreddit/bageshree.wordpress.com/174/"><img alt="" border="0" src="http://feeds.wordpress.com/1.0/reddit/bageshree.wordpress.com/174/" /></a> <img alt="" border="0" src="http://stats.wordpress.com/b.gif?host=bageshree.wordpress.com&blog=3977069&post=174&subd=bageshree&ref=&feed=1" /></div>]]></content:encoded>
			<wfw:commentRss>http://bageshree.wordpress.com/2009/08/18/%e0%b2%a8%e0%b2%ae%e0%b3%8d%e0%b2%ae-%e0%b2%a8%e0%b2%be%e0%b2%b2%e0%b2%bf%e0%b2%97%e0%b3%86-%e0%b2%ae%e0%b3%87%e0%b2%b2%e0%b2%bf%e0%b2%a8-%e0%b2%b8%e0%b2%b0%e0%b3%8d%e0%b2%b5%e0%b2%9c%e0%b3%8d/feed/</wfw:commentRss>
		<slash:comments>6</slash:comments>
	
		<media:content url="http://1.gravatar.com/avatar/5f2a5091a45da876c2ac1f5531cdc8b6?s=96&#38;d=identicon&#38;r=G" medium="image">
			<media:title type="html">Bageshree</media:title>
		</media:content>
	</item>
		<item>
		<title>ಮೈಕೆಲ್ ಎಂಬ ಮಾಂತ್ರಿಕನಿಗೆ ಕಾಡಿದ್ದು ಯಾವ ಪೀಡೆ?</title>
		<link>http://bageshree.wordpress.com/2009/07/05/%e0%b2%ae%e0%b3%88%e0%b2%95%e0%b3%86%e0%b2%b2%e0%b3%8d-%e0%b2%8e%e0%b2%82%e0%b2%ac-%e0%b2%ae%e0%b2%be%e0%b2%82%e0%b2%a4%e0%b3%8d%e0%b2%b0%e0%b2%bf%e0%b2%95%e0%b2%a8%e0%b2%bf%e0%b2%97%e0%b3%86/</link>
		<comments>http://bageshree.wordpress.com/2009/07/05/%e0%b2%ae%e0%b3%88%e0%b2%95%e0%b3%86%e0%b2%b2%e0%b3%8d-%e0%b2%8e%e0%b2%82%e0%b2%ac-%e0%b2%ae%e0%b2%be%e0%b2%82%e0%b2%a4%e0%b3%8d%e0%b2%b0%e0%b2%bf%e0%b2%95%e0%b2%a8%e0%b2%bf%e0%b2%97%e0%b3%86/#comments</comments>
		<pubDate>Sun, 05 Jul 2009 07:52:34 +0000</pubDate>
		<dc:creator>Bageshree</dc:creator>
				<category><![CDATA[Uncategorized]]></category>

		<guid isPermaLink="false">http://bageshree.wordpress.com/?p=162</guid>
		<description><![CDATA[ಮೈಕೆಲ್ ಜಾಕ್ಸನ್ ತನ್ನ ಕೊನೆ ಶೋ ಗೆ ಬಂಗಾರದ ನೀರು ಎರೆದ ಪೆಟ್ಟಿಗೆಯಲ್ಲಿ ಲಾಸ್ ಎಂಜಲಿಸ್ಸಿನಲ್ಲಿ ತಯಾರಾಗ್ತಾ ಇದ್ದಾನೆ. ಅವನ ಮೆಮೊರಿಯಲ್ ಸರ್ವೀಸ್ ನೋಡಲಿಕ್ಕೂ ಟಿಕೆಟ್ಟುಗಳಿವೆಯಂತೆ&#8230;
ಈ ಮೂಳೆ-ರಹಿತ ಮಾಂತ್ರಿಕ ಸತ್ತ ದಿನದಿಂದ ಪೇಪರ್ರುಗಳ ತುಂಬ ಇವನ ಒಂದಲ್ಲ ಒಂದು ಪುರಾಣ : ಇವನ ಸಾವಿಗೆ ಹೊಣೆ ಯಾರು? ಅವನಿಗೆ ಸಾಲ ಎಷ್ಟಿತ್ತು? ಜುಲೈನಲ್ಲಿ ಆಗಬೇಕಿದ್ದ ಅವನ ಲಂಡನ್ ಟೂರ್ ಅವನ ಸಾಲದ ಹೊರೆಯನ್ನು ತಗ್ಗಿಸುತ್ತಿತ್ತೆ? ಸಾಯುವಾಗ ಅವನ ತಲೆಯಲ್ಲಿ ಎಷ್ಟು ಕೂದಲು ಉಳಿದಿತ್ತು? ಹೊಟ್ಟೆಯಲ್ಲಿ ಎಷ್ಟು ಔಷಧಿ ತುಂಬಿತ್ತು? ಅವನ ಮಕ್ಕಳ [...]<img alt="" border="0" src="http://stats.wordpress.com/b.gif?host=bageshree.wordpress.com&blog=3977069&post=162&subd=bageshree&ref=&feed=1" />]]></description>
			<content:encoded><![CDATA[<div class='snap_preview'><br /><p>ಮೈಕೆಲ್ ಜಾಕ್ಸನ್ ತನ್ನ ಕೊನೆ ಶೋ ಗೆ ಬಂಗಾರದ ನೀರು ಎರೆದ ಪೆಟ್ಟಿಗೆಯಲ್ಲಿ ಲಾಸ್ ಎಂಜಲಿಸ್ಸಿನಲ್ಲಿ ತಯಾರಾಗ್ತಾ ಇದ್ದಾನೆ. ಅವನ ಮೆಮೊರಿಯಲ್ ಸರ್ವೀಸ್ ನೋಡಲಿಕ್ಕೂ ಟಿಕೆಟ್ಟುಗಳಿವೆಯಂತೆ&#8230;</p>
<p>ಈ ಮೂಳೆ-ರಹಿತ ಮಾಂತ್ರಿಕ ಸತ್ತ ದಿನದಿಂದ ಪೇಪರ್ರುಗಳ ತುಂಬ ಇವನ ಒಂದಲ್ಲ ಒಂದು ಪುರಾಣ : ಇವನ ಸಾವಿಗೆ ಹೊಣೆ ಯಾರು? ಅವನಿಗೆ ಸಾಲ ಎಷ್ಟಿತ್ತು? ಜುಲೈನಲ್ಲಿ ಆಗಬೇಕಿದ್ದ ಅವನ ಲಂಡನ್ ಟೂರ್ ಅವನ ಸಾಲದ ಹೊರೆಯನ್ನು ತಗ್ಗಿಸುತ್ತಿತ್ತೆ? ಸಾಯುವಾಗ ಅವನ ತಲೆಯಲ್ಲಿ ಎಷ್ಟು ಕೂದಲು ಉಳಿದಿತ್ತು? ಹೊಟ್ಟೆಯಲ್ಲಿ ಎಷ್ಟು ಔಷಧಿ ತುಂಬಿತ್ತು? ಅವನ ಮಕ್ಕಳ ನ್ಯಾನಿ ಅವನ ಬಗ್ಗೆ ಏನೇನು ಹೇಳ್ತಾಳೆ?&#8230; ಇತ್ಯಾದಿ. <span id="more-162"></span></p>
<p>ಇದೆಲ್ಲಾ ಓದಿ, ಓದಿ ಬೇಜಾರಾಗಿ ಅವನ ಕೆಲವು ಹಾಡುಗಳ ವಿಡಿಯೊ ಸುಮ್ಮನೆ ನೋಡುತ್ತಾ ಕೂತಿದ್ದೆ. ಜಾಕ್ಸನ್ ಚೆಹರೆ ಬದಲಾಗುತ್ತಾ ಹೋಗಿದ್ದನ್ನು ಬಿಂಬಿಸುವ ಬಿಬಿಸಿ ವೀಡಿಯೊ ನೋಡುತ್ತಿದ್ದಾಗ (<a href="http://news.bbc.co.uk/2/hi/entertainment/8121391.stm">http://news.bbc.co.uk/2/hi/entertainment/8121391.stm</a>) ನನ್ನ ೯ ವರ್ಷದ ಮಗಳು ತಾನೂ ಕುತೂಹಲದಿಂದ ನನ್ನ ಜೊತೆ ನೋಡತೊಡಗಿದಳು. ಮುಗಿದ ಮೇಲೆ ತುಂಬಾ ಆಶ್ಚರ್ಯದಿಂದ &#8220;ಅಷ್ಟು ಕ್ಯೂಟ್ ಆಗಿದ್ದ ಹುಡುಗ ಇಷ್ಟು ದೆವ್ವದ ಥರ ಆಗಿದ್ದು ಹೇಗಮ್ಮ?&#8221; ಅಂತ ಕೇಳಿದಳು. ನನಗೆ ಥಟ್ಟನೆ ನೆನಪಾದದ್ದು ಕೆ.ವಿ.ಅಯ್ಯರ್ ಅವರ &#8220;ರೂಪದರ್ಶಿ&#8221;. ಆ ಕಾದಂಬರಿಯಲ್ಲಿ ಮೈಕೆಲ್ ಏಂಜಲೋ ಬಾಲ ಏಸುವಿನ ಚಿತ್ರ ಬರೆಯಲು ಕರೆತಂದ ರೂಪದರ್ಶಿಯೇ ಕೊನೆಗೆ  ಜೂಡಾಸ್ ಚಿತ್ರ ಬರೆಯುವಾಗಲೂ ರೂಪದರ್ಶಿಯಾಗಿ ಒದಗುತ್ತಾನೆ.</p>
<p>ಈಗ ನಲವತ್ತರ ಆಸುಪಾಸಿನಲ್ಲಿರುವ ಬಹಳ ಜನರಿಗೆ ಜಾಕ್ಸನ್ nostalgiaಯದ ಒಂದು ಅಂಗ. ನನ್ನ ಗಂಡ ತಾನು ಮೊಟ್ಟ ಮೊದಲು public ಆಗಿ ನೃತ್ಯ ಮಾಡಿದ್ದು &#8220;Beat It&#8221; ಹಾಡಿಗೆ ಅಂತ ನೆನೆಸಿಕೊಳ್ಳುತ್ತಾ ಇದ್ದ. ನಾನು ಮತ್ತು ನನ್ನ ತಮ್ಮ ಮೊದಲ ಬಾರಿ ಜಾಕ್ಸನ್ನಿನ ಈ ಹಾಡು ಕೇಳಿದಾಗ ಆಗ ತಾನೆ ಬೆಂಗಳೂರಿಗೆ ಬಂದು ಕಣ್ಕಣ್ಣು ಬಿಡ್ತಾ ಇದ್ದೆವು. ನಮಗೆ ಇವನ ಅಮೇರಿಕನ್ accentನಲ್ಲಿ &#8220;ಬೀಟ್ ಇಟ್&#8221; ಅನ್ನುವುದು ಥೇಟ್ &#8220;ಪೀಡೆ&#8221; ಅನ್ನುವ ಹಾಗೆ ಕೇಳಿಸಿ, ಇವನ್ಯಾಕೆ &#8220;ಪೀಡೆ, ಪೀಡೆ&#8221; ಅಂತ ಹಾಡ್ತಾನೆ ಅಂತ ಅನ್ನಿಸಿತ್ತು. (ಈಗಲೂ ಬೇಕಾದರೆ ಕನ್ನಡದ ಕಿವಿಯಿಂದ ಈ ಹಾಡು ಕೇಳಿ, ನಿಮಗೂ ಹಾಗೇ ಕೇಳಿಸೀತು!) ಯಾರಿಗಾದರೂ ಕೇಳಿದರೆ ಅವರು ನಮ್ಮನ್ನು ಗುಗ್ಗು ಅಂದುಕೊಳ್ಳಬಹುದು ಅನ್ನುವ ಭಯಕ್ಕೆ ನಮ್ಮನಮ್ಮಲ್ಲೇ ಮಾತಾಡಿಕೊಂಡು ಸುಮ್ಮನಾಗಿಬಿಟ್ಟೆವು.</p>
<p>ಆ ಪದಗಳು ಏನು ಅಂತ ನಮಗೆ ಅರ್ಥ ಆಗಿದ್ದು ಬಹಳ ನಂತರದಲ್ಲಿಯೇ ಆದರೂ ನಮಗೆ ಜಾಕ್ಸನ್ ಆಗಲೆ ಹತ್ತಿರದವನಾಗಿದ್ದ. ಈತನ ವಿಧವಿಧ ತಿಕ್ಕಲುಗಳು, ಇವನ ಸಂಗೀತ-ನೃತ್ಯದ ಸಮ್ಮೋಹನ ಕಲೆ ಮತ್ತು MTV, pepsi ಇತ್ಯಾದಿ ವಾಣಿಜ್ಯ ಉದ್ದಿಮೆಗಳು ಕೈಕೈ ಹಿಡಿದು ನಡೆದ ರೀತಿ ಇತ್ಯಾದಿಗಳ ಬಗ್ಗೆ ನಾವು ಆಗ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆದರೆ ಯಾರಾದರೂ ಚೆನ್ನಾಗಿ western ಶೈಲಿ ನೃತ್ಯ ಮಾಡಿದರೆ &#8221;ಏನವನು ಮೈಕೆಲ್ ಜಾಕ್ಸನ್ ಅಂದುಕೊಂಡಿದ್ದಾನ?&#8221; ಅಂತ ಕನ್ನಡದ ಕುಲಪುತ್ರರಾದ ನಾವು ಹೊಟ್ಟೆಕಿಚ್ಚಿನಿಂದ ಹೇಳುವಷ್ಟು ಅವನು ನಮ್ಮ ಭಾಷೆಯ ಭಾಗವಾಗಿದ್ದ. ಪ್ರಭುದೇವ ಮತ್ತು ಅವನಷ್ಟು ಪ್ರಸಿದ್ಧಿಗೆ ಬರದ ಅನೇಕ ನೃತ್ಯಗಾರರ eternal inspiration ಜಾಕ್ಸನ್ನೇ ಅನ್ನುವದನ್ನು ಯಾರೂ ಅಲ್ಲಗಳೆಯುವಂತಿಲ್ಲ. ನಮ್ಮ ೮೦ರ ದಶಕದ ಸಿನೆಮಾ ನೃತ್ಯಗಳಲ್ಲಿ ಜಾಕ್ಸನ್ನನ ಛಾಪು ಗಾಢವಾಗಿಯೇ ಕಾಣುತ್ತದೆ. ಮೊನ್ನೆ ನಮ್ಮ ಯಾವುದೋ ಕನ್ನಡ ವಾಹಿನಿಯಲ್ಲಿ ಬರುವ &#8220;ಕುಣಿಯೋಣು ಬಾರ&#8221; ಎಂಬ ಮಕ್ಕಳ ಡಾನ್ಸ್ ಸ್ಫರ್ಧೆ ನೋಡುವಾದ ಈಗಲೂ ಜಾಕ್ಸನ್ ಶೈಲಿ ನಮ್ಮನ್ನು ಎಷ್ಟು ಆವರಿಸಿದೆ ಅನ್ನಿಸಿತು.</p>
<p>ಸಂಗೀತವನ್ನು ಕಿವಿಗಲ್ಲ ಕಣ್ಣಿಗೆ ಉಣಬಡಿಸಬಹುದು ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟವನೇ ಜಾಕ್ಸನ್. ಬರೀ ಜಾಕ್ಸನ್ ಅನ್ನುವಂತೆಯೂ ಇಲ್ಲ. MTV ಆಗ ತಾನೆ ಜನಪ್ರಿಯವಾಗುತ್ತಿದ್ದ ಆ ಸಂದರ್ಭದಲ್ಲಿ ಜಾಕ್ಸನ್ನನ್ನ ನೃತ್ಯ-ಸಂಗೀತಗಳ ಮಿಶ್ರಣ ನ ಭೂತೊ-ನ ಭವಿಷ್ಯತಿ ಅನ್ನುವ ಮಟ್ಟಿನ ಪ್ರಚಾರ, ದುಡ್ಡಿನ ಸುರಿಮಳೆಯನ್ನು ಕಂಡಿತು. ಇದೇ ಕಾರಣಕ್ಕೆ ಅವನನ್ನು &#8220;musician&#8221; ಅನ್ನಬಾರದು &#8220;performer&#8221; ಅನ್ನಬೇಕು ಅನ್ನುವ ವಾದವೂ ಇದೆ. ಜಾಕ್ಸನ್ ಹಾಡುಗಳನ್ನು ತಾನೇ compose ಮಾಡುತ್ತಿರಲಿಲ್ಲ. ಅವನ ಶೋಗಳಲ್ಲಿ ಅವನ moonwalk, ಲೈಟುಗಳು, trickಗಳು ಹಾಡಿನಷ್ಟೆ ಬಹಳ ಮುಖ್ಯ. ಅವನನ್ನು performer ಅಂತಲೇ ಕರೆಯಿರಿ, ಯಾವತ್ತೂ commerce ಕೈ ಗಟ್ಟಿ ಹಿಡಿದೇ ನರ್ತಿಸಿದ ಕಲಾವಿದ  ಅಂತಲೇ ಅನ್ನಿ. ಈ ಯಾವ analysis ಕೂಡ ಇವನು ಸ್ಲಮ್ ಬಾಲಕರಿಂದ ಹಿಡಿದು ನಮ್ಮ ಬಾಲಿವುಡ್ ನೃತ್ಯ ನಿರ್ದೇಶಕರವರೆಗೆ ಎಲ್ಲರನ್ನೂ ಸಮ್ಮೋಹನಗೊಳಿಸಿದವನು ಎಂಬ ಸತ್ಯವನ್ನು ಒರೆಸಿ ಹಾಕುವುದಿಲ್ಲ.</p>
<p>ಎಂತಹ superhuman success ಕತೆ ಕೊನೆಗೆ ಆರೋಗ್ಯ, ಮನಸ್ಸು, ದುಡ್ಡು ಎಲ್ಲವೂ ಸರ್ವನಾಶ ಆಗಿ ಹೋದ ಸ್ಥಿತಿ ತಲುಪಿದ್ದು ಯಾಕೆ? ಹೇಗೆ?</p>
<p>ಜಾಕ್ಸನ್ ಮತ್ತೆ ಮತ್ತೆ ತನ್ನ ಬಾಲ್ಯದ ಕತೆ ಹೇಳಿಕೊಂಡಿದ್ದಾನೆ. ಅವನ working class ಅಪ್ಪ ತನ್ನ ಮಕ್ಕಳ ಸಂಗೀತದ ಪ್ರತಿಭೆಯನ್ನು ಗುರುತಿಸಿ ಅವರನ್ನು ಮುಂದೆ ತರಬೇಕೆಂಬ ಒಂದೇ ಹಂಬಲದಿಂದ ಅವರನ್ನು ಹಗಲು-ರಾತ್ರಿ ತಾಲೀಮ್ ಮಾಡಿಸುತ್ತಿದ್ದ. ತುಂಬ ಪುಟ್ಟ ಹುಡುಗನಾಗಿದ್ದಾಗಲೇ performer ಆಗಿಬಿಟ್ಟ ಇವನಿಗೆ ಬಾಲ್ಯ ಅಂತಲೇ ಇರಲಿಲ್ಲ. ಅವನ ನಂತರದ ಅನೇಕ ತಿಕ್ಕಲುಗಳಿಗೆ &#8212; ಉದಾಹರಣೆಗೆ Neverland ಅನ್ನುವ ಕೋಟೆ ಕಟ್ಟಿಕೊಂಡು ತಾನು ಪೀಟರ್ ಪ್ಯಾನ್ ಅನ್ನುವ ಭ್ರಮೆಯಲ್ಲಿ ಬದುಕಿದ್ದು, ತನ್ನ ದನಿ, ಚಹರೆಗಳೆರಡರಲ್ಲೂ ಬಾಲ್ಯದ ಲಕ್ಷಣಗಳನ್ನು ಉಳಿಸಿಕೊಂಡಿದ್ದು, ಮಕ್ಕಳ ಜೊತೆ ಮಲಗಿ paedophile ಎಂಬ ನಿಂದನೆ ಎದುರಿಸಿದ್ದು  ಹೀಗೆ ನೂರಾರು &#8212; ಇವನ ಎಡವಟ್ಟು ಬಾಲ್ಯವೇ ಕಾರಣ ಎಂಬುವವರಿದ್ದಾರೆ.</p>
<p>ಹಾಗಂತ ಹೇಳಿ ಬಿಟ್ಟುಬಿಡುವುದು ಸುಲಭ. ಅವನೇನೂ ಬಾಯಲ್ಲಿ ಬೆರಳಿಟ್ಟರೆ ಕಚ್ಚಲು ಬರದ ಮೂರ್ಖನೂ ಆಗಿರಲಿಲ್ಲ. ಹಾಡುಗಾರ ಮಾತ್ರವಲ್ಲದೆ ಒಂದು ಕಾಲದಲ್ಲಿ ಒಳ್ಳೆ businessman ಆಗಿದ್ದವನು ಇವನು. ೮೦ ದಶಕದ ಅಂತ್ಯದ ಹೊತ್ತಿಗೆ ಇವನ ತಾರವರ್ಚಸ್ಸು ಕಡಿಮೆಯಾದ ಹಾಗೆ ಒಂದು ಕಡೆ business ಬಿದ್ದು ಹೋದರೆ ಇನ್ನೊಂದೆಡೆ ಇವನ ಅನೇಕಾನೇಕ ಹುಚ್ಚುಗಳೂ ಪರಾಕಾಷ್ಠೆ ಮುಟ್ಟತೊಡಗಿದವು. ಒಂದು ಕಾಲದಲ್ಲಿ ಪ್ರಚಾರಕ್ಕಾಗಿ ಬೇಕಂತಲೇ tabloidಗಳಿಗೆ ಆಹಾರ ಒದಗಿಸುತ್ತಿದ್ದ ಜಾಕ್ಸನ್ನಿಗೆ ತನಗೆ ಸಾಕೆನ್ನಿಸಿದಾಗ ಅವುಗಳ ಬೆನ್ನು ಬಿಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲೇ ಇಲ್ಲ. ಇದು ಯಾವ ಮಟ್ಟಕ್ಕೆ ತಲುಪಿತೆಂದರೆ ಜಾಕ್ಸನ್ ಬಗ್ಗೆ ಪುಂಕಾನುಪುಂಕವಾಗಿ ಬರುತ್ತಿದ್ದ ಸುದ್ದಿಗಳಲ್ಲಿ ನಿಜ ಎಲ್ಲಿ ಅಡಗಿದೆ ಎನ್ನುವ ಪ್ರಶ್ನೆಯೇ ಕಷ್ಟವಾಯಿತು. (ಸತ್ತ ಮೇಲೂ ಇದೇ ಪರಿಸ್ಥಿತಿ ಇದೆ!)</p>
<p>ಅದರಂತೆಯೇ ಅವನ ಬದಲಾಗುತ್ತಾ ಹೋದ ಮುಖ ಮುಖವೇ ಅಥವಾ ಮುಖವಾಡವೇ ಅನ್ನುವ ಪ್ರಶ್ನೆಯೂ ಪ್ರಶ್ನೆಯಾಗಿಯೇ ಹೋಯಿತು. ನಿಜವಾಗಿಯೂ vitiligo ರೋಗ ಬಚ್ಚಿಡಲಿಕ್ಕೆ ಅವನು ಮೊದಲ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾ ಅಥವಾ ಅವನ ಒಳಗೆ ತನ್ನ ಬಣ್ಣದ ಬಗ್ಗೆಯೇ ಅಡಗಿದ್ದ ದ್ವೇಷದಿಂದಲಾ? ಗೊತ್ತಿಲ್ಲ. ಒಟ್ಟಿನಲ್ಲಿ ಅವನ ಚರ್ಮದ ಬಣ್ಣ ಬಿಳಿಯಾಯಿತು, ಮೂಗು ಮತ್ತು ಗಲ್ಲ ಇನ್ನೇನು ಬಿದ್ದೇ ಹೋಗುತ್ತದೇನೋ ಅನ್ನುವಷ್ಟು ಮಟ್ಟಿಗೆ ಚೂಪಾಯಿತು. ನೂರಾರು ಶಸ್ತ್ರಚಿಕಿತ್ಸೆಗಳಾದವು, ಅವುಗಳ ಕಲೆ ಬಚ್ಚಿಡುವುದಕ್ಕೆ ಮತ್ತಷ್ಟು ಶಸ್ತಚಿಕಿತ್ಸೆಗಳಾದವು. ನೋವುಗಳನ್ನು ನುಂಗುವುದಕ್ಕೆ ತರಾವರಿ ಮಾತ್ರೆಗಳನ್ನು ನುಂಗತೊಡಗಿದ&#8230; ಕರಿಯ ಕ್ಯೂಟ್ ಹುಡುಗ ಬೆಳ್ಳಗಾಗುತ್ತಾ, ಆಗುತ್ತಾ ಕೊನೆಗೆ ಮೋಹಿನಿ ದೆವ್ವದಂತೆ ಆದ.</p>
<p>ನಮ್ಮನಮ್ಮ ತಲೆಯೊಳಗಣ ದೆವ್ವಗಳು, ಜೀವನದ ವೈಚಿತ್ರ್ಯಗಳು, ಏಳುಬೀಳುಗಳು, ಇದರೆಲ್ಲದರೊಳಗೆ ಮಿಳಿತವಾದ ವಾಣಿಜ್ಯ ಉದ್ಯಮ ಎಲ್ಲಾ ಸೇರಿ ಮನುಷ್ಯನ ಚೆಹರೆಯನ್ನು (ಜಾಕ್ಸನ್ನಿನ caseನಲ್ಲಿ ಮುಖದ ಚೆಹರೆಯೂ ಸೇರಿದಂತೆ) ಹೇಗೆ ಸಂಪೂರ್ಣ ಬದಲಿಸಿಬಿಡಬಲ್ಲವು ಅಲ್ಲವಾ?! ಒಮ್ಮೆ ಬೇಕಂತ ಸುತ್ತ ಕಟ್ಟಿಕೊಂಡ image, ಸಾಮ್ರಾಜ್ಯ, ವಾಣಿಜ್ಯ ವಹಿವಾಟುಗಳ ಬಲೆ ಎಲ್ಲ ಅವನನ್ನೇ ನುಂಗತೊಡಗಿದವು. ಒಂಥಾರಾ ಇದು ಹುಲಿ ಏರುವ ಸಮಾಚಾರ. ಹತ್ತಿದ ಮೇಲೆ ಇಳಿದರೆ ಹುಲಿಯ ಆಹಾರ ಆಗಬೇಕು. ಪ್ರಸಿದ್ಧಿ ಸಂಪೂರ್ಣ ನೆಲದ ಹಂಗು ತೊರೆದು superhuman ಹಂತ ತಲುಪಿದಾಗ ಬಾಲಏಸು ಜೂಡಾಸ್ ಆಗುವುದು ಅನಿವಾರ್ಯವೇ ಇರಬಹುದು.</p>
<p>P.S:  ಮೈಕೆ ಜಾಕ್ಸನ್ ಬಗ್ಗೆ ಬಂದ ಅನೇಕ ಲೇಖನಗಳಲ್ಲಿ ನನಗೆ ಇಷ್ಟವಾದ ಎರಡು Guardian ಲೇಖನದ ಲಿಂಕ್ ಇಲ್ಲಿದೆ:  <a href="http://www.guardian.co.uk/music/2009/jun/26/michael-jackson-death-in-la">http://www.guardian.co.uk/music/2009/jun/26/michael-jackson-death-in-la</a> ಮತ್ತು <a href="http://www.hindu.com/2009/06/30/stories/2009063055970900.htm">http://www.hindu.com/2009/06/30/stories/2009063055970900.htm</a></p>
  <a rel="nofollow" href="http://feeds.wordpress.com/1.0/gocomments/bageshree.wordpress.com/162/"><img alt="" border="0" src="http://feeds.wordpress.com/1.0/comments/bageshree.wordpress.com/162/" /></a> <a rel="nofollow" href="http://feeds.wordpress.com/1.0/godelicious/bageshree.wordpress.com/162/"><img alt="" border="0" src="http://feeds.wordpress.com/1.0/delicious/bageshree.wordpress.com/162/" /></a> <a rel="nofollow" href="http://feeds.wordpress.com/1.0/gostumble/bageshree.wordpress.com/162/"><img alt="" border="0" src="http://feeds.wordpress.com/1.0/stumble/bageshree.wordpress.com/162/" /></a> <a rel="nofollow" href="http://feeds.wordpress.com/1.0/godigg/bageshree.wordpress.com/162/"><img alt="" border="0" src="http://feeds.wordpress.com/1.0/digg/bageshree.wordpress.com/162/" /></a> <a rel="nofollow" href="http://feeds.wordpress.com/1.0/goreddit/bageshree.wordpress.com/162/"><img alt="" border="0" src="http://feeds.wordpress.com/1.0/reddit/bageshree.wordpress.com/162/" /></a> <img alt="" border="0" src="http://stats.wordpress.com/b.gif?host=bageshree.wordpress.com&blog=3977069&post=162&subd=bageshree&ref=&feed=1" /></div>]]></content:encoded>
			<wfw:commentRss>http://bageshree.wordpress.com/2009/07/05/%e0%b2%ae%e0%b3%88%e0%b2%95%e0%b3%86%e0%b2%b2%e0%b3%8d-%e0%b2%8e%e0%b2%82%e0%b2%ac-%e0%b2%ae%e0%b2%be%e0%b2%82%e0%b2%a4%e0%b3%8d%e0%b2%b0%e0%b2%bf%e0%b2%95%e0%b2%a8%e0%b2%bf%e0%b2%97%e0%b3%86/feed/</wfw:commentRss>
		<slash:comments>6</slash:comments>
	
		<media:content url="http://1.gravatar.com/avatar/5f2a5091a45da876c2ac1f5531cdc8b6?s=96&#38;d=identicon&#38;r=G" medium="image">
			<media:title type="html">Bageshree</media:title>
		</media:content>
	</item>
		<item>
		<title>ನೆರುಡಾನನ್ನು ಅನುಸರಿಸಿ</title>
		<link>http://bageshree.wordpress.com/2009/06/18/%e0%b2%92%e0%b2%82%e0%b2%a6%e0%b3%81-%e0%b2%a8%e0%b3%86%e0%b2%b0%e0%b3%81%e0%b2%a1%e0%b2%be-%e0%b2%aa%e0%b2%a6%e0%b3%8d%e0%b2%af/</link>
		<comments>http://bageshree.wordpress.com/2009/06/18/%e0%b2%92%e0%b2%82%e0%b2%a6%e0%b3%81-%e0%b2%a8%e0%b3%86%e0%b2%b0%e0%b3%81%e0%b2%a1%e0%b2%be-%e0%b2%aa%e0%b2%a6%e0%b3%8d%e0%b2%af/#comments</comments>
		<pubDate>Thu, 18 Jun 2009 11:59:56 +0000</pubDate>
		<dc:creator>Bageshree</dc:creator>
				<category><![CDATA[Uncategorized]]></category>

		<guid isPermaLink="false">http://bageshree.wordpress.com/?p=147</guid>
		<description><![CDATA[(ಈ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಹಿಗ್ಗಾಮಗ್ಗಾ ಹೊಡೆದಾಟ ಟಿವಿಯಲ್ಲಿ ನೋಡಿ ಇದರ ಹದಿನೈದು ವರ್ಷದ ಹಿಸ್ಟರಿ ಬಗ್ಗೆ ಸ್ವಲ್ಪ ಓದಿಕೊಳ್ಳಬೇಕು, ಬ್ಲಾಗಲ್ಲಿ ಬರೀಬೇಕು ಅಂತ ಕೂತವಳ ಕಣ್ಣಿಗೆ ನೆರುಡಾ ಪದ್ಯಗಳು ಬಿದ್ದು ಈಗ ಕತೆ ಬೇರೆ ಆಗಿದೆ. ಈ ಸ್ಪಾನಿಶ್ ಕವಿಗಳು ರೆವಲ್ಯುಶನ್ನಿನಿಂದ ಹಿಡಿದು ರೊಮಾನ್ಸಿನವರೆಗೆ ಎಲ್ಲವನ್ನೂ ಇಷ್ಟು ಲಿರಿಕಲ್ಲಾಗಿ ಹೇಗೆ ಬರೀತಾರಪ್ಪ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡೇ ಎರಡು ರೂಪಾಂತರದ ಪ್ರಯತ್ನ. ನಾನು original ಪದ್ಯಗಳ ಜೊತೆ ಸಿಕ್ಕಾಪಟ್ಟೆ ಜಾಸ್ತಿಯೇ liberty ತೆಗೆದುಕೊಂಡಿರುವುದರಿಂದ ರೂಪಾಂತರ ಅಥವಾ ನೆರುಡಾ ಪ್ರೇರಿತ ಅನ್ನುವುದೇ [...]<img alt="" border="0" src="http://stats.wordpress.com/b.gif?host=bageshree.wordpress.com&blog=3977069&post=147&subd=bageshree&ref=&feed=1" />]]></description>
			<content:encoded><![CDATA[<div class='snap_preview'><br /><p>(ಈ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಹಿಗ್ಗಾಮಗ್ಗಾ ಹೊಡೆದಾಟ ಟಿವಿಯಲ್ಲಿ ನೋಡಿ ಇದರ ಹದಿನೈದು ವರ್ಷದ ಹಿಸ್ಟರಿ ಬಗ್ಗೆ ಸ್ವಲ್ಪ ಓದಿಕೊಳ್ಳಬೇಕು, ಬ್ಲಾಗಲ್ಲಿ ಬರೀಬೇಕು ಅಂತ ಕೂತವಳ ಕಣ್ಣಿಗೆ ನೆರುಡಾ ಪದ್ಯಗಳು ಬಿದ್ದು ಈಗ ಕತೆ ಬೇರೆ ಆಗಿದೆ. ಈ ಸ್ಪಾನಿಶ್ ಕವಿಗಳು ರೆವಲ್ಯುಶನ್ನಿನಿಂದ ಹಿಡಿದು ರೊಮಾನ್ಸಿನವರೆಗೆ ಎಲ್ಲವನ್ನೂ ಇಷ್ಟು ಲಿರಿಕಲ್ಲಾಗಿ ಹೇಗೆ ಬರೀತಾರಪ್ಪ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡೇ ಎರಡು ರೂಪಾಂತರದ ಪ್ರಯತ್ನ. ನಾನು original ಪದ್ಯಗಳ ಜೊತೆ ಸಿಕ್ಕಾಪಟ್ಟೆ ಜಾಸ್ತಿಯೇ liberty ತೆಗೆದುಕೊಂಡಿರುವುದರಿಂದ ರೂಪಾಂತರ ಅಥವಾ ನೆರುಡಾ ಪ್ರೇರಿತ ಅನ್ನುವುದೇ ಲೇಸು. ಮಸೂದೆ ಮತ್ತೊಮ್ಮೆ.)</p>
<p><span id="more-147"></span></p>
<p style="text-align:left;"><strong>1. ಬೆಸ್ತನ ಹಾಡು</strong></p>
<p style="text-align:left;">ನಡುಗಡ್ಡೆ, ಸುತ್ತ ಕಡಲು.</p>
<p style="text-align:left;">ಉಕ್ಕಿ ಉಕ್ಕುಕ್ಕೊ ಒಡಲು.</p>
<p style="text-align:left;"> </p>
<p style="text-align:left;">ಈ ಗಳಿಗೆ ಹೌದು</p>
<p style="text-align:left;">ಮತ್ತೊಂದು ಗಳಿಗೆ ಅಲ್ಲ</p>
<p style="text-align:left;">ಹೌದು ಅಲ್ಲ, ಹೌದು ಅಲ್ಲಲ್ಲ</p>
<p style="text-align:left;">ಕೂಗುತಿದೆ ನೀಲಿ ಕೊರಳು.</p>
<p style="text-align:left;"> </p>
<p style="text-align:left;">ಸುಮ್ಮನಿರಲಾರದಲೆ</p>
<p style="text-align:left;">ಬುಸುಗುಡುತ ಉಸಿರುತಿದೆ</p>
<p style="text-align:left;">ಅಲ್ಲಲ್ಲಿ ಇಲ್ಲಿಲ್ಲಿ</p>
<p style="text-align:left;">ನನ್ನ ಹೆಸರು.</p>
<p style="text-align:left;"> </p>
<p style="text-align:left;">ಬಂಡೆಗೊಮ್ಮೆ ಫಟೀರ್ ಹೊಡೆದು</p>
<p style="text-align:left;">ಮತ್ತೆ ಮುನಿದ ಕೆನ್ನೆಯ</p>
<p style="text-align:left;">ನೇವರಿಸಿ, ಮುತ್ತಿಟ್ಟು,</p>
<p style="text-align:left;">ನೆನೆಸಿ, ಲಲ್ಲೆಗರೆಯುತಿದೆ.</p>
<p style="text-align:left;"> </p>
<p style="text-align:left;">ಏಳು ನಾಲಿಗೆಗಳ ಹಸಿರು ಪ್ರಾಣಿ&#8230;</p>
<p style="text-align:left;">ಇದನು ಕುನ್ನಿಯೆನ್ನಿ, ಹುಲಿಯೆನ್ನಿ </p>
<p style="text-align:left;">ಎದೆ ತಟ್ಟಿ ತನ್ನ ಹೆಸರ ತಾನೇ</p>
<p style="text-align:left;">ಉಗ್ಗುಗ್ಗಿ ಹೇಳುತಿರುವ ಕಡಲೇ ಅನ್ನಿ.</p>
<p style="text-align:left;"> </p>
<p style="text-align:left;">ಓ ಕಡಲೇ, ನನ್ನ ಸಖ ಕಡಲೇ,</p>
<p style="text-align:left;">ಕೋಪತಾಪ, ನೀರ ಭರ</p>
<p style="text-align:left;">ಎಲ್ಲ ಕಟ್ಟಿಟ್ಟು</p>
<p style="text-align:left;">ಅಭಯ ಹಸ್ತವ ತೋರು.</p>
<p style="text-align:left;"> </p>
<p style="text-align:left;">ಬರಿಯ ಬೆಸ್ತರು ನಾವು.</p>
<p style="text-align:left;">ತಡಿಯ ಬಡಪಾಯಿಗಳು.</p>
<p style="text-align:left;">ಕೊರೆವ ಚಳಿ, ಸುಡುವ ಹಸಿವು</p>
<p style="text-align:left;">ತಂದಿಟ್ಟ ವೈರಿ ನೀನು.</p>
<p style="text-align:left;"> </p>
<p style="text-align:left;">ಛಡಿ ಏಟು, ಕರ್ಕಶ ಬೈಗುಳಕ್ಕೆ</p>
<p style="text-align:left;">ಸ್ವಲ್ಪ ತೆರೆ ಎಳೆದು</p>
<p style="text-align:left;">ನಿನ್ನ ಹಸಿರು ಖಜಾನೆ ಧಾರಾಳ ತೆರೆ,</p>
<p style="text-align:left;">ಮೊಗೆಮೊಗೆದು ಕೊಡು ಹೊಳೆವ ಬೆಳ್ಳಿ.</p>
<p style="text-align:left;"> </p>
<p style="text-align:left;">ಸಧ್ಯಕ್ಕೆ, ದಿನದ ಊಟಕ್ಕೆ, ಒಂದಷ್ಟು ಮೀನು ಕೊಡು.</p>
<p style="text-align:left;"> </p>
<p style="text-align:left;"><strong>2.</strong> <strong>ಹಿಂಡಿ ಹಿಪ್ಪೆಯಾದ ಆತ್ಮ</strong></p>
<p style="text-align:left;"><strong> </strong></p>
<p style="text-align:left;">ಕಳೆದು ಹೋಗುತ್ತಲಿದೆ ಮತ್ತೊಂದು ಮುಸ್ಸಂಜೆ</p>
<p style="text-align:left;">ಇಂದು ನಾವು ಕೈಕೈ ಹಿಡಿದು ನಡೆದದ್ದು ಯಾರೂ ನೋಡಲಿಲ್ಲ.</p>
<p style="text-align:left;"> </p>
<p style="text-align:left;">ರಾತ್ರಿಯ ನೀಲಿ ಕೌದಿ ನಿಧಾನವಾಗಿ ಭೂಮಿ ಹೊದ್ದ ಹಾಗೆ</p>
<p style="text-align:left;">ದೂರದ ಬೆಟ್ಟದ ಮೇಲೆ ಸೂರ್ಯನ ಕೊನೆಯ ಬಂಗಾರದೋಕುಳಿ.</p>
<p style="text-align:left;"> </p>
<p style="text-align:left;">ಒಮ್ಮೆಮ್ಮೆ ಸೂರ್ಯ ನನ್ನ ಮುಷ್ಟಿಯಲಿ ಸಿಕ್ಕಿ ಸುಡುವುದುಂಟು</p>
<p style="text-align:left;">ಹಿಂಡಿದ ಆತ್ಮದ ಕಡುಗಪ್ಪು ದುಃಖದಲಿ ನಿನ್ನ ನೆನಪು ತೋಯುವುದುಂಟು.</p>
<p style="text-align:left;"> </p>
<p style="text-align:left;">ಅಂದು ಎಲ್ಲಿದ್ದೆ ನೀನು? ಯಾರು ನಿನ್ನ ಜೊತೆಗಿದ್ದರು? ಏನು ಮಾತಾಯಿತು?</p>
<p style="text-align:left;">ನೂರು ಕಡಲಾಚೆ ನೀನಿದ್ದಾಗ ಹೀಗೆ ಪ್ರೀತಿ ಉಕ್ಕಿ ಬರುವುದು ಯಾಕೆ?</p>
<p style="text-align:left;"> </p>
<p style="text-align:left;">ಓದದ ಪುಸ್ತಕ ಮಗುಚಿ ಬಿದ್ದು ಒದ್ದಾಡುತ್ತಿದೆ ಒಂದು ಮೂಲೆಯಲಿ</p>
<p style="text-align:left;">ಒದೆ ತುಂದು ಮಲಗಿದ ನಾಯಿಯಂತೆ ಕಾಲ ಬಳಿ ಹಳೆಯ ಶಾಲು.</p>
<p style="text-align:left;"> </p>
<p style="text-align:left;">ನೀನು ಮೆಲ್ಲಮೆಲ್ಲಗೆ ಹೊರಟು ಹೋಗುವುದೇ ಹೀಗೆ</p>
<p style="text-align:left;">ಪ್ರತಿಮೆಗಳನಳಿಸುತ್ತಾ ಸಂಜೆ ಮುಸ್ಸಂಜೆಯಾಗುವ ಹಾಗೆ.</p>
<p style="text-align:left;"> </p>
  <a rel="nofollow" href="http://feeds.wordpress.com/1.0/gocomments/bageshree.wordpress.com/147/"><img alt="" border="0" src="http://feeds.wordpress.com/1.0/comments/bageshree.wordpress.com/147/" /></a> <a rel="nofollow" href="http://feeds.wordpress.com/1.0/godelicious/bageshree.wordpress.com/147/"><img alt="" border="0" src="http://feeds.wordpress.com/1.0/delicious/bageshree.wordpress.com/147/" /></a> <a rel="nofollow" href="http://feeds.wordpress.com/1.0/gostumble/bageshree.wordpress.com/147/"><img alt="" border="0" src="http://feeds.wordpress.com/1.0/stumble/bageshree.wordpress.com/147/" /></a> <a rel="nofollow" href="http://feeds.wordpress.com/1.0/godigg/bageshree.wordpress.com/147/"><img alt="" border="0" src="http://feeds.wordpress.com/1.0/digg/bageshree.wordpress.com/147/" /></a> <a rel="nofollow" href="http://feeds.wordpress.com/1.0/goreddit/bageshree.wordpress.com/147/"><img alt="" border="0" src="http://feeds.wordpress.com/1.0/reddit/bageshree.wordpress.com/147/" /></a> <img alt="" border="0" src="http://stats.wordpress.com/b.gif?host=bageshree.wordpress.com&blog=3977069&post=147&subd=bageshree&ref=&feed=1" /></div>]]></content:encoded>
			<wfw:commentRss>http://bageshree.wordpress.com/2009/06/18/%e0%b2%92%e0%b2%82%e0%b2%a6%e0%b3%81-%e0%b2%a8%e0%b3%86%e0%b2%b0%e0%b3%81%e0%b2%a1%e0%b2%be-%e0%b2%aa%e0%b2%a6%e0%b3%8d%e0%b2%af/feed/</wfw:commentRss>
		<slash:comments>10</slash:comments>
	
		<media:content url="http://1.gravatar.com/avatar/5f2a5091a45da876c2ac1f5531cdc8b6?s=96&#38;d=identicon&#38;r=G" medium="image">
			<media:title type="html">Bageshree</media:title>
		</media:content>
	</item>
		<item>
		<title>ಸಲಾಮ್ ಕಮಲಾ</title>
		<link>http://bageshree.wordpress.com/2009/05/31/%e0%b2%b8%e0%b2%b2%e0%b2%be%e0%b2%ae%e0%b3%8d-%e0%b2%95%e0%b2%ae%e0%b2%b2%e0%b2%be/</link>
		<comments>http://bageshree.wordpress.com/2009/05/31/%e0%b2%b8%e0%b2%b2%e0%b2%be%e0%b2%ae%e0%b3%8d-%e0%b2%95%e0%b2%ae%e0%b2%b2%e0%b2%be/#comments</comments>
		<pubDate>Sun, 31 May 2009 13:06:01 +0000</pubDate>
		<dc:creator>Bageshree</dc:creator>
				<category><![CDATA[Uncategorized]]></category>

		<guid isPermaLink="false">http://bageshree.wordpress.com/?p=144</guid>
		<description><![CDATA[ಕಮಲಾ (ದಾಸ್ ಅಲಿಯಾಸ್ ಸುರಯ್ಯ) ಸತ್ತ ಸುದ್ದಿ ಕೇಳಿ ಒಂಥಾರಾ ಮಂಕಾಗಿ ಕೂತಿದ್ದೀನಿ. ಹಾಗಂತ ಈ ಇಂಗ್ಲಿಷ್-ಮಲಯಾಳಿ ಬರಹಗಾರ್ತಿ ನನ್ನ ಫೇವರೇಟ್ ಲೇಖಕಿ ಅಂತ ಹೇಳಲಾರೆ. ಆದರೆ ಈಕೆ ಜೀವನದುದ್ದಕ್ಕೂ ಯಾರಿಗೂ ಕ್ಯಾರೆ ಅನ್ನದೆ, ಅಡಿಗಡಿಗೂ ಮಧ್ಯಮ ವರ್ಗದ ಮಡಿವಂತಿಕೆಗೆ ಚುರಕ್ ಚುರಕ್ ಅಂತ ಶಾಕ್ ಹೊಡೆಸುತ್ತ ತನ್ನದೇ ದಾರಿಯಲ್ಲಿ ನಡೆದ ಪರಿ ಮೆಚ್ಚಬೇಕಾದದ್ದು.
ಮನೆ ಕೆಲಸ ಎಲ್ಲ ಮುಗಿದ ಮೇಲೆ ತರಕಾರಿ ಹೆಚ್ಚುವ ಟೇಬಲ್ಲನ್ನೇ ಬರವಣಿಗೆಯ ಮೇಜು ಮಾಡಿಕೊಂಡು ಬರೆಯಲಿಕ್ಕೆ ಶುರು ಮಾಡಿದ ಕಮಲ ಮೈಚಳಿ ಬಿಟ್ಟು ಬರೆಯುತ್ತಾ ಹೋದದ್ದು, ಜೀವನದುದ್ದಕ್ಕೂ ಒಂದರ [...]<img alt="" border="0" src="http://stats.wordpress.com/b.gif?host=bageshree.wordpress.com&blog=3977069&post=144&subd=bageshree&ref=&feed=1" />]]></description>
			<content:encoded><![CDATA[<div class='snap_preview'><br /><p>ಕಮಲಾ (ದಾಸ್ ಅಲಿಯಾಸ್ ಸುರಯ್ಯ) ಸತ್ತ ಸುದ್ದಿ ಕೇಳಿ ಒಂಥಾರಾ ಮಂಕಾಗಿ ಕೂತಿದ್ದೀನಿ. ಹಾಗಂತ ಈ ಇಂಗ್ಲಿಷ್-ಮಲಯಾಳಿ ಬರಹಗಾರ್ತಿ ನನ್ನ ಫೇವರೇಟ್ ಲೇಖಕಿ ಅಂತ ಹೇಳಲಾರೆ. ಆದರೆ ಈಕೆ ಜೀವನದುದ್ದಕ್ಕೂ ಯಾರಿಗೂ ಕ್ಯಾರೆ ಅನ್ನದೆ, ಅಡಿಗಡಿಗೂ ಮಧ್ಯಮ ವರ್ಗದ ಮಡಿವಂತಿಕೆಗೆ ಚುರಕ್ ಚುರಕ್ ಅಂತ ಶಾಕ್ ಹೊಡೆಸುತ್ತ ತನ್ನದೇ ದಾರಿಯಲ್ಲಿ ನಡೆದ ಪರಿ ಮೆಚ್ಚಬೇಕಾದದ್ದು.<span id="more-144"></span></p>
<p>ಮನೆ ಕೆಲಸ ಎಲ್ಲ ಮುಗಿದ ಮೇಲೆ ತರಕಾರಿ ಹೆಚ್ಚುವ ಟೇಬಲ್ಲನ್ನೇ ಬರವಣಿಗೆಯ ಮೇಜು ಮಾಡಿಕೊಂಡು ಬರೆಯಲಿಕ್ಕೆ ಶುರು ಮಾಡಿದ ಕಮಲ ಮೈಚಳಿ ಬಿಟ್ಟು ಬರೆಯುತ್ತಾ ಹೋದದ್ದು, ಜೀವನದುದ್ದಕ್ಕೂ ಒಂದರ ನಂತರ ಒಂದು ಪ್ರಯೋಗಗಳಿಗೆ ಒಡ್ಡಿಕೊಳ್ಳೂತ್ತಾ, ಅವೆಲ್ಲವನ್ನೂ ಜಗಜ್ಜಾಹೀರು ಮಾಡುತ್ತಾ ಹೋದದ್ದು ಒಂತರ ಸಿನಿಮೀಯ, ರೋಚಕ ಕಥೆ. (ಈಕೆಯ ಇಡೀ ಜೀವನ ಚರಿತ್ರೆ ವಿಕಿಪಿಡಿಯಾದಲ್ಲಿ ಇರುವುದರಿಂದ ಮತ್ತು ಈಕೆ ಸತ್ತ ಸುದ್ದಿ ಬಂದ ಕೂಡಲೆ ಎಲ್ಲರೂ ಇದನ್ನೇ ಕಾಪಿ-ಪೇಸ್ಟ್ ಮಾಡಿ ಹಾಕಿರುವುದರಿಂದ ಇದನ್ನು ಮತ್ತೆ ಇಲ್ಲಿ ಹೇಳುವುದು ಬೇಡ ಅಲ್ಲವಾ?)</p>
<p>ಈಕೆ &#8216;My Story&#8217;ಯಲ್ಲಿ ಹೇಳುವ ಈಕೆಯ ಯೌವ್ವನದ ಬಿಸಿಬಿಸಿ ಕತೆಗಳಿಂದ ಹಿಡಿದು ಇಳಿವಯಸ್ಸಿನಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸಂಪ್ರದಾಯಬದ್ಧರಾದ ಹಿಂದೂ ಹಾಗೂ ಮುಸ್ಲಿಂ ಇಬ್ಬರ ಕೆಂಗಣ್ಣಿಗೆ ಗುರಿಯಾದದ್ದರವರೆಗೆ ಈಕೆಯ ಜೀವನದಲ್ಲಿ ಎಲ್ಲವು ಒಂದು ಥರ sensational. ರಿಯಾಲಿಟಿ ಶೋ ಅನ್ನುವ concept ಇಲ್ಲದ ಕಾಲದಲ್ಲೂ ಒಂತರಹ ಅದೇ ಧಾಟಿಯಲ್ಲಿ ಬದುಕಿದಾಕೆ. ಆದರೆ ಯಾವುದೇ popularity ratingಗೆ ತಲೆ ಬಾಗಿದ ಜೀವವಲ್ಲ. ಕೇರಳಿಗರು &#8220;ವ್ಯಭಿಚಾರಿಣಿ&#8221; ಅಂತ ಹೀಗಳೆದಾಗ ಬಗ್ಗದೆ ಕುಗ್ಗದೆ ಇಂಗ್ಲಿಷ್ ನಲ್ಲಿಯೂ ಬರೆದು ಜೈಸಿಕೊಂಡಾಕೆ. ಒಮ್ಮೆ ಕೃಷ್ಣನಿಗೆ ತಾನು ರಾಧೆಯೆಂದೂ, ಇನ್ನೊಮ್ಮೆ ಧರ್ಮಗಳಿಗೆ ಸಮಸ್ಯೆಗಳನ್ನು ಹುಟ್ಟುಹಾಕುವುದು ಬಿಟ್ಟರೆ ಇನ್ನೇನೂ ಬರುವುದಿಲ್ಲವೆಂದೂ, ಮತ್ತೂ ಒಮ್ಮೆ ಅಲ್ಲಾಹುವಿಗೆ ಸಂಪೂರ್ಣ ಶರಣಾಗಿರುವುದಾಗಿಯೂ ಹೇಳಿದಾಕೆ. ಸ್ತ್ರೀ ಸ್ವಾತಂತ್ರ್ಯದ, ಅದರಲ್ಲೂ ಸ್ತ್ರೀ ಲೈಂಗಿಕ ಸ್ವಾತಂತ್ರ್ಯದ ಹರಿಕಾರಳೇ ಈಕೆ ಎಂದವರಿಗೆ  &#8221;Who listens to feminists? Who wants freedom?&#8221; ಅಂತ ಹೇಳಿ ಸ್ವಲ್ಪ ತಬ್ಬಿಬ್ಬು ಮಾಡಿದಾಕೆ. ರಾಜಕೀಯ ಪಕ್ಷ ಕಟ್ಟಿಯೂ ಒಂದು ಕೈ ನೋಡಿ ಬಿಡೋಣ ಅಂತ ಆ ಪ್ರಯತ್ನವನ್ನೂ ಮಾಡಿದಾಕೆ. ಯಾಕಮ್ಮಾ ಹೀಗೆಲ್ಲ ಒಂದೊಂದು ದಿನ ಒಂದೊಂದು ತರ ಮಾತಾಡ್ತೀಯಲ್ಲ ಅಂತ ಒಬ್ಬ ಸಂದರ್ಶಕಿ ಕೇಳಿದಾಗ &#8220;ಯಾಕೆ ಅಂತ ನನಗೆ ಗೊತ್ತಿಲ್ಲ. ನಾನು ಹಾಗೇ. ನಾನು ಈಗ ಹೇಳುವುದು ಮೊದಲು ಹೇಳುವ ಹಾಗೆ ಇರುವುದಿಲ್ಲ. ಇನ್ನೊಮ್ಮೆ ಹೇಳುವುದು ಈಗ ಹೇಳುತ್ತಿರುವುದಕ್ಕಿಂತ ಬೇರೆಯೇ ಆಗಿರಬಹುದು. ನಾನು ಮತ್ತು ನನ್ನ ನಂಬಿಕೆಗಳು ಬದಲಾಗುತ್ತಿರುತ್ತವೆ&#8221; ಅಂತ ನೇರ ಮಾತುಗಳಲ್ಲಿ ಹೇಳಿಬಿಟ್ಟಾಕೆ!</p>
<p>ಅರವತ್ತರ ದಶಕದಲ್ಲಿ &#8220;ಸ್ತ್ರೀ ಸಹಜ&#8221; ಎಂದು ಕರೆಯಲ್ಪಡುವ ನಾಚಿಕೆ ವೈಯ್ಯಾರಗಳನ್ನು ಬಿಟ್ಟು passionನಿಂದ ಬರೆದ ಈಕೆ ಭಾರತೀಯ ಮಹಿಳಾ ಸಾಹಿತ್ಯದಲ್ಲಿ (ವಿಶೇಷವಾಗೆ ಇಂಗ್ಲಿಷ್ ಪರಂಪರೆಯಲ್ಲಿ) ಒಂದು ಮುಖ್ಯ ಮೈಲಿಗಲ್ಲು ಎನ್ನುವುದದರಲ್ಲಿ ಎರೆಡು ಮಾತಿಲ್ಲ. &#8220;ಮಹಿಳಾ ಸಾಹಿತ್ಯ&#8221; ಎಂಬ categoryಯನ್ನು ಯಾವತ್ತೂ ಇಷ್ಟಪಡದ ಕಮಲಾ &#8220;ಬರವಣಿಗೆಗೆ ಯಾವ ಲಿಂಗಬೇಧ? ಹೆಣ್ಣನ್ನು ಹೆಣ್ಣಾಗಿಸುವ ಅಂಗಗಳಿವೆಯಲ್ಲ ಅವುಗಳಿಂದ ಬರೆಯುತ್ತಾರೇನು ಸ್ತ್ರೀಯರು?&#8221; ಅಂತ ಕೇಳಿದ್ದುಂಟು. ಆದರೆ ಆಕೆಯ ಸುತ್ತಲಿನ controversyಗಳು, sensationಗಳೇ ಒಂದು ರೀತಿಯ image trap ಆಗಿ ಹೋಗಿ ಬರಬರುತ್ತಾ ಬರಹಗಳಲ್ಲಿ ಏಕತಾನತೆ ಬಂದುಹೋಯಿತೇ ಅನ್ನಿಸುತ್ತದೆ. ಈಕೆಯ ಮಲಯಾಳಂ ಬರಹಗಳ ಬಗ್ಗೆ ಗೊತ್ತಿಲ್ಲ. ಆದರೆ ಇಂಗ್ಲಿಷ್ ಬರಹ/ಪದ್ಯಗಳ ಬಗ್ಗೆಯಂತೂ ಹೀಗೆ ಅನ್ನಿಸುತ್ತದೆ.</p>
<p>ಅದೇನೇ ಆಗಲಿ ಕಮಲಾ ದಾಸ್ ಇನ್ನು ಇಲ್ಲ ಅಂದರೆ ಒಂದು bold ಆದ, maverick ಆದ, ಸ್ತ್ರೀ ಸಂವೇದನೆ ಎಂದರೇನು ಅನ್ನುವ ಪ್ರಶ್ನೆಗೆ ಒಂದು ಹೊಸ ಆಯಾಮ ಕೊಟ್ಟ ದನಿ ಉಡುಗಿ ಹೋದಂತೆ. ಆಕೆ ಸಂದರ್ಶನವೊಂದರಲ್ಲಿ ಸಾವಿನ ಬಗ್ಗೆ ಹೇಳಿದ ಮಾತುಗಳನನ್ನು ಓದಿ ಇನ್ನಷ್ಟು ದುಃಖ ಆಗುತ್ತಾ ಇದೆ: &#8220;ನನಗೆ ಈ ದೇಹ ಅನ್ನುವುದು ಅತ್ಯಂತ ಮುಖ್ಯ. ಸತ್ತಾಗ ಈ ಶರೀರ ಒಂದು ಹಿಡಿ ಬೂದಿಯಾಗಿಬಿಡುವುದಲ್ಲವೇ? ಈ ಬದುಕಿನ ಸಂತೋಷ-ದುಃಖಗಳನ್ನೆರಡನ್ನೂ ಸ್ವೀಕರಿಸಿದ ಈ ಶರೀರವನ್ನು ಕಳೆದುಕೊಳ್ಳುವುದೆಂದರೆ&#8230; ನನಗೆ ಆ ಬಗ್ಗೆ ಯೋಚಿಸಿದಾಗಲೇ ದುಃಖವಾಗುತ್ತದೆ.&#8221; ಎಂತಹ ಪ್ರಮಾಣಿಕವಾದ, ಸಖತ್ ಆದ ಮಾತಲ್ಲವಾ?</p>
<p>ಸಲಾಮ್ ಕಮಲಾ!</p>
<p><strong>೩೧/೦೫/೨೦೦೯</strong></p>
  <a rel="nofollow" href="http://feeds.wordpress.com/1.0/gocomments/bageshree.wordpress.com/144/"><img alt="" border="0" src="http://feeds.wordpress.com/1.0/comments/bageshree.wordpress.com/144/" /></a> <a rel="nofollow" href="http://feeds.wordpress.com/1.0/godelicious/bageshree.wordpress.com/144/"><img alt="" border="0" src="http://feeds.wordpress.com/1.0/delicious/bageshree.wordpress.com/144/" /></a> <a rel="nofollow" href="http://feeds.wordpress.com/1.0/gostumble/bageshree.wordpress.com/144/"><img alt="" border="0" src="http://feeds.wordpress.com/1.0/stumble/bageshree.wordpress.com/144/" /></a> <a rel="nofollow" href="http://feeds.wordpress.com/1.0/godigg/bageshree.wordpress.com/144/"><img alt="" border="0" src="http://feeds.wordpress.com/1.0/digg/bageshree.wordpress.com/144/" /></a> <a rel="nofollow" href="http://feeds.wordpress.com/1.0/goreddit/bageshree.wordpress.com/144/"><img alt="" border="0" src="http://feeds.wordpress.com/1.0/reddit/bageshree.wordpress.com/144/" /></a> <img alt="" border="0" src="http://stats.wordpress.com/b.gif?host=bageshree.wordpress.com&blog=3977069&post=144&subd=bageshree&ref=&feed=1" /></div>]]></content:encoded>
			<wfw:commentRss>http://bageshree.wordpress.com/2009/05/31/%e0%b2%b8%e0%b2%b2%e0%b2%be%e0%b2%ae%e0%b3%8d-%e0%b2%95%e0%b2%ae%e0%b2%b2%e0%b2%be/feed/</wfw:commentRss>
		<slash:comments>13</slash:comments>
	
		<media:content url="http://1.gravatar.com/avatar/5f2a5091a45da876c2ac1f5531cdc8b6?s=96&#38;d=identicon&#38;r=G" medium="image">
			<media:title type="html">Bageshree</media:title>
		</media:content>
	</item>
		<item>
		<title>ಲಲನಾಮಣಿಯರ ಪಬ್ ಪ್ರಸಂಗ</title>
		<link>http://bageshree.wordpress.com/2009/03/16/%e0%b2%b2%e0%b2%b2%e0%b2%a8%e0%b2%be%e0%b2%ae%e0%b2%a3%e0%b2%bf%e0%b2%af%e0%b2%b0-%e0%b2%aa%e0%b2%ac%e0%b3%8d-%e0%b2%aa%e0%b3%8d%e0%b2%b0%e0%b2%b8%e0%b2%82%e0%b2%97/</link>
		<comments>http://bageshree.wordpress.com/2009/03/16/%e0%b2%b2%e0%b2%b2%e0%b2%a8%e0%b2%be%e0%b2%ae%e0%b2%a3%e0%b2%bf%e0%b2%af%e0%b2%b0-%e0%b2%aa%e0%b2%ac%e0%b3%8d-%e0%b2%aa%e0%b3%8d%e0%b2%b0%e0%b2%b8%e0%b2%82%e0%b2%97/#comments</comments>
		<pubDate>Mon, 16 Mar 2009 03:53:52 +0000</pubDate>
		<dc:creator>Bageshree</dc:creator>
				<category><![CDATA[Uncategorized]]></category>

		<guid isPermaLink="false">http://bageshree.wordpress.com/?p=139</guid>
		<description><![CDATA[ಕಲಿಯುಗದಲ್ಲಿ ಆಳುವ ದೊರೆಗಳಕೃಪಾಕಟಾಕ್ಷದಿಂದ ಎಲ್ಲೆಲ್ಲಿ ನೋಡಲಿ ಅಲ್ಲಲ್ಲಿ ಕಾಣುವ ಪಬ್ ಎಂಬ ಪಾಪಕೂಪಕ್ಕೆ ಲಲನಾ  ಮಣಿಯರು ಹೋಗಲಿಕ್ಕೆ ಶುರುಮಾಡಿದಂತಹ ಸಂದರ್ಭದಲ್ಲಿ &#8220;ಸಂಭವಾಮಿ ಯುಗೇ ಯುಗೇ&#8221; ಎಂಬ ಸನಾತನ ಭರವಸೆಗೆ ಬದ್ಧವಾಗಿ ತ್ರೇತಾಯುಗದಿಂದ ನೇರ ನೇಮಕಾತಿಯಾಗಿ ಬಂದ ಮರ್ಯಾದಾ ಪುರುಷೋತ್ತಮನ ಸೇನೆಯ ಮಂದಿ ಥೇಟ್ ಲಂಕಿಣಿಯರಂತೆ ಕಂಡ ಲಲನೆಯರಿಗೆ ಒಂದಷ್ಟು ಧರ್ಮದೇಟು ಕೊಟ್ಟರಂತೆ. 
ಕುಯ್ಯೋಮರ್ರೋ ಎನ್ನುತ್ತಾ ಲಲನೆಯರು ಈ ಯುಗದ ಆಚಾರ್ಯಪುರುಷರ ಮೊರೆಹೋಗಿ &#8220;ಇದ್ಯಾವ ಧರ್ಮ? ಬಿಯರಿಗೂ ಜಾತಿ, ಮತ, ಕುಲ, ಲಿಂಗವುಂಟೇ?&#8221; ಅಂತ ಕೇಳಿದಾಗ ಆ ಪುರುಷರು ತೊಟ್ಟ [...]<img alt="" border="0" src="http://stats.wordpress.com/b.gif?host=bageshree.wordpress.com&blog=3977069&post=139&subd=bageshree&ref=&feed=1" />]]></description>
			<content:encoded><![CDATA[<div class='snap_preview'><br /><p><span style="font-size:large;font-family:Tunga;"><strong>ಕಲಿಯುಗದಲ್ಲಿ ಆಳುವ ದೊರೆಗಳಕೃಪಾಕಟಾಕ್ಷದಿಂದ ಎಲ್ಲೆಲ್ಲಿ ನೋಡಲಿ ಅಲ್ಲಲ್ಲಿ ಕಾಣುವ ಪಬ್ ಎಂಬ ಪಾಪಕೂಪಕ್ಕೆ ಲಲನಾ  ಮಣಿಯರು ಹೋಗಲಿಕ್ಕೆ ಶುರುಮಾಡಿದಂತಹ ಸಂದರ್ಭದಲ್ಲಿ &#8220;ಸಂಭವಾಮಿ ಯುಗೇ ಯುಗೇ&#8221; ಎಂಬ ಸನಾತನ ಭರವಸೆಗೆ ಬದ್ಧವಾಗಿ ತ್ರೇತಾಯುಗದಿಂದ ನೇರ ನೇಮಕಾತಿಯಾಗಿ ಬಂದ ಮರ್ಯಾದಾ ಪುರುಷೋತ್ತಮನ ಸೇನೆಯ ಮಂದಿ ಥೇಟ್ </strong></span><span style="font-size:large;font-family:Tunga;"><strong>ಲಂಕಿಣಿಯರಂತೆ ಕಂಡ ಲಲನೆಯರಿಗೆ ಒಂದಷ್ಟು ಧರ್ಮದೇಟು ಕೊಟ್ಟರಂತೆ.</strong></span> <span id="more-139"></span></p>
<p><span style="font-size:large;font-family:Tunga;"><strong>ಕುಯ್ಯೋಮರ್ರೋ ಎನ್ನುತ್ತಾ ಲಲನೆಯರು ಈ ಯುಗದ ಆಚಾರ್ಯಪುರುಷರ ಮೊರೆಹೋಗಿ &#8220;ಇದ್ಯಾವ ಧರ್ಮ? ಬಿಯರಿಗೂ ಜಾತಿ, ಮತ, ಕುಲ, ಲಿಂಗವುಂಟೇ?&#8221; ಅಂತ ಕೇಳಿದಾಗ ಆ ಪುರುಷರು ತೊಟ್ಟ ಬಿಳಿಯ ಪ್ಯಾಂಟನ್ನು ಉದಾಹರಣೆಯ ಉಪಾದಿಯಲ್ಲಿ ತೋರಿಸುತ್ತಾ &#8220;ನಮ್ಮ ಧರ್ಮದಲ್ಲಿ ಲಲನೆಯರ ಚಾರಿತ್ರ್ಯವೆಂದರೆ ರಿನ್ ಜಾಹಿರಾತಿಗೆ ಸರಿಗಟ್ಟಬೇಕು. ಸೀತೆಯು ಭಯಂಕರ ಶೀತ ಬಂದಾಗಲೂ ಕುಡಿಯದ ಪೇಯ ನಿಮಗೆ ಬೇಡ ತಾಯಿಯರೆ. ಇದನ್ನು ಸ್ಪರ್ಶಿಸಿದಿರಾದರೆ ಎಡೆಯೂರು ಸಿದ್ಧಿಲಿಂಗೇಶ್ವರನ ಶಾಪಕ್ಕೆ ಗು</strong></span><span style="font-size:large;font-family:Tunga;"><strong>ರಿಯಾಗುವಿರಿ&#8221; ಎಂದು ಗುಡುಗಿಬಿಟ್ಟರಂತೆ.</strong></span> </p>
<p><span style="font-size:large;font-family:Tunga;"><strong>ಆಗ ಮೈತುಂಬ ಮಾತೃ ವಾತ್ಸಲ್ಯ ತುಂಬಿಕೊಂಡ ಲಲನೆಯರು, &#8220;ಮಗನೆ, ಬಿಯರೆಂಬುದು ಹಿಂದಿನ ಕಾಲದಲ್ಲಿ ನಮ್ಮಿಂದ ಪಾಶ್ಚಿಮಾತ್ಯರು ಕದ್ದುಕೊಂಡು ಹೋದ ಸೋಮರಸದ ಫಾರ್ಮುಲಾದಿಂದಲೇ ತಯಾರಿಸಿದ್ದು, ಥೇಟ್ ಪುಷ್ಪಕ ವಿಮಾನದ ಫಾರ್ಮುಲಾ ಕದ್ದು ರೈಟ್ ಸಹೋದರರು ವಿಮಾನ ತಯಾರಿಸಿದ ಹಾಗೆ&#8221; ಅಂತೆಲ್ಲಾ ಹೇಳಿದರೂ ಆಚಾರ್ಯ ಪುರುಷರ ಹೊಳೆವ </strong></span><span style="font-size:large;font-family:Tunga;"><strong>ಬಿಳಿಯ ಕೆನ್ನೆ ಕೊಂಚವೂ ರಂಗೇರಲಿಲ್ಲವಂತೆ.</strong></span> </p>
<p><span style="font-size:large;font-family:Tunga;"><strong>ಸರಿ ಹೋಗಲಿ ಒಂದು ಪಿಚ್ಚರ್ ಕುಡಿದರೆ ಹತ್ತು ಬಾರಿ ಬಾತ್ ರೂಮಿಗೆ ಓಡಿಸುವ ಪೇಯದ ಸಹವಾಸವೂ ಬೇಡ, ಈ ಬಿಳಿ ಪ್ಯಾಂಟು, ಪ್ಯಾಂಟ್ ಕೆ ಪೀಛೆಯ ಚಡ್ಡಿ ಯಾವುದರ ಸಹವಾಸವೂ ಬೇಡ ಅಂತ ಲಲನೆಯರು ವೋಡ್ಕಾ ಜೊತೆ ಸ್ವಲ್ಪ ಪೈನ್‌ಆಪಲ್ ಜೂಸು, ಜೊತೆಗೆ ಒಂದು ಸಣ್ಣ ಸೀಳಿದ ಮೆಣಸಿನ ಕಾಯಿಯ ರುಚಿ ಹತ್ತಿಸಿಕೊಂಡು ಆನಂದವಾಗಿ ಇದ್ದರಂತೆ.</strong></span> </p>
<p><span style="font-size:large;font-family:Tunga;"><strong>&#8220;ಏನಾದರು ಮಾಡುತಿರು ತಮ್ಮ&#8221; ಎಂಬ ಕವಿವಾಣಿಗೆ ಬದ್ಧವಾದ ವಾನರ ಸೇನೆಯ ಮಂದಿಗೆ ಸ್ವಲ್ಪ ದಿನವಾದಂತೆ ಚಿವುಟಲಿಕ್ಕೆ ಯಾವ ಚಿಗುರೂ ಸಿಗದೆ ತುಂಬಾ ಬೇಜಾರಾಯಿತಂತೆ. ಹೀಗೆ ಒಂದು ದಿನ ಏಡುಕೊಂಡಲವಾಡನ ಹೆಸರನ್ನೇ ಭಕ್ತಿಯಿಂದ ಇಟ್ಟಿದ್ದ ಬಾರೊಂದರಲ್ಲಿ ರಂ ಎಂಬ ಗಂಡಸರಿಗೆ ಮಾತ್ರ ಚ್ಯವನಪ್ರಾಶದಂತೆ ಶಕ್ತಿ ಕೊಡುವ ಪೇಯವನ್ನು ಹೀರುತ್ತಾ ಕೂತಿದ್ದಾಗ ಸೇನಾ-ಪ್ರೇರಿತನೊಬ್ಬನಿಗೆ ಬಾರಿನ ಅರೆಗತ್ತಲನ್ನು ಸೀಳಿಕೊಂಡು ಮಿಂಚಿನಂತ ಆಲೋಚನೆಯೊಂದು ಬಂತಂತೆ: ಬೆಂಗಳೂರೆಂಬ ನಗರಿಯಲ್ಲಿ ಬುಟ್ಟಿಬುಟ್ಟಿ ಐಟಿ, ಬೀಟಿ, ಕಂಪನಿಗಳಲ್ಲಿ ಹಗಲು ರಾತ್ರಿಯೆನ್ನದೆ ದುಡಿಯುವ ಲಲನೆಯರು ಅಮೆರಿಕದ ಕ್ಲೈಂಟ್ ಗಳ  ಜೊತೆಗೆ ಫೋನಲ್ಲಿ ಅಮೇರಿಕನ್ ಆಕ್ಸೆಂಟ್‌ನಲ್ಲೇ ಮಾತಾಡಲಿ, ಆದರೆ ಭಾರತೀಯ ಸಂಸ್ಕೃತಿಗೆ ಬದ್ಧವಾಗಿ ಸೀರೆ ಉಟ್ಟುಕೊಂಡೇ ಮಾತಾಡಬಹುದಲ್ಲ, ಫೋನಲ್ಲಿ ಸೀರೆ ಹೇಗಿದ್ದರೂ ಕಾಣಿಸುವುದೂ ಇಲ್ಲವಲ್ಲ ಅಂತ!</strong></span> </p>
<p><span style="font-size:large;font-family:Tunga;"><strong>ಇಂತಾಗಿ ಬೆಂಗಳೂರಿನ ಬೀದಿಗಳಲ್ಲಿ ಜೀನ್ಸ್ ಪ್ಯಾಂಟ್ ತೊಟ್ಟ ಲಲನೆಯರನ್ನು ಹಿಡಿ ಹಿಡಿದು, ಜಗ್ಗಾಡಿ ಹೊಡೆಯಲಾಯಿತಂತೆ. ಆಚಾರ್ಯಪುರುಷರ ಕೃಪೆಯ ಭರವಸೆಯನ್ನು ತಲೆಯ ಮೇಲೆ ಹೊತ್ತ ಮಂದಿ ಹೀಗೆಲ್ಲಾ ಇಟ್ಟಾಡಿಸಿಕೊಂಡು ಹೊಡೆದರೂ ನಗರದ   ಸಿಕ್ಕಾಪಟ್ಟೆ ಮರ್ಯಾದಾ ಪುರುಷೋತ್ತಮರಾದ ಜನ ತಮ್ಮ ತಮ್ಮ ಟೀವಿ ಸೀರಿಯಲ್ಲುಗಳನ್ನು ನೋಡಿಕೊಂಡು, ಅಳುತ್ತಾ, ನಗುತ್ತಾ ಇದ್ದುಬಿಟ್ಟರಂತೆ.</strong></span> </p>
<p><span style="font-size:large;font-family:Tunga;"><strong>ಇನ್ನೇನು ಮಾಡುವುದಪ್ಪಾ ಅಂದ ದಾರಿ ಕಾಣದೆ ಲಲನಾ ಮಣಿಯರು ಕನ್ನಡ ಸಿನೆಮಾದ ಐಟಮ್ ಹಾಡುಗಳನ್ನು ರೀವೈಂಡ್  ಮಾಡಿ, ಮಾಡಿ, ಮತ್ತೆ, ಮತ್ತೆ ನೋಡುತ್ತಾ ಥೇಟ್ ಆ ಉತ್ತರ ಭಾರತದಿಂದ ಫ್ರೆಶ್ ಆಗಿ ಇಂಪೋರ್ಟ್ ಆದವಳಂತೆ ಸೀರೆ ಉಡುವುದಾ ಅಂತ ಸಮಾಲೋಚನೆ ನಡೆಸಲಿಕ್ಕೆ ಶುರು ಮಾಡಿದರಂತೆ. ಇನ್ನೇನು ರಿಹರ್ಸಲ್ ಶುರು ಮಾಡಬೇಕು ಅಷ್ಟರಲ್ಲಿ </strong></span><span style="font-size:large;font-family:Tunga;"><strong>ವಾನರ ಸೇನೆಯೋ, ಅಥವಾ ಸೇನೆಯ ಜೈತ್ರಯಾತ್ರೆಯಿಂದ ಸ್ಫೂರ್ತಿ ಪಡೆದ ಛೋಟಾ ಮೋಟಾ ತುಕಡಿಯೋ ಲಲನಾ   ಮಣಿಯರನ್ನು ಸೀರೆ, ಚೂಡಿದರ್ ಅಂತಲೂ ಲೆಕ್ಕಿಸದೆ ಕತ್ತಲಲ್ಲಿ ಹೊಡೆದು ಹೋಗುವ ಶೌರ್ಯಕಾರ್ಯ ಶುರು ಹಚ್ಚಿಕೊಂಡಿದ್ದಾರೆ ಎಂಬ ಸುದ್ದಿ ಬಂದಿತಂತೆ.</strong></span> </p>
<p><span style="font-size:large;font-family:Tunga;"><strong>ಅಯ್ಯೊ ಶಿವನೆ, ಶಂಕರನೆ ಇನ್ನೇನಪ್ಪಾ ಮಾಡೋದು ಅಂತ ಚಿಂತಾಕ್ರಾಂತರಾದರಂತೆ ಲಲನೆಯರು. ನಾವು ಶರಣೆ ನಮ್ಮೆಲ್ಲರ ಹಿರಿಯಕ್ಕನ ಉಪಾದಿಯಲ್ಲಿ ಎಲ್ಲಾ ಬಿಟ್ಟು ಬರೀ ಕೇಶರಾಶಿಯನ್ನೇ ಮೈತುಂಬಾ ಹೊದ್ದು ಓಡಾಡೋಣ ಅಂದರೆ ಈ ಹಾಳು   ಬೆಂಗಳೂರಿನ ಕೆಟ್ಟ ನೀರು, ಗಾಳಿಯ ದೆಸೆಯಿಂದ ಕೂದಲು ಸೊಂಟದ ಕೆಳಗೆ ಬೆಳೆಯೋದು ಇಲ್ಲವಲ್ಲಾ ಇನ್ನೇನು ಗತಿ ಚೆನ್ನಮಲ್ಲಿಕಾರ್ಜುನದೇವಾ, ಅಂದರಂತೆ.</strong></span> </p>
<p><span style="font-size:large;font-family:Tunga;"><strong>ಈ ಲಲನೆಯರ ಒದರಾಟದಿಂದ ಶಂಕರ ಮತ್ತು ಆಚಾರ್ಯಪುರುಷರುನಡೆಸುತ್ತಿದ್ದ ದೀರ್ಘ ಸಮಾಲೋಚನೆಗೆ ಭಂಗವಾಯಿತಂತೆ.  ಮೂರನೆಯ ಕಣ್ಣಿನಿಂದ ಲಲನೆಯರನ್ನು ಗುರಾಯಿಸುತ್ತಾ &#8220;ನಿಮ್ಮನ್ನು ಯಾರೋ ನಿಜವಾಗಿಯೂ ಹೊಡೆದಿದ್ದಾರೆ ಅಂತ ನಂಬುವುದಾದರೂ ಹೇಗೆ? ಬ್ರಹ್ಮ, ವಿಷ್ಣು, ಮಹೇಶ್ವರರೆಲ್ಲರಿಗೂ ಒಂದೇ ಏಟಿನಲ್ಲಿ ಕೆಟ್ಟ ಹೆಸರು ತರಬೇಕು ಅಂತ ನೀವು ನಿಮ್ಮಕೆನ್ನೆಗೆ ನೀವೆ ಹೊಡೆದುಕೊಂಡಿಲ್ಲ, ನಿಮ್ಮ ಕಾರಿಗೆ ನೀವೇ ಕಲ್ಲು ಹಾಕಿ ಚಚ್ಚಿಲ್ಲ, ನಿಮ್ಮ ಬಟ್ಟೆ ನೀವೆ ಎಳೆದಾಡಿಕೊಂಡಿಲ್ಲ ಅಂತ  ಯಾವ ಗ್ಯಾರೆಂಟಿ?&#8221; ಅಂತ ಶಂಕರನು ಸವಾಲೆಸೆದನಂತೆ.</strong></span> </p>
<p><span style="font-size:large;font-family:Tunga;"><strong>ಇನ್ನೇನು ಶಂಕರ ಜಟೆ ಎತ್ತಿ ಕಟ್ಟಿ ತಾಂಡವಕ್ಕೆ ರೆಡಿ ಆಗಬೇಕು ಅನ್ನುವಷ್ಟರಲ್ಲಿ ಬಂದ ದಾರಿಗೆ ಸುಂಕವಿಲ್ಲ ಅಂತ ಲಲನಾಮಣಿಯರ  ಗುಂಪು ಕೈಲಾಸ ಪರ್ವತವನ್ನು ಇಳಿಯಲಿಕ್ಕೆ ಶುರುಮಾಡುತ್ತಿದ್ದಂತೆ, &#8220;ಸ್ವಲ್ಪ ತಾಳಿ&#8221; ಅಂತ ಹಿಂದಿನಿಂದ ಕೋರಸ್‌ನಲ್ಲಿ ಕೂಗು ಕೇಳಿ ಬಂತಂತೆ. ಹಿಂದೆ ತಿರುಗಿ ನೋಡಲಾಗಿ ಅಲ್ಲಿ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರು ಹ್ಯಾಪು ಮೋರೆ ಹಾಕಿಕೊಂಡು ನಿಂತಿದ್ದರಂತೆ. ಜೊತೆಗೆ ಹೆಸರು ಸರಿಯಾಗಿ ಗೊತ್ತಿಲ್ಲದ ಒಂದೂವರೆ ಕೋಟಿ ಹೆಣ್ಣು ದೇವತೆಗಳ ದಂಡೂ ಇತ್ತಂತೆ.</strong></span> </p>
<p><span style="font-size:large;font-family:Tunga;"><strong>ಇದೇನಪ್ಪ ಅಂತ ಲಲನಾ ಮಣಿಯರು ಕೇಳಲಾಗಿ, ದೇವತೆಗಳ ಸ್ಪೋಕ್ಸ್‌ವುಮನ್ ಆದ ಸರಸ್ವತಿ &#8220;ಇತ್ತೀಚಿನ ದಿನಗಳಲ್ಲಿ ಜಂಬೂ  ದ್ವೀಪೆ, ಭರತಖಂಡೆ ಆಳುವ ದೊರೆಗಳೆಲ್ಲಾ ದೇವಾದಿದೇವತೆಗಳ ಜೊತೆ ಹಾಟ್‌ಲೈನ್ ಸಂಪರ್ಕ ಹೊಂದಿದ ಲಾಗಾಯ್ತು ನಮ್ಮಗಂಡಂದಿರಿಗೆ ನಮ್ಮನ್ನು ಮಾತಾಡಿಸುವುದಕ್ಕೂ ಪುರುಸೊತ್ತಿಲ್ಲ. ಇವರ ಹೆಸರಿನಲ್ಲಿ ಪೂಜೆ, ಪುನಸ್ಕಾರ, ಅಭಿಷೇಕ, ಬಜೆಟ್ ದುಡ್ಡು ಸ್ಯಾಂಕ್ಷನ್ನು, ಗಲಭೆ, ಜಗಳ ಒಂದಲ್ಲಾ ಒಂದು. ಅದಕ್ಕೆ ನಾವು ಇವರ ಸಹವಾಸ ಸಾಕು ಅಂತ ನಿಮ್ಮ ಜೊತೆ ಬಂದು ಬಿಡೋಣ  ಅಂತ ಇದ್ದೀವಿ&#8221; ಅಂದಳಂತೆ. ಎಲ್ಲರಿಗಿಂತ ಸ್ವಲ್ಪ ಜಾಸ್ತಿ ಸಿಟ್ಟಾಗಿ ಕಾಣುತ್ತಿದ್ದಾ ಪಾರ್ವತಿ &#8220;ಈ ಗಂಗೆ ಕಾಟ ಬೇರೆ ನನಗೆ ಈಗ ಸೌತ್ ಇಂಡಿಯಾದಲ್ಲೂ ತಂದಿಟ್ಟಿದ್ದಾರಲ್ಲ ನಿಮ್ಮ ದೊರೆಗಳು. ಮೊನ್ನೆ ಶಿವರಾತ್ರಿಗೆ ನಿಮ್ಮಲ್ಲಿ ಯಾರೋ ಶ್ರೇಷ್ಠರು ಬೆಂಗಳೂರಿಗೂ ಗಂಗೆ ತಂದಿದ್ದಾರಂತಲ್ಲ&#8221; ಅಂತ ಹಿಡಿಶಾಪ ಹಾಕಿದಳಂತೆ.</strong></span> </p>
<p><span style="font-size:large;font-family:Tunga;"><strong>ಲಲನಾ ಮಣಿಯರು ಮತ್ತು ದೇವತೆಗಳು ಕೈಲಾಸದ ಬಾಗಿಲಲ್ಲಿ ಒಂದು ಎಮೆರ್ಜೆನ್ಸಿ ಗೇಟ್ ಮೀಟಿಂಗ್ ಮಾಡಿ ಎಲ್ಲರೂ ಒಟ್ಟಿಗೆಕೆಳಗೆ ಹೋಗುವುದು ಎಂದು ನಿರ್ಧರಿಸಿ ದಬದಬ ಬಂದುಬಿಟ್ಟರಂತೆ. ಸಧ್ಯಕ್ಕೆ ಎಲ್ಲರೂ ಸೇರಿ ಒಂದು ದೊಡ್ದ ಪಾರ್ಟಿ ಇಟ್ಟುಕೊಂಡಿದ್ದಾರಂತೆ. ಮುಂದಿನ ಜಾಯಿಂಟ್ ಏಕ್ಶನ್ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಪ್ರಕಟವಾಗುವ </strong></span><span style="font-size:large;font-family:Tunga;"><strong>ನಿರೀಕ್ಷೆಯಿದೆಯಂತೆ.</strong></span> </p>
<p><span style="font-size:large;font-family:Tunga;"><strong>ಈತನ್ಮಧ್ಯೆ ಭೂ ಕೈಲಾಸಗಳಲ್ಲಿ ಹೆಣ್ಣು ದಿಕ್ಕಿಲ್ಲದೆ ಗಂಡಸರು ಹೆಂಗ್‌ಹೊಂಗೋ ಆಡಲಿಕ್ಕೆ ಶುರು ಮಾಡಿದ್ದಾರಂತೆ. ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಾರ್‌ನಲ್ಲಿಯೇ ಕಾಲ ಕಳೆಯುವ ಇನ್ನು ಕೆಲವು ಗಂಡಸರು ಕೈಲಾಸ ಭೂಮಿಗಳು ಒಂದಾದ ಪಾರ್ಟಿಯಲ್ಲಿ ಯಾವಯಾವ ಥರದ ಕಾಕ್‌ಟೈಲ್‌ಗಳು ಹುಟ್ಟಬಹುದು ಅಂತ ಆಲೋಚಿಸಿ, ಕುರುಬಿ ಕುರುಬಿ ಸಿಕ್ಕಾಪಟ್ಟೆ ಅಲ್ಸರ್ ಬರಿಸಿಕೊಂಡಿದ್ದಾರಂತೆ.</strong></span></p>
  <a rel="nofollow" href="http://feeds.wordpress.com/1.0/gocomments/bageshree.wordpress.com/139/"><img alt="" border="0" src="http://feeds.wordpress.com/1.0/comments/bageshree.wordpress.com/139/" /></a> <a rel="nofollow" href="http://feeds.wordpress.com/1.0/godelicious/bageshree.wordpress.com/139/"><img alt="" border="0" src="http://feeds.wordpress.com/1.0/delicious/bageshree.wordpress.com/139/" /></a> <a rel="nofollow" href="http://feeds.wordpress.com/1.0/gostumble/bageshree.wordpress.com/139/"><img alt="" border="0" src="http://feeds.wordpress.com/1.0/stumble/bageshree.wordpress.com/139/" /></a> <a rel="nofollow" href="http://feeds.wordpress.com/1.0/godigg/bageshree.wordpress.com/139/"><img alt="" border="0" src="http://feeds.wordpress.com/1.0/digg/bageshree.wordpress.com/139/" /></a> <a rel="nofollow" href="http://feeds.wordpress.com/1.0/goreddit/bageshree.wordpress.com/139/"><img alt="" border="0" src="http://feeds.wordpress.com/1.0/reddit/bageshree.wordpress.com/139/" /></a> <img alt="" border="0" src="http://stats.wordpress.com/b.gif?host=bageshree.wordpress.com&blog=3977069&post=139&subd=bageshree&ref=&feed=1" /></div>]]></content:encoded>
			<wfw:commentRss>http://bageshree.wordpress.com/2009/03/16/%e0%b2%b2%e0%b2%b2%e0%b2%a8%e0%b2%be%e0%b2%ae%e0%b2%a3%e0%b2%bf%e0%b2%af%e0%b2%b0-%e0%b2%aa%e0%b2%ac%e0%b3%8d-%e0%b2%aa%e0%b3%8d%e0%b2%b0%e0%b2%b8%e0%b2%82%e0%b2%97/feed/</wfw:commentRss>
		<slash:comments>7</slash:comments>
	
		<media:content url="http://1.gravatar.com/avatar/5f2a5091a45da876c2ac1f5531cdc8b6?s=96&#38;d=identicon&#38;r=G" medium="image">
			<media:title type="html">Bageshree</media:title>
		</media:content>
	</item>
		<item>
		<title>ನೀಲುವಿನ ಜಾಡು ಹಿಡಿದು&#8230;</title>
		<link>http://bageshree.wordpress.com/2008/11/09/%e0%b2%a8%e0%b3%80%e0%b2%b2%e0%b3%81%e0%b2%b5%e0%b2%bf%e0%b2%a8-%e0%b2%9c%e0%b2%be%e0%b2%a1%e0%b3%81-%e0%b2%b9%e0%b2%bf%e0%b2%a1%e0%b2%bf%e0%b2%a6%e0%b3%81/</link>
		<comments>http://bageshree.wordpress.com/2008/11/09/%e0%b2%a8%e0%b3%80%e0%b2%b2%e0%b3%81%e0%b2%b5%e0%b2%bf%e0%b2%a8-%e0%b2%9c%e0%b2%be%e0%b2%a1%e0%b3%81-%e0%b2%b9%e0%b2%bf%e0%b2%a1%e0%b2%bf%e0%b2%a6%e0%b3%81/#comments</comments>
		<pubDate>Sat, 08 Nov 2008 19:24:53 +0000</pubDate>
		<dc:creator>Bageshree</dc:creator>
				<category><![CDATA[Uncategorized]]></category>

		<guid isPermaLink="false">http://bageshree.wordpress.com/?p=105</guid>
		<description><![CDATA[ನೀಲು ಪದ್ಯಗಳ ಬಗ್ಗೆ ವಿಮರ್ಶೆ ಬರೆಯುವುದೇ ಒಂಥರಾ ಅಭಾಸ. &#8220;ನೀಲಿ ಆಗಸದಸೀರೆ ಉಟ್ಟ ನನ್ನ ಸೆರಗಿನಂಚಿನ ಕುಸುರಿಯನ್ನು ನೆಲದ ಮೇಲೆ ನಿಂತು ಅಳೆಯುವ ಮರುಳೇ!&#8221; ಅಂತ ಅವಳ ಟಿಪಿಕಲ್ ಆದ ಸಣ್ಣ ನಗೆ ನಕ್ಕು ನೀಲುವೇ ತಮಾಷೆ ಮಾಡಿಬಿಡಹುದೇನೋ ಅನ್ನಿಸುತ್ತದೆ. ಹಾದಿಮನಿಯ ಚಿತ್ರಗಳ ನಿತ್ಯ ದಿಗಂಬರಿ, ನೀಳ ಕೂದಲ ಹಂಗೂ ಇಲ್ಲದ ಅಕ್ಕ ಜಂಗಮಿ ನೀಲುವಿಗೆ ಮತ್ತು ಸೀರೆಗೆ ಎತ್ತಣಿಂದೆತ್ತ ಸಂಬಂಧ ಅನ್ನುವುದು ಬೇರೆ ಪ್ರಶ್ನೆ.
ಆದರೂ ನೀಲು ಎಂಬ ಮಿಸ್ಟರಿ ಮಹಿಳೆಯ ಕುರಿತು ಕುತೂಹಲವಂತೂ ಇಲ್ಲದಿರಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ [...]<img alt="" border="0" src="http://stats.wordpress.com/b.gif?host=bageshree.wordpress.com&blog=3977069&post=105&subd=bageshree&ref=&feed=1" />]]></description>
			<content:encoded><![CDATA[<div class='snap_preview'><br /><p>ನೀಲು ಪದ್ಯಗಳ ಬಗ್ಗೆ ವಿಮರ್ಶೆ ಬರೆಯುವುದೇ ಒಂಥರಾ ಅಭಾಸ. &#8220;ನೀಲಿ ಆಗಸದಸೀರೆ ಉಟ್ಟ ನನ್ನ ಸೆರಗಿನಂಚಿನ ಕುಸುರಿಯನ್ನು ನೆಲದ ಮೇಲೆ ನಿಂತು ಅಳೆಯುವ ಮರುಳೇ!&#8221; ಅಂತ ಅವಳ ಟಿಪಿಕಲ್ ಆದ ಸಣ್ಣ ನಗೆ ನಕ್ಕು ನೀಲುವೇ ತಮಾಷೆ ಮಾಡಿಬಿಡಹುದೇನೋ ಅನ್ನಿಸುತ್ತದೆ. ಹಾದಿಮನಿಯ ಚಿತ್ರಗಳ ನಿತ್ಯ ದಿಗಂಬರಿ, ನೀಳ ಕೂದಲ ಹಂಗೂ ಇಲ್ಲದ ಅಕ್ಕ ಜಂಗಮಿ ನೀಲುವಿಗೆ ಮತ್ತು ಸೀರೆಗೆ ಎತ್ತಣಿಂದೆತ್ತ ಸಂಬಂಧ ಅನ್ನುವುದು ಬೇರೆ ಪ್ರಶ್ನೆ.</p>
<p>ಆದರೂ ನೀಲು ಎಂಬ ಮಿಸ್ಟರಿ ಮಹಿಳೆಯ ಕುರಿತು ಕುತೂಹಲವಂತೂ ಇಲ್ಲದಿರಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ವಿದ್ವಾಂಸರು ಸ್ಟಾರ್ಚ್ ಹಾಕಿ ಗಟ್ಟಿ ಮಾಡಿಟ್ಟ ವಿಮರ್ಶೆ ಅನ್ನುವ ಪದವನ್ನು ಬದಿಗಿಟ್ಟು ಈಕೆಯ ಮೀನಹೆಜ್ಜೆಗಳನ್ನು ಅರಸುವ ಪ್ರಯತ್ನ ಮಾಡಿದರೆ ವಾಸಿ. <span id="more-105"></span></p>
<p><img title="More..." src="http://bageshree.wordpress.com/wp-includes/js/tinymce/plugins/wordpress/img/trans.gif" alt="" /></p>
<p>ಪದ್ಯಬರೆಯುವ ಹಿಂದಿನ ತಿಣುಕಾಟವೇ ಕಾಣದಂತೆ ಕಾಮ, ಪ್ರೇಮ, ಕಾತರ, ಕಾಯುವಿಕೆ, ಬೆಳದಿಂಗಳು, ಮಾವಿನ ಚಿಗುರು, ಸಣ್ಣ ಗರಿಕೆ, ಪುರಾಣ, ರಾಜಕೀಯ, ಬಡತನ, ಶ್ರೀಮಂತಿಕೆ ಎಲ್ಲದರ ಬಗ್ಗೆ ಮಗುವಿನ ನಗುವಿನಷ್ಟು ಸಹಜವಾಗಿ ಬರೆಯುತ್ತಾ ಯೇಟ್ಸ್‌ನ ‘A line will take us hours maybe;/ Yet if it does not seem a moment&#8217;s thought,/ Our stitching and unstitching has been naught.&#8221;ಮತ್ತೆ ಮತ್ತೆ ನೆನಪಿಗೆ ತರುವುದು ಲಂಕೇಶ್ ಅವರ ನೀಲು ಪದ್ಯಗಳ ಬಗ್ಗೆ ಮೊಟ್ಟಮೊದಲು ಗಾಢವಾಗಿ ತಟ್ಟುವ ವಿಷಯ.</p>
<p>ತನ್ನ ಮತ್ತು ತನ್ನ ಕಾವ್ಯಶಕ್ತಿಯ ಬಗ್ಗೆ ಅಸೀಮ ಆತ್ಮವಿಶ್ವಾಸ ಹೊಂದಿದ ತುಂಟಿ ನೀಲು ತಿಣುಕುವ ಕವಿಗಳನ್ನು ಛೇಡಿಸುವ ಛಾನ್ಸ್ ಬಿಟ್ಟುಕೊಡುವುದಿಲ್ಲ:</p>
<p>‘ಹುಟ್ಟು ಹಠವಾದಿಯೊಬ್ಬ</p>
<p>ಕವಿಯಾಗಲು ಪಣತೊಟ್ಟು</p>
<p>ನಿತ್ಯ ಪದಭೇದಿಯಲ್ಲಿ ಬಳಲಿ</p>
<p>ಹಲ್ಲು ಕಡಿಯುತ್ತಿರುದ್ದಾಗ</p>
<p>ವಸಂತದ ಮಾವಿನ ಮರ</p>
<p>ಕೋಗಿಲೆಯ ಕಂಠದಲ್ಲಿ ಹಾಡಿ</p>
<p>ತನಗೇ ಗೊತ್ತಿಲ್ಲದೇ</p>
<p>ಕವಿಯಾಯಿತು&#8217; ಎನ್ನುತ್ತಾಳೆ.</p>
<p>ಆಧುನಿಕರಿಂದ ‘ಪುಷ್ಪಕವಿ&#8217;ಗಳೆಂದು ಗೇಲಿಗೊಳಗಾದ ಕಾವ್ಯಪರಂಪರೆಯ ಕವಿಗಳು, ‘ಸಂಪಿಗೆ ಮರದ ಹಸಿರೆಲೆ ನಡುವೆ&#8230;&#8217; ರೀತಿಯ ಹಾಡುಗಳನ್ನು ಬರೆದ ನಮ್ಮ ಸಿನೆಮಾ ಸಾಹಿತಿಗಳು ಬಳಸಿದ ವಸಂತ, ಮಾವಿನ ಮರ, ಕೋಗಿಲೆ, ನವಿಲು ಇತ್ಯಾದಿ ಸಂಕೇತಗಳನ್ನೇ ಬಳಸುತ್ತಾ ಅವುಗಳಿಂದೆಲ್ಲ ಹೊಸ ಅರ್ಥವೊಂದನ್ನು ಹೊಳೆಸುವ ನೀಲುವಿನ ಸಿದ್ಧಿಗೆ ವಾಹ್ ವಾಹ್ ಅನ್ನದಿರುವುದು ಕಷ್ಟ. ನೀಲು ಪದ್ಯಗಳ ಅತಿ ದೊಡ್ಡ ಶಕ್ತಿ ಇರುವುದು ಕಾವ್ಯವನ್ನು ‘ಓದು&#8217; ಎಂದು ಪರಿಗಣಿಸದ, ಭಾವಗೀತೆ-ಸಿನೆಮಾ ಹಾಡು ಕೇಳಿ ಖುಶಿಪಡುವ ಪತ್ರಿಕೆಯ ಓದುಗನಿಗೆ ಸುಲಭಕ್ಕೆ ಎಟುಕುವ ಭಾಷೆಯನ್ನು ಬಳಸಿಯೇ ಇದರಿಂದಾಚೆಯ ಪ್ರಶ್ನೆಗಳನ್ನು, ಹೊಸ ತಿರುವುಗಳನ್ನು ಓದುಗನ ಎದುರಿಡುವುದು. &#8220;ನೀಲು ಕಾವ್ಯ&#8221;  ಸಂಕಲನಕ್ಕೆ ಮುನ್ನುಡಿ ಬರೆದ ಕಿ.ರಂ. ನಾಗರಾಜ್ ಹೇಳುವಂತೆ ‘ಸಾಮಾನ್ಯ ವಿವರಗಳಲ್ಲೇ ಅಂತಸ್ಥವಾಗಿರುವ ಥಟ್ಟನೆ ಕಾಣದ ಅನೇಕ ಸೂಕ್ಷ್ಮಗಳು ಹುದುಗಿರುವುದನ್ನು ಪಾರದರ್ಶಕ ಎನಿಸುವ ಭಾಷೆಯ ಬಳಕೆಯ ಮೂಲಕ ಹೇಳುವ ವಿನ್ಯಾಸ&#8217; ಈ ಕವಿತೆಗಳದು.</p>
<p>ನೀಲುವಿಗೆ ಕಾವ್ಯದಲ್ಲಿ ಹಾಡಿ, ಹೊಗಳಿ ಹಳಸಿ ಕ್ಲೀಶೆಯಾಗಿ ಹೋದ ಪ್ರಕೃತಿಯ ಸಂಕೇತಗಳು ಯಾವತ್ತೂ ಸುಂದರ ‘ದೃಶ್ಯ&#8217;ಗಳಾಗದೆ ಮಾನವ ಪ್ರಯತ್ನಗಳ ಸೀಮಿತತೆಯನ್ನು ಗುರುತಿಸಲು ಮತ್ತು ಅಹಂಕಾರಕ್ಕೆ ನಿಜದ ಸೂಜಿ ಮೊನೆಯನ್ನು ಮೆತ್ತಗೆ ತಗುಲಿಸಲು ಸಾಧನಗಳಾಗುತ್ತವೆ.</p>
<p>‘ಮೊಗ್ಗು ಬಿರಿವುದ ನೋಡಲು</p>
<p>ಹಠ ಹಿಡಿದು ಕೂತರೆ</p>
<p>ನಿದ್ರೆ ಕ್ರಮೇಣ ಆವರಿಸಿ</p>
<p>ಏಳುವಷ್ಟರಲ್ಲಿ ಹೂ ಅರಳಿ</p>
<p>ದಳ ಬಾಡತೊಡಗಿತು&#8217; ಎನ್ನುವಲ್ಲಿ ಈ ಪ್ರಜ್ಞೆಯನ್ನು ನೋಡಬಹುದು.</p>
<p>ಮನುಷ್ಯ ತಾನೇ ಕಟ್ಟಿಕೊಂಡ ನೀತಿ-ಅನೀತಿಗಳ ಸೀಮೆಗಳ ಹಾಸ್ಯಾಸ್ಪದತೆಯನ್ನು ಹೈಕುವಿನ ಬ್ರೆವಿಟಿ ಮತ್ತು ಚಾಣಾಕ್ಷತೆಯೊಂದಿಗೆ ತನ್ನದೇ ಪೋಲಿತನವನ್ನೂ ಬೆರೆಸಿ ಹೇಳುದಕ್ಕೂ ನೀಲು ಪ್ರಕೃತಿಯ ಸುಂದರ ದೃಶ್ಯವನ್ನೇ ಬಳಸುವುದು:</p>
<p>‘ಚಿಟ್ಟೆಯ ಬಣ್ಣಕ್ಕೆ ಬೆರಗಾದ ಹುಡುಗಿ</p>
<p>ಅದರ ವ್ಯಭಿಚಾರಕ್ಕೆ</p>
<p>ಮಂತ್ರಮುಗ್ಧಳಾದಳು.&#8217;</p>
<p>ಆದರೆ ಪಕ್ಕಾ ಆಧುನಿಕಳಾದ ನೀಲುವಿಗೆ ಪ್ರಕೃತಿಯೊಡನೆ ಒಂದಾಗಿ ಗಿಳಿ, ಗೋರಂಕಗಳಂತೆ ಮಾನವ ಬದುಕಬಲ್ಲನೆಂಬ ರೊಮ್ಯಾಂಟಿಕ್ ಕಲ್ಪನೆ ಖಂಡಿತ ಇಲ್ಲ:</p>
<p>‘ಹಕ್ಕಿಯಂತೆ ಹಾರಲು, ಚಿರತೆಯಂತೆ ಓಡಲು</p>
<p>ನದಿಯಂತೆ ಹರಿಯಲು ನನಗೆ ಆಸೆಯಾದರೂ</p>
<p>ನಿಜಕ್ಕೂ</p>
<p>ಹೀಗೆ ಹೆಂಗಸಾಗಿ ಕೂತು</p>
<p>ಹರಟುವುದೇ ನನಗೆ ಇಷ್ಟ&#8217; ಎಂಬ ಸ್ಪಷ್ಟತೆ ನೀಲುವಿಗಿದೆ.</p>
<p>ಪ್ರೇಮಿ-ಕಾಮಿನಿ-ಕವಿ-ತತ್ವಜ್ಞಾನಿ ಹೀಗೆ ಅನೇಕ ಮುಖಗಳನ್ನು ಬೇರೆಬೇರೆ ಪದ್ಯಗಳಲ್ಲಿ, ಕೆಲವೊಮ್ಮೆ ಒಂದೇ ಬಾರಿ ಹೊಳೆಸುವ ನೀಲುವಿಗೆ ಪ್ರಕೃತಿ ಒಂದು ರೀತಿಯ reality checkನ್ನು ತನ್ನೆಲ್ಲಾ ಅನುಭವಗಳಿಗೆ ಒದಗಿಸಿದರೆ ಮತ್ತೊಂದು ರೀತಿಯ ಅಳತೆಗೋಲಾಗಿ ಎಲ್ಲರೀತಿಯ ತೋರಿಕೆ, ಆಡಂಬರಗಳಿಂದಾಚೆಯ ಸಾಮಾನ್ಯರ ಜೀವನ ಕೆಲಸ ಮಾಡುತ್ತದೆ. ಹಿಮಾಲಯವನ್ನು ಹತ್ತಿದ ತೇನ್‌ಸಿಂಗ್‌ನನ್ನು ಕುತೂಹಲದಿಂದ ಕಾಣುವ ಈರವ್ವ ತೇನ್‌ಸಿಂಗ್‌ನನ್ನು ಅವಳ ಹಿತ್ತಲ ತೆಂಗಿನ ಮರ ಹತ್ತಿ ಕಾಯಿ ಕಿತ್ತುಕೊಡಲು ವಿನಂತಿಸಿಕೊಳ್ಳುತ್ತಾಳೆ ನೀಲುವಿನ ಕವಿತೆಯಲ್ಲಿ! ಈ ಅರಿವಿರುವುದರಿಂದಲೇ ತತ್ವಜ್ಞಾನಿ ಜಗತ್ತನ್ನು ಮಾಯೆ ಎಂದರೂ ‘ಕೇವಲ ಹುರಿಗಾಳು ತಿನ್ನುವಾಗ ಕೂಡ&#8217; ನೀಲುವಿಗೆ ‘ಜಗತ್ತು ನಿಜ ಎನ್ನಿಸುವುದು&#8217;.</p>
<p>ಒಟ್ಟಿನಲ್ಲಿ ಒಂದು ರೀತಿಯ ವಿಶಿಷ್ಟವಾದ ‘ರೈಪ್‌ನೆಸ್&#8217; ನೀಲುವಿಗೆ ಲಭ್ಯವಾಗಿರುವುದು ಸಂಕಲನದುದ್ದಕ್ಕೂ ಕಾಣುತ್ತಾ ಹೋಗುತ್ತದೆ. ಈ ಮನಸ್ಥಿತಿ ಅವಳಿಗೆ ಸಾಧ್ಯವಾಗಿರುವುದು ಅವಳು ವಯಸ್ಸು ಮತ್ತು ಅನುಭವಗಳೆರಡರ ದೃಷ್ಟಿಯಲ್ಲೂ ಒಂದು ‘ಸುವರ್ಣ ಮಾಧ್ಯಮ&#8217; ಸ್ಥಿತಿಯಲ್ಲಿ ಇರುವುದರಿಂದ ಇರಬಹುದೆ?</p>
<p>ಮಧ್ಯ ವಯಸ್ಸಿಗೆ ಅಡಿ‌ಇಡುತ್ತಿರುವ (ಒಂದು ಪದ್ಯದ ಪ್ರಕಾರ ಇವಳ ವಯಸ್ಸು ೩೮, ಇನ್ನೊಂದರ ಪ್ರಕಾರ ೩೦) ಈ ನೀಲುವಿಗೆ ತುಂಟಾಟ, ಉತ್ಕಟತೆ, ಪೋಲಿತನಗಳ ನಡುವೆ ಅವಳ ಮತ್ತು ಅವಳ ಪ್ರಿಯಕರನ ‘ಅಜರಾಮರ&#8217; ಪ್ರೀತಿಯೂ ಸೇರಿದಂತೆ ಪ್ರಪಂಚದ ಎಲ್ಲ ವಿವರಗಳ ನಶ್ವರತೆಯ ಬಗ್ಗೆ ಗಾಢವಾದ ಅರಿವೂ ಇದೆ. ನೂರಾರು ಕಷ್ಟಕಾರ್ಪಣ್ಯದ ನಂತರ ಪಡೆದ ಲಿಯರ್ ರೀತಿಯ ರೈಪ್‌ನೆಸ್ ಇದಲ್ಲ ಎನ್ನುವುದನ್ನು ಗಮನಿಸಬೇಕು. ಮಧ್ಯವಯಸ್ಕ ಅಂಗ್ಸ್ಕ್ಟ್, ಮುಪ್ಪಿನೆಡೆ ಜಾರುತ್ತಿರುವ ಬಗ್ಗೆ ಅರಿವು, ಆದರ ಜೊತೆಜೊತೆಗೇ ಇನ್ನೂ ಆರದ ಯೌವ್ವನ ಕಾವು ಇವೆಲ್ಲವನ್ನೂ ಒಳಗೊಂಡು ಬಂದಿರುವ ‘ರೈಪ್‌ನೆಸ್&#8217; ಇದು. ಈಕೆ ಭೂಮಿಯ ಮೇಲೆ ಕಳೆದ ಮೂವತ್ತೆಂಟು ಸಂವತ್ಸರಗಳಲ್ಲಿ ನಲ್ಲನ ಸ್ಪರ್ಷ ಮತ್ತು ನೆನೆಪು ಒಂದು ಗಂಟೆಯದು ಮಾತ್ರ ಎಂಬ ‘ಅಂಕಗಣಿತದ ವಿಚಿತ್ರ ಸತ್ಯ&#8217;ವನ್ನು ಅರಿತು, ವಸಂತ ಋತುವಿನ ಮೀಸೆಯಲ್ಲಿ ಕೂಡ ಎರಡು ಬಿಳಿ ಕೂದಲ ಕಂಡು, ಮಂಡಿಯೂರಿ ಕೂತ ತನ್ನ ತೊಡೆಯ ಮೇಲೆ ನರ್ತಿಸುತ್ತಿರುವ ನಲ್ಲನ ಬೆರಳುಗಳು ಅವಳ ವಸಂತಗಳ ಎಣಿಸುತ್ತಿದೆ ಎಂಬ ಸಂದೇಹ ಹುಟ್ಟಿ ಎದೆ ಕಂಪಿಸಿದ ನಂತರದಲ್ಲಿ&#8230;.</p>
<p>‘ಪ್ರೇಮ ಕಾಮಗಳನ್ನು ಧಿಕ್ಕರಿಸುವ</p>
<p>ಹಠ ಮಾಡಬೇಡ;</p>
<p>ಅವೆರಡು ನಿನ್ನತ್ತ ಸುಳಿಯದ</p>
<p>ವರ್ಷಗಳೂ</p>
<p>ಕ್ಯಾಲೆಂಡರಿನಲ್ಲಿ ಕಾಯುತ್ತಿವೆ&#8217; ಎಂದು ಗಂಭೀರವಾಗಿ ಹೇಳುತ್ತಾಳೆ.</p>
<p>ಮತ್ತೆ ಇದೇ ಕಾಲನ ಓಟದ ಅರಿವಿಗೆ ಕೊಂಚ ತುಂಟತನ ಬೆರೆಸಿ&#8230;</p>
<p>‘ನೀವು ಪ್ರೇಮ ಅಮರ ಎಂದದ್ದು ನಿಜವಿರಬಹುದು,</p>
<p>ಆದರೆ,</p>
<p>ಎರಡು ಸಾವಿರ ವರ್ಷಗಳ ಹಿಂದೆ ಪ್ರೀತಿಸಿದ ಇಬ್ಬರ</p>
<p>ಎರಡು ಹಲ್ಲುಗಳನ್ನು</p>
<p>ಮೇಕೆದಾಟಿನ ಹತ್ತಿರ ನೋಡಿದೆ.</p>
<p>ಪ್ರೇಮಿಸುವಾಗ ಅವು ಬಿದ್ದಿರಬಹುದೇ?&#8217; ಎನ್ನುವಾಗ ವ್ಯಕ್ತವಾಗುತ್ತದೆ ನೀಲುವಿನ ರೈಪ್‌ನೆಸ್.</p>
<p>ಇಷ್ಟೆಲ್ಲಾ ನೀಲುವಿನ ಕಾವ್ಯದ ಚೆಂದದ ಬಗ್ಗೆ ಮಾತಾಡಿದ ನಂತರವೂ ಆಕೆ ಮತ್ತು ಆಕೆಯ ಸೃಷ್ಟಿಕರ್ತನ ಬಗ್ಗೆ ಒಂದು ಪ್ರಶ್ನೆ ಹಾಗೆಯೇ ಉಳಿದುಕೊಳ್ಳುತ್ತದೆ: ಲಂಕೇಶ್ ನಿರಂತರವಾಗಿ, ಆಪ್ತವಾಗಿ ಮತ್ತು ಪ್ರಾಲಿಫಿಕ್ ಆಗಿ ಬರೆದ ಈ ಕವನಗಳ ಶೃಂಖಲೆಗೆ ಹೆಣ್ಣುದನಿಯನ್ನು ಆರಿಸಿಕೊಂಡಿದ್ದೇಕೆ?</p>
<p>ಈ ಪ್ರಶ್ನೆಯನ್ನು ಸ್ವಲ್ಪ ಭಾವಗೀತಾತ್ಮಕವಾಗಿ ನೋಡುವುದಾದರೆ ಇದು ಜಗಳಗಂಟ, ನಿಷ್ಠುರವಾದಿ ಎಂದು ಹೆಸರಾಗಿದ್ದ ಲಂಕೇಶ್ ತಮ್ಮ ‘ಮಿನಿನ್ ಸೈಡ್&#8217;ನ್ನು ಈ ಮುಖವಾಡದ ಮೂಲಕ ಮುಟ್ಟುವ ಪ್ರಯತ್ನ ಮಾಡಿದರು ಅನ್ನಬಹುದು. ಪತ್ರಿಕೆಯ ರಾಜಕೀಯ ವಿಶ್ಲೇಷಣೆ, ತರಲೆ, ಜಗಳಗಳ ನಡುವೆ ನೀಲುವಿನದು ಇದರೆಲ್ಲದರೆಡೆಗೆ ವಾರೆಯಾಗಿ ನೋಡುವ ನೋಟವಾಗಿತ್ತು ಎಂಬುದನ್ನು ಮರೆಯಬಾರದು.</p>
<p>ಲಂಕೇಶರ ದೃಷ್ಟಿಯಲ್ಲಿ ‘ಫೆಮಿನಿನ್&#8217; ಎಂದರೆ ಏನು ಎಂಬುದು ಮುಂದಿನ ಪ್ರಶ್ನೆ. ಇದು ಸರಳರೇಖಾತ್ಮಕವಾದ ಸಿನೆಮಾ ಶೈಲಿಯ ಹದಿನಾರರ ಹರೆಯದ, ನಾಚುವ, ಬಳುಕುವ ‘ಫೆಮಿನಿನಿಟಿ&#8217; ಅಲ್ಲ ಎನ್ನುವುದು ಖಚಿತ. ಸ್ಪರ್ಶ, ಚುಂಬನ, ಆಲಿಂಗನದಲ್ಲಿ ಕರಗುವಾಗಲೂ ಈ ಮೂವತ್ತು ಅಥವಾ ಮೂವತ್ತೆಂಟರ ಹುಡುಗಿಗೆ ‘ಸುಂದರ ಸೊಂಟ ಬಳಸಲು ಜೀವವನ್ನೇ ಕೊಡಬಲ್ಲ ತರುಣನಿಗೆ ಅವಳಿಂದ ಸೊಂಟ ಬೇರ್ಪಟ್ಟರೆ ಅದು ಕೇವಲ ಮಾಂಸವೆಂಬುದೆಂದು ತಿಳಿಯುದುದಿಲ್ಲ&#8217; ಎಂಬುದರ ಬಗ್ಗೆ ಖೇದವಿದೆ. ಪ್ರೇಮದ ಆಟದಲ್ಲಿ ‘ಸಮಾನತೆ ಮತ್ತು ಘನತೆ ಇಲ್ಲದಿದ್ದರೆ ಅಂಪೈರ್‌ಗಳೆ ಇಲ್ಲದಂತೆ&#8217; ಎಂಬ ವಿವೇಕವಿದೆ.</p>
<p>ಆದರೆ ನೀಲುವಿನ ಹೆಣ್ಣುದನಿ ಒಮ್ಮೆಮ್ಮೆ ಇದ್ದಕ್ಕಿದ್ದಂತೆ ಜಾರಿ ಗಡಸು ಗಂಡು ದನಿ ಹೊರಹೊಮ್ಮುವುದೂ ಉಂಟು. ‘ಗಂಡ ಪೂರ್ತಿ ಸ್ವಾತಂತ್ರ್ಯ ಕೊಟ್ಟಾಗ</p>
<p>ಆಗುವ ಖುಶಿಗಿಂತ ಆತ ನನ್ನ ಸ್ವಾತಂತ್ರ್ಯದ ಬಗ್ಗೆ ಸಿಡಿದೆದ್ದಾಗ ಆಗುವ ಹಿಗ್ಗು</p>
<p>ಪ್ರೇಮದ ಗುರುತೆ?&#8217;  ಎಂದು ಕೇಳುವಾಗ ಅಥವ ‘ಕಾಮುಕನ ಆಲಿಂಗನ</p>
<p>ಕೊಂಚ ಅಸಹ್ಯವಾದರೂ ಅದೇ ವಾಸಿ&#8217; ಅನ್ನುವಾದ ಇವು ಜಾಣ್ಮೆಯಿಂದ ಹೆಣ್ಣಿನ ದನಿ ಬಳಸಿ ಹೇಳಿದ ‘male fantasy&#8217;ಯ ಪರಾಕಾಷ್ಠೆ ಅನ್ನಿಸದೆ ಇರುವುದಿಲ್ಲ. ‘ಗಂಡಿನ ಕ್ರೌರ್ಯ ಮತ್ತು ಹೆಣ್ಣಿನ ಚಂಚಲತೆ ನೀರಿನ ಸರಳತೆಯಷ್ಟು ನಿಜ&#8217; ಅನ್ನುವ ಹೆಣ್ಣುಗಂಡಿನ ಗುಣಗಳನ್ನು ಗಣಿತದ ಸಮೀಕರಣಕ್ಕೆ ಇಳಿಸಿಬಿಡುವ ಮಾತುಗಳೂ ಇದರ ಇನ್ನೊಂದು ರೂಪ.</p>
<p>Sterotypeಗಳಿಗೆ ಕಟ್ಟು ಬೀಳದೆ ಹೆಣ್ಣು ದನಿಯೊಂದನ್ನು ಸೃಷ್ಟಿಸ ಹೊರಟ ಲಂಕೇಶ್ ಅದರಿಂದ ಪೂರ್ಣ ಮುಕ್ತವಾಗಲಿಲ್ಲ ಎಂಬುದು ನೀಲೂ ಪದ್ಯಗಳಲ್ಲಿ ಢಾಳಾಗಿ ಕಾಣುತ್ತದೆ. ಈ ‘ಚಂಚಲೆ&#8217; (ಹೆಣ್ಣಿನ ಮೂಲಗುಣವೆಂದು ಎಲ್ಲರೂ ಹೇಳೂವ ಇದು ಏನು ಎಂಬುದು ಇದುವರೆಗೂ ನಿಗೂಢವಾಗಿಯೇ ಉಳಿದ ವಿಷಯ) ನೀಲುವಿನ ಸ್ತ್ರೀತ್ವ ಉದ್ದಕ್ಕೂ ಅ-ರಾಜಕೀಯ ನೆಲೆಯಲ್ಲಿಯೇ ಗಟ್ಟಿಗೊಳ್ಳುತ್ತಾ ಆಗುತ್ತಾ ಹೋಗುವುದು ಇದಕ್ಕೆ ಒಂದು ಉದಾಹರಣೆ. ಇವಳ ಕಾಲ್ಬೆರಳಿಗೆ ‘ಸೋಶಿಯಲಿಸ್ಟ್ ಮುತ್ತು&#8217; ಇಡುವ ಇವಳ ನಲ್ಲನ ರಾಜಕೀಯ ಆರ್ಭಟ ತನ್ನ ‘ಕಾಮನಬಿಲ್ಲನ್ನು ಕ್ಷಣಕೂಡ ಹಿಡಿದು ನಿಲ್ಲಿಸಲಾರದು&#8217; ಎನ್ನುತ್ತಾಳೆ ನೀಲು. ಗಂಡಸಿನ ರಾಜಕೀಯ ಹಪಹಪಿಕೆಯನ್ನು ಒಂದು ರೀತಿಯ ಕರುಣೆಯಿಂದ ನೋಡುವ ಈ ಸ್ತ್ರೀದನಿಗೆ ಯಾವುದೇ ‘ಇಸಂ&#8217; ಮುಟ್ಟದ ಮಾನವೀಯತೆ ಇದೆ. ಇದೇ ಛಾಯೆಯನ್ನು ಲಂಕೇಶ್ ಕಾವ್ಯದ ಅನೇಕ ಸ್ತ್ರೀಪಾತ್ರಗಳಲ್ಲಿ (‘ಚಿತ್ರ ಸಮೂಹ&#8217; ಸಂಕಲದಲ್ಲಿಸುಳಿದಾಡುವ ಚಂದ್ರಿ, ಸರೋಜ, ಅನ್ನ ಕರೆನಿನ, ಚಂದ್ರಿ ಇತ್ಯಾದಿ) ಎಲ್ಲರಲ್ಲಿಯೂ ಕಾಣಬಹುದು. ಬಂಡಾಯ, ಐಡಿಯೋಲಜಿ, ರಿಯಲ್ ಪಾಲಿಟಿಕ್ ಇವೆಲ್ಲವೂ ಸ್ತ್ರೀತ್ವಕ್ಕೆ ವ್ಯತಿರಿಕ್ತವಾದವು ಎನ್ನುವ ಭಾವ ಉದ್ದಕ್ಕೂ ಕಾಣುತ್ತದೆ. ‘ವಿಧಾನಸೌಧದ ಮೇಲೆ ಹಾಡುವ ಹೃದಯ&#8217; ಹೊಂದಿದ್ದೇನೆ ಎಂಬ ನೀಲುವಿನ ಕಾವ್ಯಮಯ ಹೇಳಿಕೆ ಇದಕ್ಕೆ ಏಕಮಾತ್ರ ಅಪವಾದ.</p>
<p>‘ವೃತ್ತಿಯಾಗಿ ಬಂಡಾಯ ಮಾಡುವ</p>
<p>ನುರಿತ ಹೆಂಗಸರಿಗಿಂತ</p>
<p>ಪಕ್ಕದ ಮನೆಯ ಎಳೆಯ ಹೆಣ್ಣು</p>
<p>ಪ್ರಿಯನ ಬಗ್ಗೆ ರೋಷಗೊಂಡು</p>
<p>ಪರಚುವ ದೃಶ್ಯ ಪ್ರಾಮಾಣಿಕ&#8217; ಎನ್ನುವಲ್ಲಿ</p>
<p>ಮತ್ತು</p>
<p>‘ನನ್ನ ಕ್ರಾಂತಿಯ ಮಾತುಗಳೆಲ್ಲಾ</p>
<p>ನಮ್ಮೂರ ಮಲ್ಲಿಯ</p>
<p>ಸುಖ ತುಂಬಿದ ಕ್ರಾಂತಿರಹಿತ</p>
<p>ಕೆನ್ನೆ ನೋಡಿದೊಡನೆ</p>
<p>ಬಾಲ ಮುದುರಿಕೊಂಡವು&#8217; ಎನ್ನುವಾಗ ಎಲ್ಲಾ ಮುಖವಾಡಗಳನ್ನೂ ಕಳಚಿ ಹೆಣ್ಣಿನ ಬಂಡಾಯವೆಲ್ಲ ಗಂಡಸನ್ನು ಟಿಟಿಲೇಟ್ ಮಾಡುವ ಮಟ್ಟಕ್ಕೆ ಬಂದು ನಿಂತರೆ ಚೆಂದ, ಅದರಿಂದಾಚೆ ಸ್ತ್ರೀತ್ವಕ್ಕೆ ಅಪವಾದ ಎಂಬ ಅಭಿಪ್ರಾಯ ಸ್ಪಷ್ಟವಾಗಿಯೇ ವ್ಯಕ್ತವಾಗುತ್ತದೆ.</p>
<p>ನೀಲು ಪದ್ಯಗಳನ್ನು ಒಟ್ಟಾರೆಯಾಗಿ ನೋಡಿದಾಗ ಈ ಹುಡುಗಿಯ ಸ್ಥಾಯಿಭಾವ ನಲ್ಲನಿಗಾಗೆ (ಒಮ್ಮೆಮ್ಮೆ ಅವನನ್ನು ‘ದೊರೆ&#8217; ಅಂತಲೂ ಕರೆದು ಇರುಸುಮುರುಸು ಮಾಡಿ!) ಕಾಯುತ್ತಾ ಕೂರುವ ಕ್ರೌಂಚಪಕ್ಷಿಯದಾ ಎಂಬ ಅನುಮಾನವೂ ಬರುತ್ತದೆ.</p>
<p>‘ನೀಲು ಯಾರು ಎಂದು ಕೇಳಿದಿರಾ?</p>
<p>ಹುಣ್ಣಿಮೆಯ ಬೆಳದಿಂಗಳು ಕಾಮಿನಿಯಲ್ಲಿ</p>
<p>ಪ್ರೇಮ ಉಕ್ಕಿಸಿದ ವೇಳೆ</p>
<p>ಇನಿಯನಿಲ್ಲದ ಹಾಸಿಗೆಯಲ್ಲಿ</p>
<p>ಬಿಕ್ಕಳಿಸಿ ಅತ್ತು ಅವನಿಗಾಗಿ ಕಾದು</p>
<p>ಆತ ಹಿಂದಿರುಗುವ ಹೊತ್ತಿಗೆ ಅಮಾವಸ್ಯೆ</p>
<p>ಕವಿದಿತ್ತು, ಮತ್ತೆ ಬೆಳದಿಂಗಳ</p>
<p>ಹುಣ್ಣಿಮೆಗೆ ಕಾಯುತ್ತಾ</p>
<p>ಅವಳು ಇಟ್ಟ ನಿಟ್ಟಿಸಿರಿನಲ್ಲಿ</p>
<p>ಹುಟ್ಟಿದವಳು ನೀಲು&#8217;</p>
<p>ಹೀಗೆ ಕಾವ್ಯಾತ್ಮಕವಾದ ನೀಲುವಿನ ಹುಟ್ಟಿನಲ್ಲಿಯೇ ಗಂಡಿಗಾಗ ಈ ರೀತಿಯ ಕಾಯುವಿಕೆ ಅಂತರ್ಗತವಾಗಿರುವುದನ್ನು ಗಮನಿಸಬೇಕು. ತನ್ನೆಲ್ಲಾ ಸಾಲುಗಳನ್ನು ನೀಲು ಗುರುತಿಸುವುದು ‘ವಿರಹದ, ಕಾತರದ, ನಿರಾಶೆಯ, ಚಿಂಬನದ, ಆಲಿಂಗನದ ಗುರುತುಗಳು&#8217; ಮತ್ತು ‘ಪ್ರಕೃತಿ ಸೂರ್ಯನನ್ನು ಸ್ವಾಗತಿಸುವಾಗ ನಾನು ಕತ್ತಲೆಯ ಭಿತ್ತಿಯ ಮೇಲೆ ಚಿತ್ರಿಸಿದ ನಿಟ್ಟುಸಿರುಗಳು&#8217; ಎಂಬುದಾಗಿ ಎನ್ನುವುದನ್ನೂ ಇಲ್ಲಿ ಗಮನಿಸಬಹುದು.</p>
<p>ಆದರೆ ಈ ರೀತಿಯ ವಿಮರ್ಶೆಗೂ ಉತ್ತರವನ್ನು ನೂರಾರು ರಂಗುರಂಗಿನ ಪದರಗಳ ನೀಲು ತನ್ನ ಕಾವ್ಯದ ಬತ್ತಳಿಕೆಯಿಂದಲೇ ತೆಗೆದು ತೋರಿಸಿಯಾಳು. ನನಗೂ ಗೊತ್ತು ಇದೆಲ್ಲ. ಈ ಆಲಿಂಗನ ಇತ್ಯಾದೆ ಎಲ್ಲಾ ಬೋರು ಬಂದು ನಾನೂ ಬೇರೆ ದಾರಿ ಹುಡುಕುತ್ತಿದ್ದೇನೆ ಅನ್ನುವಂತೆ ಈ ಸಂಕಲನದ ಕೊನೆಯ ಸಾಲುಗಳಿವೆ:</p>
<p>‘ಪ್ರಿಯಕರ,</p>
<p>ನಿನ್ನ ಅಪ್ಪಿಗೆಯಲ್ಲಿ ಮಲಗಿ</p>
<p>ಪದ್ಯ ರಚಿಸುತ್ತಿರುವ ನನಗೆ</p>
<p>ಕ್ರಮೇಣ ನಿನ್ನ ತೋಳುಗಳು</p>
<p>ಜೈಲಿನ ಹಾಗೆ ತೋರತೊಡಗಿವೆ.&#8217;</p>
<p>(ಇದು &#8216;ದೇಶಕಾಲ&#8217;ದಲ್ಲಿ ಪ್ರಕಟವಾದ ವಿಮರ್ಶೆ.)</p>
  <a rel="nofollow" href="http://feeds.wordpress.com/1.0/gocomments/bageshree.wordpress.com/105/"><img alt="" border="0" src="http://feeds.wordpress.com/1.0/comments/bageshree.wordpress.com/105/" /></a> <a rel="nofollow" href="http://feeds.wordpress.com/1.0/godelicious/bageshree.wordpress.com/105/"><img alt="" border="0" src="http://feeds.wordpress.com/1.0/delicious/bageshree.wordpress.com/105/" /></a> <a rel="nofollow" href="http://feeds.wordpress.com/1.0/gostumble/bageshree.wordpress.com/105/"><img alt="" border="0" src="http://feeds.wordpress.com/1.0/stumble/bageshree.wordpress.com/105/" /></a> <a rel="nofollow" href="http://feeds.wordpress.com/1.0/godigg/bageshree.wordpress.com/105/"><img alt="" border="0" src="http://feeds.wordpress.com/1.0/digg/bageshree.wordpress.com/105/" /></a> <a rel="nofollow" href="http://feeds.wordpress.com/1.0/goreddit/bageshree.wordpress.com/105/"><img alt="" border="0" src="http://feeds.wordpress.com/1.0/reddit/bageshree.wordpress.com/105/" /></a> <img alt="" border="0" src="http://stats.wordpress.com/b.gif?host=bageshree.wordpress.com&blog=3977069&post=105&subd=bageshree&ref=&feed=1" /></div>]]></content:encoded>
			<wfw:commentRss>http://bageshree.wordpress.com/2008/11/09/%e0%b2%a8%e0%b3%80%e0%b2%b2%e0%b3%81%e0%b2%b5%e0%b2%bf%e0%b2%a8-%e0%b2%9c%e0%b2%be%e0%b2%a1%e0%b3%81-%e0%b2%b9%e0%b2%bf%e0%b2%a1%e0%b2%bf%e0%b2%a6%e0%b3%81/feed/</wfw:commentRss>
		<slash:comments>4</slash:comments>
	
		<media:content url="http://1.gravatar.com/avatar/5f2a5091a45da876c2ac1f5531cdc8b6?s=96&#38;d=identicon&#38;r=G" medium="image">
			<media:title type="html">Bageshree</media:title>
		</media:content>

		<media:content url="http://bageshree.wordpress.com/wp-includes/js/tinymce/plugins/wordpress/img/trans.gif" medium="image">
			<media:title type="html">More...</media:title>
		</media:content>
	</item>
		<item>
		<title>ಬೇಂದ್ರೆ ಪದ್ಯ ಓದಿದರೆ ಕೀರಂ ತರ ಓದಬೇಕು!</title>
		<link>http://bageshree.wordpress.com/2008/10/27/%e0%b2%ac%e0%b3%87%e0%b2%82%e0%b2%a6%e0%b3%8d%e0%b2%b0%e0%b3%86-%e0%b2%aa%e0%b2%a6%e0%b3%8d%e0%b2%af-%e0%b2%93%e0%b2%a6%e0%b2%bf%e0%b2%a6%e0%b2%b0%e0%b3%86-%e0%b2%95%e0%b3%80%e0%b2%b0%e0%b2%82/</link>
		<comments>http://bageshree.wordpress.com/2008/10/27/%e0%b2%ac%e0%b3%87%e0%b2%82%e0%b2%a6%e0%b3%8d%e0%b2%b0%e0%b3%86-%e0%b2%aa%e0%b2%a6%e0%b3%8d%e0%b2%af-%e0%b2%93%e0%b2%a6%e0%b2%bf%e0%b2%a6%e0%b2%b0%e0%b3%86-%e0%b2%95%e0%b3%80%e0%b2%b0%e0%b2%82/#comments</comments>
		<pubDate>Mon, 27 Oct 2008 16:59:35 +0000</pubDate>
		<dc:creator>Bageshree</dc:creator>
				<category><![CDATA[Uncategorized]]></category>

		<guid isPermaLink="false">http://bageshree.wordpress.com/?p=74</guid>
		<description><![CDATA[ಪಟಾಕಿಯ ಗಲಾಟೆ ಮನೆಯ ಆಚೆ ಎಷ್ಟೆಂದರೆ ಟಿವಿ full ವಾಲ್ಯುಮ್ ಕೊಟ್ಟರೂ ಕೇಳ್ಸೋದು ಕಷ್ಟ. ತಮಾಷೆ ತಮಾಷೆಯಲ್ಲಿಯೇ ಹೆಣ್ಣು-ಗಂಡು, ಗಂಡು-ಗಂಡು ಇತ್ಯಾದಿ confusing ಸಂಬಂಧಗಳನ್ನು ಸೀರಿಯಸ್ಸಾಗಿಯೇ ನೋಡುವ &#8220;ಕ್ವೀನ್ಸ್&#8221; ಎಂಬ ಸ್ಪಾನಿಶ್ ಸಿನಿಮಾ ಒಂದನ್ನು ಸ್ವಲ್ಪ ಹೊತ್ತು ನೋಡಿ ಮತ್ತೆ ತೆಪ್ಪಗೆ ಇದ್ದೇನೆ. (ಭಾಷೆ ಅರ್ಥವಾಗದಿದ್ದರೂ ಭಡ ಭಡ ಸದ್ದಿನ ಹಿನ್ನೆಲೆಗೆ ಸಿನೆಮಾ ನೋಡುವುದು ಕಿರಿಕಿರಿ.) ಈ ಸ್ಪಾನಿಶ್ ಸಿನೆಮಾ, ಬರವಣಿಗೆಗೆಲ್ಲ ಇದೊಂದು ಭಾರಿ ಶಕ್ತಿ ಅಲ್ಲವಾ? ಶ್ರೀಮದ್ಗಾಂಭೀರ್ಯ ಮೆರೆಯದೆ ಗಂಭೀರವಾದದ್ದನ್ನು ಹೇಳಿಬಿಡುವುದು.
ನಮ್ಮ ಮನೆದೇವರಾದ ಟೀವಿ ಹೀಗೆ ಮೌನಿಯಾದದ್ದರಿಂದ ಬೇಂದ್ರೆಯ &#8220;ಗಂಗಾವತರಣ&#8221; ಪುಸ್ತಕ ಹಿಡಿದು ಕೂತಿದ್ದೇನೆ. ನೆನ್ನೆ [...]<img alt="" border="0" src="http://stats.wordpress.com/b.gif?host=bageshree.wordpress.com&blog=3977069&post=74&subd=bageshree&ref=&feed=1" />]]></description>
			<content:encoded><![CDATA[<div class='snap_preview'><br /><p>ಪಟಾಕಿಯ ಗಲಾಟೆ ಮನೆಯ ಆಚೆ ಎಷ್ಟೆಂದರೆ ಟಿವಿ full ವಾಲ್ಯುಮ್ ಕೊಟ್ಟರೂ ಕೇಳ್ಸೋದು ಕಷ್ಟ. ತಮಾಷೆ ತಮಾಷೆಯಲ್ಲಿಯೇ ಹೆಣ್ಣು-ಗಂಡು, ಗಂಡು-ಗಂಡು ಇತ್ಯಾದಿ confusing ಸಂಬಂಧಗಳನ್ನು ಸೀರಿಯಸ್ಸಾಗಿಯೇ ನೋಡುವ &#8220;ಕ್ವೀನ್ಸ್&#8221; ಎಂಬ ಸ್ಪಾನಿಶ್ ಸಿನಿಮಾ ಒಂದನ್ನು ಸ್ವಲ್ಪ ಹೊತ್ತು ನೋಡಿ ಮತ್ತೆ ತೆಪ್ಪಗೆ ಇದ್ದೇನೆ. (ಭಾಷೆ ಅರ್ಥವಾಗದಿದ್ದರೂ ಭಡ ಭಡ ಸದ್ದಿನ ಹಿನ್ನೆಲೆಗೆ ಸಿನೆಮಾ ನೋಡುವುದು ಕಿರಿಕಿರಿ.) ಈ ಸ್ಪಾನಿಶ್ ಸಿನೆಮಾ, ಬರವಣಿಗೆಗೆಲ್ಲ ಇದೊಂದು ಭಾರಿ ಶಕ್ತಿ ಅಲ್ಲವಾ? ಶ್ರೀಮದ್ಗಾಂಭೀರ್ಯ ಮೆರೆಯದೆ ಗಂಭೀರವಾದದ್ದನ್ನು ಹೇಳಿಬಿಡುವುದು.</p>
<p>ನಮ್ಮ ಮನೆದೇವರಾದ ಟೀವಿ ಹೀಗೆ ಮೌನಿಯಾದದ್ದರಿಂದ ಬೇಂದ್ರೆಯ &#8220;ಗಂಗಾವತರಣ&#8221; ಪುಸ್ತಕ ಹಿಡಿದು ಕೂತಿದ್ದೇನೆ. ನೆನ್ನೆ ಕೀರಂ ಅವರು ಬೇಂದ್ರೆಯ ಬಗ್ಗೆ ಮಾತಡುವುದನ್ನು ಕೇಳಲಿಕ್ಕೆ ಹೋಗಿದ್ದೆ. &#8220;ಕೆವಿ ಸುಬ್ಬಣ್ಣ ಆಪ್ತ ಸಮೂಹ&#8221; ಎಂಬ ಸಾಹಿತ್ಯ ಮತ್ತು ಸಿನೆಮಾ ಅಸಕ್ತರ ಗುಂಪೊಂದು ಅದನ್ನು ಆಯೋಜಿಸಿತ್ತು. ಅದೇ ಗುಂಗು ಇನ್ನೂ ಸ್ವಲ್ಪ.<span id="more-74"></span></p>
<p>ಕೀರಂ ಪದ್ಯವನ್ನು ಓದುವ ಬಗೆಯೆಂದರೆ ಪುಟ್ಟ ಮಗುವೊಂದು ಒಂದು ಬಾರ್ ಚಾಕಲೇಟನ್ನು ಪ್ರಪಂಚದ ಆನಂದವೆಲ್ಲ ಅದರಲ್ಲೇ ಅಡಕವಾಗಿದೆ ಎಂಬಂತೆ ತಿನ್ನುವ ಬಗೆಯಂತೆ. ಅದರಲ್ಲಿ ಒಂದು ಇನೊಸೆಂಟ್ ತನ್ಮಯತೆ ಇದೆ ಅನ್ನಿಸುತ್ತದೆ. ಪಾಂಡಿತ್ಯ ಕಣ್ಣಿಗೆ ರಾಚುವುದಿಲ್ಲ, ಪದಗಳಲ್ಲಿ ಜಾರ್ಗನ್ನುಗಳ ಭರಾಟೆ ಇರುವುದಿಲ್ಲ. ಸ್ವಲ್ಪ ಸ್ಪಾನಿಶ್ ಸಿನೆಮಾದ ಹಾಗೆಯೇ! <!--more--></p>
<p>ಹಾಡುಗಳ ಮೂಲಕ ಬೇಂದ್ರೆ ಬಲ್ಲವರು ಹಾಡುಗಳಿಂದಾಚೆಯ ಅವರ ಕವಿತೆಗಳ ನೂರು ಮುಖಗಳನ್ನು ನೋಡುವ ಗೋಜಿಗೇ ಹೋಗುವುದಿಲ್ಲ ಅನ್ನುತ್ತಾ, ಬೇಂದ್ರೆಯ ಹೆಚ್ಚು ಪರಿಚಯವಿರದ ಕವನಗಳನ್ನು ಕೀರಂ ಓದಿದರು. ಬೆಂದ್ರೆಯಲ್ಲಿ ಯಾವ ಪದಕ್ಕೂ ಏಕಮುಖದ ಅರ್ಥವೇ ಇರುವುದಿಲ್ಲ ಎಂದು ಉದಾಹರಣೆಗಳ ಮೂಲಕ ಹೇಳಿದರು. ವಯಸ್ಸಾದಂತೆ ಬುದ್ಧಿಯ ಸ್ಥಿಮಿತ ತಪ್ಪುವುದು ಎಂಬ ಅರ್ಥದ &#8220;ಅರಳು ಮರಳು&#8221; ಬೇಂದ್ರೆಯ ಕಾವ್ಯದಲ್ಲಿ &#8220;ಹೂವಿನಂತೆ ಅರಳಿ ಬದುಕಿಗೆ ಮರಳುವುದು&#8221; ಎಂಬ ವಿರುದ್ಧ ಅರ್ಥ ಪಡೆಯುತ್ತದೆ! ಕನ್ನಡ ಪದಗಳ ಜೊತೆ ಹೀಗೆ ಆಟವಾಡಿ, ಬಗ್ಗಿಸಿ, ಹಿಗ್ಗಿಸಿ ನಾದಲೀಲೆಯನ್ನು  ಮೆರೆದ ಕವಿ ಬೇಂದ್ರೆ ಬಿಟ್ಟರೆ ಇನ್ನೊಬ್ಬರಿಲ್ಲವೇನೋ.</p>
<p>&#8220;ಗಂಗಾವತರಣ&#8221; ಸಂಕಲದಲ್ಲಿನ &#8220;ತಾಜಮಹಲ&#8221; ಕವನದ ಕೊನೆಯ ಸಾಲುಗಳನ್ನು ನೋಡಿ:</p>
<p>&#8220;<em>ಮಣ್ಣ ಪ್ರಕೃತಿಗೆ ಸದಾ ಮಣ್ಣ ಆಟವೇ ಸಾಜ</em></p>
<p><em>ಅಂದು ಕಥೆಯಾದೀತು  ಇಂದಿನದ್ಭುತ ತಾಜ;</em></p>
<p><em>ಬಿಟ್ಟಾವು ಈ ಕಥಾಕಲ್ಪವೃಕ್ಷದ ಕೊನೆಗೆ</em></p>
<p><em>ಪ್ರೇಮಸ್ಮಾರಕಕ್ಕೆ ಸಾವಿರದ ಸಾವಿರ ಕವನ</em>&#8220;</p>
<p>ಇಲ್ಲಿ &#8220;ತಾಜ&#8221; ಮತ್ತು &#8220;ಸಾವಿರದ&#8221; ಪದಗಳು ಹೇಗೆ ಒಮ್ಮೆಗೆ ಎರಡು ಅರ್ಥವಳನ್ನು ಧ್ವನಿಸುತ್ತವಲ್ಲವೇ? ಪಂಪನ &#8220;ದೇಸೀಗನ್ನಡ&#8221;ಕ್ಕೆ tribute ಆಗಿ ಬರೆದ &#8220;ಪಂಪನಿಗೆ&#8221; ಪದ್ಯದ ಕೊನೆಯ ಸಾಲು &#8212; &#8220;ಕನ್ನಡವು ಕನ್ನಡವ ಕನ್ನಡಿಸುತಿರಬೇಕು.&#8221; &#8212; ಇವರ ಪದಬಂಧದಾಟಕ್ಕೆ ಮತ್ತು ಅದರ ಮೂಲಕ ಹೊಳುಸುವ ವಿಶೇಷ ಅರ್ಥಕ್ಕೆ ಇನ್ನೊಂದು ಉದಾಹರಣೆ.</p>
<p>ಬೇಂದ್ರೆಯ ತಾಜಾ ತಾಜಾ ಕನ್ನಡತನಕ್ಕೆ ಉದಾಹರಣೆಯಾಗಿ ಕೀರಂ &#8220;ಸರಸ್ವತೀ ಸೂಕ್ತ&#8221; ಪದ್ಯವನ್ನು ಓದಿದರು. ಪೂರ್ತಿ ಸಂಸ್ಕೃತ ಪದಗಳಿಂದ ಕೂಡಿರಬಹುದು ಎಂಬ ಅನುಮಾನವನ್ನು ಈ ಪದ್ಯದ ಶೀರ್ಷಿಕೆ ಹುಟ್ಟಿಸಿದರೂ, ಇದರ ಮೊದಲ ಸಾಲುಗಳಲ್ಲಿ ಒಂದು ಸಂಸ್ಕೃತ ಪದವೂ ಇಲ್ಲ: &#8220;ಅಂಚೆ ಏರಿ ನೀರಿನಾಕೆ/ ಗಾಳಿಯಲ್ಲಿ ಸುಳಿದಳೋ/ ಬೆಳಕಿನಲ್ಲಿ ಬೆಳೆದಳು.&#8221; ಈ ಪದ್ಯದಲ್ಲಿ ಬಣ್ಣಗಳ unity (ಪ್ರಧಾನವಾಗಿ ಬಿಳಿ) ಹೇಗೆ ಕೆಲಸ ಮಾಡುತ್ತದೆ ಎಂದು ಕೀರಂ ಮಾತಾಡಿದದರು. &#8220;ಗಂಗಾವತರಣ&#8221; ಸಂಕಲನದ ಈ ಪದ್ಯವನ್ನು ಓದುವಾಗ ನನಗೆ ಇನ್ನೂ ಚೆಂದ ಅನ್ನಿಸುತ್ತಿರುವುದು ಈ ಪದ್ಯದಲ್ಲಿ ಹಂಸಕ್ಷೀರ ನ್ಯಾಯ subvert ಆಗುವ ರೀತಿ. &#8216;ನೀರೇ ಇಲ್ಲದ ಹಾಲು ಏನು ಚೆಂದ?&#8217; ಎಂಬ ಭಾವ:</p>
<p>&#8220;ಏನು ಸವಿಯೋ ಅದನೆ ಕುಡಿ</p>
<p>ನಿನ್ನ ರುಚಿಯ ಹದವ ಹಿಡಿ</p>
<p>ನನ್ನನೇನು ಕೇಳುವೆ</p>
<p>ಆದರೂನು ಹೇಳುವೆ&#8230;</p>
<p>ನೀರು ಇರದ ಹಾಲು ಕೊನೆಗೂ</p>
<p>ಅಲ್ಲವೇನೊ ನೀರಸ</p>
<p>ಹೇಳು ನನ್ನ ಸಾರಸ&#8230;&#8221;</p>
<p>ಆಧ್ಯಾತ್ಮ ಸಾಹಿತ್ಯದಲ್ಲಿ ಅಗಾಧವಾದ ತಾಲೀಮು ಹೊಂದಿದ್ದ ಬೇಂದ್ರೆಯನ್ನು &#8220;ಆಧ್ಯಾತ್ಮದ ಕವಿ&#8221; ಎಂದು ಕೆಲವರು ಕರೆದರೆ, ಇನ್ನು ಕೆಲವರು ಇವರ ಆಡುಭಾಷೆಯ ಬಳಕೆಯಿಂದಾಗಿ &#8220;ಜಾನಪದ ಕವಿ&#8221; ಎಂದು ಹಣೆಪಟ್ಟಿ ಹಚ್ಚಿಬಿಡುತ್ತಾರೆ. ಬೇಂದ್ರೆ ಪೂರ್ತಿಯಾಗಿ &#8220;ಲೌಕಿಕ ಕವಿ&#8221; ಎಂದು ಕೀರಂ ಹೇಳಿ, ಇವರ ಕೆಲವು &#8220;ಕರುಳಿನ ವಚನ&#8221;ಗಳನ್ನು ಉದಾಹರಣೆಯಾಗಿ ಓದಿದರು. ಈಗ ನಾನು ಓದುತ್ತಿರುವ ಸಂಕಲನದ &#8220;ಅನ್ನಯಜ್ನ&#8221; ಓದಿದರಂತೂ ಬೇಂದ್ರೆಯವರು ನಮ್ಮ ಇಂದಿನ ಸಾಮಾಜಿಕ ಅಸಮತೋಲನದ ಬಗ್ಗೆ, recession ಬಗ್ಗೆ ಮಾತನಾಡುತ್ತಿರುವಂತೆ ಭಾಸವಾಗುತ್ತದೆ:</p>
<p>&#8220;ಕೂಸುಗಳಿಗೆ ಹಾಲು ಇಲ್ಲ, ಪಶುಬಲಿಯೇ ನಡೆದಿದೆ</p>
<p>ಕಾಳು ಇದೆ ಕೂಳು ಇಲ್ಲ, ಹಣದ ಹುಚ್ಚು ಹಿಡಿದಿದೆ.</p>
<p>ಕತ್ತಲಲ್ಲಿ ಬೆಳಕೇ ಇಲ್ಲ, ಜಗಕೆ ಬೆಂಕಿ ಹತ್ತಿದೆ.</p>
<p>ಎಲ್ಲ ಇದೆ ಎಲ್ಲ ಇಲ್ಲ, ಇಲ್ಲೆ ಸುತ್ತು ಮುತ್ತಿದೆ.&#8221;</p>
<p>ಈ ಪದ್ಯದ ಕೊನೆಯ ಸಾಲುಗಳು ಹೀಗಿವೆ: &#8220;ಹೊನ್ನ ನೆಕ್ಕಿ ಬಾಳ್ವರಿಲ್ಲ, ಅನ್ನ ಸೂರೆ ಮಾಡಿರಿ.</p>
<p>ಆಣ್ಣಗಳಿರಾ ಅನ್ನದಲ್ಲಿ ಮಣ್ಣ ಕಲಸಬೇಡಿರಿ.&#8221;</p>
<p>ಇದೇ ಸಂಕಲನದ &#8220;ಜೋಗಿ&#8221; ಪದ್ಯವನ್ನು ವಾಮನ್ ಬೇಂದ್ರೆ &#8220;ಭಕ್ತ-ಭಗವಂತ&#8221; ಸಂಬಂಧದ ನೆಲೆಯಲ್ಲಿ ಮುನ್ನುಡಿಯಲ್ಲಿ ಅರ್ಥೈಸುತ್ತಾರೆ. ಆದರೆ ಅದೆಲ್ಲ ಬಿಟ್ಟು ಒಂದು ಪ್ರೇಮ ಕವನವಾಗಿ ನೋಡಿದರೆ ಇದರ sexual metaphors ಎಷ್ಟು powerful ಆದದ್ದು ಅನ್ನಿಸುತ್ತದೆ ಅಲ್ಲವಾ?</p>
<p>ಲಂಕೇಶ್ ಅವರು ಬೇಂದ್ರೆಯ ಬಗ್ಗೆ &#8220;ಬೇಂದ್ರೆಯವರ ಬಗ್ಗೆ ಮಾತಾಡಲು ಸಿದ್ಧತೆ&#8221; ಎಂಬ ಲೇಖನದಲ್ಲಿ ಬರೆಯುತ್ತಾ ಆಧುನಿಕತೆಯ ಉತ್ತುಂಗ ಕಾಲದಲ್ಲಿ ನಾವೆಲ್ಲಾ ಬೇಂದ್ರೆಯನ್ನು &#8220;ಗೇಯಗುಣದ ಕವಿ&#8221; ಅಂತ dismiss ಮಾಡಿಬಿಟ್ಟೆವಲ್ಲ ಎಂದು ಹಲುಬುತ್ತಾರೆ. ಲಂಕೇಶ್ ವ್ಯಾಖ್ಯಾನದ ಪ್ರಕಾರ ಇಂದಿನ &#8220;ಅಂತರ್ರಾಷ್ಟ್ರೀಯ ಮನಸ್ಸಿಗೆ&#8221; ಬೇಂದ್ರೆಯವರ &#8220;ಸ್ಥಳೀಯತೆಯ ಅಮೃತದಿಂದ&#8221; ಗಟ್ಟಿಯಾದ ವ್ಯಕ್ತಿತ್ವ ಎಟಕುವುದಿಲ್ಲ. ಆದರೆ ಬೇಂದ್ರೆಯವರ ವ್ಯಕ್ತಿತ್ವದಲ್ಲಿ ಅವರದೇ ಬ್ರ್ಯಾಂಡಿನ &#8220;ದೇಸೀಯ&#8221;ಗೊಂಡ ಅಂತರ್ರಾಷ್ಟ್ರೀಯತೆ ಇತ್ತು ಅನ್ನುವುದನ್ನು ಲಂಕೇಶ್ ಪ್ರಸ್ತಾಪಿಸುವುದಿಲ್ಲ. ಲಂಕೇಶ್ ಅವರ ಈ ಲೇಖನ ಓದುವಾಗ ಆಧುನಿಕರ superior attitude ಅವರನ್ನು ಪೂರ್ತಿಯಾಗಿ ಬಿಟ್ಟಿಲ್ಲವೇನೋ ಅಂತಲೇ ಅನ್ನಿಸುತ್ತದೆ. ಸಂಸ್ಕೃತ ಮತ್ತು ಕನ್ನಡ ಕಾವ್ಯ, ಭಾರತೀಯ ಮತ್ತು ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆ, ಶಾಕ್ತ ಸಂಪ್ರದಾಯ, ಅಂಕ ಗಣಿತ, ಸುಮಾರಷ್ಟು world literature ಎಲ್ಲವನ್ನೂ ಓದಿದ್ದ ಬೇಂದ್ರೆಯ ಪೂರ್ಣ ಚಿತ್ರ ಲಂಕೇಶರ ಈ ಲೇಖನದಲ್ಲಿ ಕಾಣುವುದಿಲ್ಲ. ಐರಿಶ್ ರಾಷ್ಟ್ರಗೀತೆಯನ್ನು ಲಾವಣಿ ಧಾಟಿಯಲ್ಲಿ ಬೇಂದ್ರೆ ಭಾವಾನುವಾದ ಮಾಡಿದ್ದಾರೆ ಅಂತ ಕೀರಂ ಹೇಳಿದರು. (ಇದನ್ನು ಯಾರಾದರೂ ಓದಿದ್ದೀರಾ? ನನಗೆ ಸಿಕ್ಕಿಲ್ಲ.)</p>
<p>ಬೇಂದ್ರೆ ಇಷ್ಟೆಲ್ಲ fasincating ಅನ್ನಿಸಿದರೂ ನನಗೆ ಬೇಂದ್ರೆಯ ಬಗೆಗಿನ ಕೆಲವು ವಿಚಾರಗಳು ಅರ್ಥವಾಗುವುದಿಲ್ಲ. &#8220;ನಾಕು ತಂತಿ&#8221;ಯಂತಹ ಪದ್ಯಗಳಲ್ಲಿ ಶಬ್ದ ಮತ್ತು ಗಣಿತದ mysterious ಲೆಕ್ಕಾಚಾರಗಳ ದೆಸೆಯಿಂದ ಪದ್ಯವೇ ತೀರ dense ಆಗಿ ಹೋಗಿ ಅದನ್ನು ಹೇಗೆ ಓದಬೇಕು ಅಂತಲೇ ಅರ್ಥವಾಗುವುದಿಲ್ಲ. ಅಥವ &#8220;ಅರ್ಥ&#8221; ಮಾಡಿಕೊಳ್ಳುವ ಪ್ರಯತ್ನ ಮಾಡದೆ ಸಂಗೀತ ಆನಂದಿಸಿದಂತೆ ಸುಮ್ಮನೆ ಆನಂದಿಸಬೇಕೆ? ಮತ್ತೆ ಉಪನಿಷತ್ ಸಾರ ಅರೆದು ಕುಡಿದಿದ್ದ ಬೇಂದ್ರೆ ಕೊನೆಗೆ ಎಲ್ಲ ಬಿಟ್ಟು ಪುಟಪರ್ತಿ ಸಾಯಿಬಾಬ ಭಕ್ತರಾದದ್ದು ಹೇಗೆ ಎಂಬುದು ಇನ್ನೂ ಕಗ್ಗಂಟಾದ ಸಮಸ್ಯೆ.</p>
<p>ಮುಂದಿನ ಸಾರಿ ಕೀರಂ ಸಿಕ್ಕಿದಾಗಲೇ ಇವೆಲ್ಲ ಪ್ರಶ್ನೆಗಳನ್ನು ಕೇಳಬೇಕು.</p>
<p>ಸಧ್ಯಕ್ಕಂತೂ ಕನ್ನಡಪದಗಳನ್ನು ಆಡಿದರೆ ಬೆಂದ್ರೆ ತರ ಆಡಬೇಕು, ಬೆಂದ್ರೆ ಪದ್ಯ ಓದಿದರೆ ಕೀರಂ ತರ ಓದಬೇಕು ಅಂತ ಅಂದುಕೊಂಡು ಮನೆದೇವರ ಮೌನವನ್ನೂ ಮರೆತು ಖುಷಿಯಾಗಿ ಇದ್ದೇನೆ!</p>
  <a rel="nofollow" href="http://feeds.wordpress.com/1.0/gocomments/bageshree.wordpress.com/74/"><img alt="" border="0" src="http://feeds.wordpress.com/1.0/comments/bageshree.wordpress.com/74/" /></a> <a rel="nofollow" href="http://feeds.wordpress.com/1.0/godelicious/bageshree.wordpress.com/74/"><img alt="" border="0" src="http://feeds.wordpress.com/1.0/delicious/bageshree.wordpress.com/74/" /></a> <a rel="nofollow" href="http://feeds.wordpress.com/1.0/gostumble/bageshree.wordpress.com/74/"><img alt="" border="0" src="http://feeds.wordpress.com/1.0/stumble/bageshree.wordpress.com/74/" /></a> <a rel="nofollow" href="http://feeds.wordpress.com/1.0/godigg/bageshree.wordpress.com/74/"><img alt="" border="0" src="http://feeds.wordpress.com/1.0/digg/bageshree.wordpress.com/74/" /></a> <a rel="nofollow" href="http://feeds.wordpress.com/1.0/goreddit/bageshree.wordpress.com/74/"><img alt="" border="0" src="http://feeds.wordpress.com/1.0/reddit/bageshree.wordpress.com/74/" /></a> <img alt="" border="0" src="http://stats.wordpress.com/b.gif?host=bageshree.wordpress.com&blog=3977069&post=74&subd=bageshree&ref=&feed=1" /></div>]]></content:encoded>
			<wfw:commentRss>http://bageshree.wordpress.com/2008/10/27/%e0%b2%ac%e0%b3%87%e0%b2%82%e0%b2%a6%e0%b3%8d%e0%b2%b0%e0%b3%86-%e0%b2%aa%e0%b2%a6%e0%b3%8d%e0%b2%af-%e0%b2%93%e0%b2%a6%e0%b2%bf%e0%b2%a6%e0%b2%b0%e0%b3%86-%e0%b2%95%e0%b3%80%e0%b2%b0%e0%b2%82/feed/</wfw:commentRss>
		<slash:comments>7</slash:comments>
	
		<media:content url="http://1.gravatar.com/avatar/5f2a5091a45da876c2ac1f5531cdc8b6?s=96&#38;d=identicon&#38;r=G" medium="image">
			<media:title type="html">Bageshree</media:title>
		</media:content>
	</item>
		<item>
		<title>ಗುಲಾಬಿ ಟಾಕೀಸು ಮತ್ತು ದೊಡ್ಡ ಅಲೆಗಳು</title>
		<link>http://bageshree.wordpress.com/2008/10/13/%e0%b2%97%e0%b3%81%e0%b2%b2%e0%b2%be%e0%b2%ac%e0%b2%bf-%e0%b2%9f%e0%b2%be%e0%b2%95%e0%b3%80%e0%b2%b8%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a6%e0%b3%8a%e0%b2%a1%e0%b3%8d/</link>
		<comments>http://bageshree.wordpress.com/2008/10/13/%e0%b2%97%e0%b3%81%e0%b2%b2%e0%b2%be%e0%b2%ac%e0%b2%bf-%e0%b2%9f%e0%b2%be%e0%b2%95%e0%b3%80%e0%b2%b8%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a6%e0%b3%8a%e0%b2%a1%e0%b3%8d/#comments</comments>
		<pubDate>Mon, 13 Oct 2008 16:05:50 +0000</pubDate>
		<dc:creator>Bageshree</dc:creator>
				<category><![CDATA[Uncategorized]]></category>

		<guid isPermaLink="false">http://bageshree.wordpress.com/?p=65</guid>
		<description><![CDATA[ಗುಲಾಬಿ ಟಾಕೀಸ್ ಸಿನೆಮಾ ನೋಡುವುದಕ್ಕೆ ಮೊದಲು ಒಂದು statutory warning: ಇದೇ ಹೆಸರಿನ ವೈದೇಹಿಯ ಮೂಲ ಕತೆಯನ್ನು ಸಿನೆಮಾ ನೋಡುವುದಕ್ಕೆ ಮುಂಚೆ ಓದಿಕೊಂಡು ಹೋಗಬೇಡಿ. ಈಗಾಗಲೆ ಓದಿಬಿಟ್ಟಿದ್ದರೆ ಅದಕ್ಕೂ ಸಿನೆಮಾಕ್ಕೂ ಏನಾದರೂ ಸಂಬಂಧ ಇರಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಂತೂ ಹೋಗಬೇಡಿ. ಕತೆ ಮತ್ತು ಸಿನೆಮಾಗಿರುವ ವ್ಯತ್ಯಾಸ ಸಣ್ಣ ಅಲೆ ಮತ್ತು ಸೈಕ್ಲೋನಿನ ನಡುವಿನ ವ್ಯತ್ಯಾಸದಂತಹದು.
ರೋಲಾಂಡ್ ಬಾರ್ಥ್‌ನ ಹಾಗೆ &#8220;death of the author&#8221; ಬಗ್ಗೆ ಪೂರ್ತಿ ನಂಬಿಕೆ ಇಟ್ಟು, ಒಂದು ಪಠ್ಯದ ಓದು ಯಾವ್ಯಾವ ದಿಕ್ಕಿನಲ್ಲಿ ಬೇಕಾದರೂ [...]<img alt="" border="0" src="http://stats.wordpress.com/b.gif?host=bageshree.wordpress.com&blog=3977069&post=65&subd=bageshree&ref=&feed=1" />]]></description>
			<content:encoded><![CDATA[<div class='snap_preview'><br /><p>ಗುಲಾಬಿ ಟಾಕೀಸ್ ಸಿನೆಮಾ ನೋಡುವುದಕ್ಕೆ ಮೊದಲು ಒಂದು statutory warning: ಇದೇ ಹೆಸರಿನ ವೈದೇಹಿಯ ಮೂಲ ಕತೆಯನ್ನು ಸಿನೆಮಾ ನೋಡುವುದಕ್ಕೆ ಮುಂಚೆ ಓದಿಕೊಂಡು ಹೋಗಬೇಡಿ. ಈಗಾಗಲೆ ಓದಿಬಿಟ್ಟಿದ್ದರೆ ಅದಕ್ಕೂ ಸಿನೆಮಾಕ್ಕೂ ಏನಾದರೂ ಸಂಬಂಧ ಇರಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಂತೂ ಹೋಗಬೇಡಿ. ಕತೆ ಮತ್ತು ಸಿನೆಮಾಗಿರುವ ವ್ಯತ್ಯಾಸ ಸಣ್ಣ ಅಲೆ ಮತ್ತು ಸೈಕ್ಲೋನಿನ ನಡುವಿನ ವ್ಯತ್ಯಾಸದಂತಹದು.</p>
<p>ರೋಲಾಂಡ್ ಬಾರ್ಥ್‌ನ ಹಾಗೆ &#8220;death of the author&#8221; ಬಗ್ಗೆ ಪೂರ್ತಿ ನಂಬಿಕೆ ಇಟ್ಟು, ಒಂದು ಪಠ್ಯದ ಓದು ಯಾವ್ಯಾವ ದಿಕ್ಕಿನಲ್ಲಿ ಬೇಕಾದರೂ ಹರಿಯಬಹುದು ಎಂದು ಮನದಟ್ಟು ಮಾಡಿಕೊಂಡು, ವೈದೇಹಿ ಕತೆಯ ಹಳೆಯ ಓದಿನ ಭಾರವನ್ನು ಬದಿಗಿಟ್ಟ ನಂತರವೇ ಈ ಸಿನೆಮಾ ನೋಡಲಿಕ್ಕೆ ಸಾಧ್ಯ. ಆದ್ದರಿಂದ ಋಷಿ, ನದಿ, ಸಿನೆಮಾ ಎಲ್ಲದರ ಮೂಲಗಳನ್ನೂ ಬಿಟ್ಟು ಮುಂದಿನ ಮಾತು.<span id="more-65"></span></p>
<p>ಕೋಮುವಾದಿ ವಿಷ ನಮ್ಮ ಹೃದಯಕ್ಕೆ, ಮೆದುಳಿಗೆ ತಲುಪಿಯಾಯಿತು ಎಂದು ಅನ್ನಿಸುವಂತಹ ನಮ್ಮ ಸಂದರ್ಭದಕ್ಕೆ ಈ ಚಿತ್ರ ಅತ್ಯಂತ ಪ್ರಸ್ತುತವಾದದ್ದು. ನನ್ನ ದೃಷ್ಟಿಯಲ್ಲಿ, ಕಾಸರವಳ್ಳಿಯವರ ನಾನು ನೋಡಿದ ಎಲ್ಲಾ ಸಿನೆಮಾಗಳಲ್ಲಿ ತನ್ನ ಕಾಲದ ನಾಡಿಯನ್ನು ಅತ್ಯಂತ ಕರಾರುವಾಕ್ಕಾಗಿ ಹಿಡಿಯುವ, ಸಂದರ್ಭದ ಆಯಾಮಗಳನ್ನು ಎಲ್ಲೂ ಸರಳೀಕರಿಸದೆ ಕಟ್ಟಿರುವ ಅತ್ಯಂತ ಗಟ್ಟಿಮುಟ್ಟಾದ ಚಿತ್ರ ಗುಲಾಬಿ ಟಾಕೀಸ್. <img title="More..." src="http://bageshree.wordpress.com/wp-includes/js/tinymce/plugins/wordpress/img/trans.gif" alt="" /></p>
<p>ಸಿನೆಮಾದ ಗುಲಾಬಿ ಬ್ಯಾರಿ ಜನಾಂಗದ ಸೂಲಗಿತ್ತಿ ಹೆಂಗಸು. ಅವಳ ಕಿಲಾಡಿ ಗಂಡ ಮೂಸ ತಲಾಕ್ ನೀಡದಿದ್ದರೂ ಇವಳಿಂದ ದೂರವಾಗಿ ಬೇರೆ ಸಂಸಾರ ಹೂಡಿದ್ದಾನೆ. ಎರಡನೆ ಹೆಂಡತಿಯಿಂದ ಒಬ್ಬ ಮಗ ಇದ್ದಾನೆ. ನೂರಾರು ಹೆರಿಗೆ ಮಾಡಿಸುವ ಇವಳಿಗೆ ಮಕ್ಕಳಿಲ್ಲ. ಮಲಮಗ ಅದ್ದುನ ಒಂದು ಪ್ರೀತಿಯ ಮುತ್ತಿಗಾಗಿ ಕಾಡಿ, ಬೇಡಿ, ಲಂಚ ನೀಡಿ ತಹತಹಿಸುತ್ತಾಳೆ. ಬಹಳಷ್ಟು ಸಂದರ್ಭಗಳಲ್ಲಿ ಅದೂ ಸಿಗುವುದಿಲ್ಲ. ಹೀಗೆ ಗುಲಾಬಿ ತನ್ನ ಸ್ವಂತ ಸಂಸಾರದ ಲೆಕ್ಕದಲ್ಲಿ ನೋಡಿದರೆ ಒಂಟಿ. ಆದರೆ ಅವಳಿಗೆ ಇಡೀ ಊರೇ ಸಂಸಾರ. ಅದಕ್ಕಿಂತ ಹೆಚ್ಚು ಸಿನೆಮಾಗಳ ರಂಗುರಂಗಿನ ಪ್ರಪಂಚದ ಊರುಗೋಲು ಅವಳಿಗಿದೆ. ದಿನಾ ತಪ್ಪದೆ ಅವಳು ಸಿನೆಮಾ ನೋಡುತ್ತಾಳೆ. ಒಂದೇ ಸಿನೆಮಾವನ್ನು ದಿನಾ ನೋಡಿಯೂ ಹೊಸ ಹೊಸ ಕನಸುಗಳನ್ನು ನೋಡುವ ಒಳಗಣ್ಣು ಅವಳಿಗಿದೆ. ಅವಳ ವ್ಯಕ್ತಿತ್ವದಲ್ಲಿಯೇ ಅಂತರ್ಗತವಾಗಿ ಎಲ್ಲದರಲ್ಲಿಯೂ ತಮಾಷೆಯ ಎಳೆಯನ್ನು ನೋಡುವ ಶಕ್ತಿ ಮತ್ತು ದಿನದಿನದ ಬದುಕಿನಿಂದಲೇ ಹುಟ್ಟುವ ಸಹಜ ತತ್ವಜ್ನಾನದ ಹೊಳಹೂ ಇದೆ.</p>
<p>ಇವಳ ಸಣ್ಣ ಕಿಟಕಿಯಿಂದಾಚೆ ಕಾಣುವುದು ಹಳ್ಳಿಯ ದೃಷ್ಯಗಳು. ಮೀನುಗಾರರ ಕಷ್ಟದ ಜೀವನ, ಇವರ ಒಳಜಗಳಗಳು, ಬಡತನ, ಇವರ ನಗು, ಅಳು. ಇನ್ನೂ ಆಚೆ ಇವೆಲ್ಲವನ್ನೂ ನಿರ್ವಿಕಾರವಾಗಿ ನೋಡುವ ಸಮುದ್ರ. ಅದರಾಚೆ ಪಟ್ಟಣ.</p>
<p>ಒಂದು ಕಷ್ಟದ ಪ್ರಸವಕ್ಕೆ ಸಹಾಯ ಮಾಡಿದ್ದಕ್ಕೆ ಶ್ರೀಮಂತ ಮಹಿಳೆಯೊಬ್ಬಳು ಗುಲಾಬಿಗೆ ಸ್ಯಾಟಲೈಟ್ ಟೀವಿ ಕೊಟ್ಟ ಮೇಲೆ ಗುಲಾಬಿಯ ವೈಯ್ಯಕ್ತಿಕ ಜೀವನ, ಹಳ್ಳಿಯ ಜೀವನ ಮತ್ತು ಇವೆರಡನ್ನು ಬೆಸೆಯುವ ಬಗೆ ಬದಲಾಗುತ್ತಾ ಹೋಗುತ್ತದೆ. ಹೆಂಗಸರ ಪ್ರಪಂಚಕ್ಕೆ ಒಂದು ಹೊಸಬಗೆಯ ರಂಗಿನ ಲೇಪನವಾಗುತ್ತದೆ. ಈ ರಂಗಿನಲ್ಲಿ ಅವರ ಸ್ವಂತ ಜೀವನಕ್ಕೆ ಟ್ರಾಜಿಡಿ, ಕಾಮೇಡಿ ಎರಡೂ ತರುವ ಸಾಧ್ಯತೆಗಳು ಬೆರೆತಿವೆ.</p>
<p>ಇದೆಲ್ಲವನ್ನು ನಿಧಾನವಾಗಿ ಬಳಸಿಕೊಳ್ಳುತ್ತಾ ಸಾಗುವುದು ೯೦ರ ದಶಕದ ರಾಜಕೀಯ ಸನ್ನಿವೇಶ. ಒಂದು ಕಡೆಯಲ್ಲಿ ಕಾರ್ಗಿಲ್ ಯುದ್ಧ ಶುರುವಾಗಿದೆ. ಇನ್ನೊಂದೆಡೆ ಕರಾವಳಿಯಲ್ಲಿ ಟ್ರಾಲರ್ ಗಳು ತಂದ ಆರ್ಥಿಕ ಜಾಗತೀಕರಣದ ಅಲೆಗಳು ಮೀನುಗಾರಿಕೆಯ ತಳಹದಿಯನ್ನು ಅಲ್ಲಾಡಿಸುತ್ತಿದೆ. ಗಲ್ಫಿನಿಂದ ಬಂದ ದುಡ್ಡಿದೆ. ಅದರ ವಿರುದ್ಧ ಮೀನುಗಾರರಿಗೆ ರೋಷವಿದೆ. ಸರ್ಕಾರ ಇದೇ ಸಮಯಕ್ಕೆ ಬಹುರಾಷ್ಟ್ರೀಯ ಕಂಪನಿಗಳಿಗೆ ಬೇಕಾಬಿಟ್ಟಿ ಮೀನು ಹಿಡಿಯುವ ಲೈಸೆನ್ಸ್ ಕೊಡುತ್ತಿದೆ. ಬಲ ಪಂಥೀಯ ವಿಚಾರ ಧಾರೆಯ ಹರಿಕಾರರು ಈ ಸಂದರ್ಭದಲ್ಲಿ ತಮ್ಮ ರಾಜಕೀಯಕ್ಕೆ ಬೇಕಾದದ್ದನ್ನು ಮಾತ್ರ ಹೆಕ್ಕಿ ಬಳಸಿಕೊಳ್ಳಲು ಮಸಲತ್ತು ನಡೆಸುತ್ತಿದ್ದಾರೆ.</p>
<p>ಇದೆಲ್ಲಾ ಪರ್ಯಾವಸಾನವಾಗುವುದು ಗುಲಾಬಿ &#8220;ಹೊರಗಿನವಳು&#8221; ಎಂದು ಕುದ್ರುವಿನ ಹೊರಗಿನಿಂದ ಬಂದ ವ್ಯಕ್ತಿಗಳು ತೀರ್ಮಾನ ತೆಗೆದುಕೊಂಡು ಅವಳನ್ನು ಹೊರ ಹಾಕುವುದರೊಂದಿಗೆ. ಆದರೆ ಗುಲಾಬಿಯ ವ್ಯಕ್ತಿತ್ವಕ್ಕೆ ಒಂದು ಒಳಗಣ ಶಕ್ತಿ ಇದೆ. ಈ ಪುಂಡರ ಹಿಕ್ಮತ್ತಿನ ಮುಂದೆ ಅವಳ ದೈಹಿಕ ಶಕ್ತಿ ಸೋತರೂ ಅವಳ ಡಿಗ್ನಿಟಿ ಸೋಲುವುದಿಲ್ಲ. ಔಟ್ ಎಂದು ಇಂಗ್ಲಿಷ್ ಬಳಸಿ ಅವಳನ್ನು ಹೊರದಬ್ಬುವ ಪುಂಡ ಯುವಕನಿಗೆ ನಾನು ನಿನ್ನ ಅಬ್ಬಿ ಹೆರಿಗೆಗೆ ಬರದೆ ಇದ್ದಿದ್ದ್ರೆ ನೀನು ಅವತ್ತೇ ಔಟ್ ಆಗ್ತಿದ್ದೆ ಅನ್ನುತ್ತಾಳೆ. ಊರಿಂದ ಹೊರ ಹೋದರೂ ಹೆಂಗಸರು ಹೆರುವವರೆಗೆ ತನ್ನ ಜೀವನಕ್ಕೆ ಕಷ್ಟ ಇಲ್ಲ ಅನ್ನುವ ಅವಳ ಧೈರ್ಯವನ್ನು ಯಾರೂ ಕಿತ್ತುಕೊಳ್ಳಲಿಕ್ಕೆ ಸಾಧ್ಯವಿಲ್ಲ.</p>
<p>ಗುಲಾಬಿಯ ಜೀವನ, ಹಳ್ಳಿಯ ದಿನದಿನದ ಆಗುಹೋಗುಗಳು, ಬಡತನ, ಸಾಲಸೂಲ, ಜಾತೀಯತೆ, ಕೋಮು-ಕೋಮುಗಳ ನಡುವಿನ ಸಂಬಂಧ, ಹೆಣ್ಣು-ಗಂಡಿನ ನಡುವಿನ ಸಂಬಂಧ, ಪುರುಷ ಪ್ರಧಾನ್ಯತೆ, ಸ್ಯಾಟಲ್ಲೈಟ್ ಟಿವಿ ಊರಿನಲ್ಲಿ ತರುವ ಸ್ಥಿತ್ಯಂತರಗಳು, ತೊಂಬತ್ತರ ದಶಕದಲ್ಲಿ ಕಾರವಳಿಯಲ್ಲಿ ಏಳುತ್ತಿದ್ದ ಕೋಮುವಾದದ ಅಲೆ ದೊಡ್ಡದಾಗುತ್ತಾ ಬೆಳೆದದ್ದು, ಆರ್ಥಿಕ ಜಾಗತೀಕರಣದಿಂದ ಮೀನುಗಾರಿಕೆಯ ವೃತ್ತಿಯ ಮೇಲೆ ಆಗುತ್ತಿದ್ದ ಪರಿಣಾಮಗಳು, ದೂರದ ಕಾರ್ಗಿಲ್ಲಿನಲ್ಲಿ ನಡೆಯುತ್ತಿದ್ದ ಯುದ್ಧ, ಅದನ್ನು ಆಕಾಶ ಮಾರ್ಗೇನ ಕುದ್ರು ಎಂಬ ಕುಗ್ರಾಮದ ಟೀವಿಯಲ್ಲಿ ಬಿಂಬಿಸುವ ಕಣ್ಣಿಗೆ ಕಾಣದ ಶಬ್ದದ ಅಲೆಗಳು, ಇದೆಲ್ಲವನ್ನೂ ಬಳಸಿಕೊಳ್ಳುವ ಕಾಣದ ರಾಜಕೀಯ ಕೈಗಳು&#8230; ಹೀಗೆ micro ಮತ್ತು macro ಸ್ತರಗಳಲ್ಲೆರಡರಲ್ಲೂ ಒಮ್ಮೆಲೇ ಸಿನೆಮಾ ಬಿಚ್ಚಿಕೊಳ್ಳುತ್ತಾ, ಒಂದಕ್ಕೊಂದು ಹೊಸೆದುಕೊಳ್ಳುತ್ತಾ ಹೋಗುತ್ತದೆ. ಈ ಸಿನೆಮಾದ ದೊಡ್ಡ ಶಕ್ತಿ ಇರುವುದು ಇದು ಬೇರೆ ಬೇರೆ ಬಣ್ಣದ ಎಳೆಗಳನ್ನು ನಿಧಾನವಾಗಿ ನೂಲುತ್ತಾ, ಅವನ್ನು ಒಟ್ಟಿಗೆ ತಂದು ಒಂದು ಬಲೆಯನ್ನು ನೇಯುವ ಬಗೆ.</p>
<p>ದೊಡ್ಡ ಪ್ರಪಂಚವನ್ನು ತೋರುವ ಟೀವಿಯ ಕಂಡಿ ಮತ್ತು ಗುಲಾಬಿಯ ಮನೆಯಿಂದ ಹೊರಗೆ ಮತ್ತು ಹೊರಗಿಂದ ಒಳಗೆ ನೋಡುವ ಪುಟ್ಟ ತಳಿಕಂಡಿಯನ್ನು ಚಿತ್ರದುದ್ದಕ್ಕೂ ಕಾಸರವಳ್ಳಿಯವರು juxtapose ಮಾಡುತ್ತಾ ಹೋಗುವುದನ್ನು ಗಮನಿಸಬಹುದು. ಹಿಂದಿನ ಹಲವು ಚಿತ್ರಗಳಲ್ಲಿ (ಉದಾಹರಣೆಗೆ ಮನೆ ಮತ್ತು ಕ್ರೌರ್ಯ) ಸಿಂಬಲ್‌ಗಳನ್ನು ತುಂಬ ಪ್ರಯತ್ನಪೂರ್ವಕವಾಗಿ ಬಳಸಿದಂತೆ ನನಗೆ ತೋರುತ್ತಿದ್ದರೆ, ಈ ಚಿತ್ರದಲ್ಲಿ ಕಿಟಕಿ, ಬೆಕ್ಕು ಈ ರೀತಿಯ ಸಿಂಬಲ್ಲುಗಳು ಹೊರತಾಗಿ ನಿಲ್ಲುವುದಿಲ್ಲ ಅನ್ನಿಸಿತು.</p>
<p>ಈ ಚಿತ್ರದ ನೇಯ್ಗೆ ಎಲ್ಲಿಯೂ ಜಾಳಾಗದೆ, ಸುಲಭದ ಕಪ್ಪು-ಬಿಳುಪಿನ ಪ್ಯಾಟರ್ನುಗಳಿಗೆ ಶರಣಾಗದೆ ಸಾಗುವ ರೀತಿ ಇದರ ಇನ್ನೊಂದು ವಿಶೇಷ. ಉದಾಹರಣೆಗೆ, ಈ ಹೊರಗಿನವರು ಜಾತಿ-ಮತ ವೈಷಮ್ಯ ಬಿತ್ತುವುದಕ್ಕೆ ಮೊದಲು ಕುದ್ರುವೇನೂ ಸಮಾನತೆಯೇ ರಾರಾಜಿಸುವ ಕನಸಿನ ರಾಜ್ಯ ಆಗಿರಲಿಲ್ಲ ಎಂಬುದನ್ನು ಕಾಸರಗಳ್ಳಿ ಸೂಕ್ಷ್ಮವಾಗಿ ಸೂಚಿಸುತ್ತಾರೆ. ವಾಸಿಂನ ಜಾತಿ ಬುದ್ಧಿಯನ್ನು ಹಂಗಿಸುವ ಪರಿಪಾಠ, ಯಾರನ್ನು ಯಾರು ಮುಟ್ಟಬಹುದು ಮತ್ತು ಮುಟ್ಟಬಾರದು ಎಂಬ ಕಟ್ಟಳೆಗಳು, ಹೆಂಗಸರನ್ನು ಹದ್ದುಬಸ್ತಿನಲ್ಲಿಡುವುದು ಗಂಡಸ್ತನದ ಸಂಕೇತ ಎಂಬ ನಂಬಿಕೆ ಎಲ್ಲವೂ ಇದ್ದೇ ಇದೆ. ಸ್ಥಳೀಯ ಬಂಡವಾಳಶಾಹಿಯ ಬಿಗಿಮುಷ್ಟಿಯಲ್ಲಿ, ಸಾಲದ ಬಲೆಯಲ್ಲಿಯೇ ಇಲ್ಲಿನ ಎಲ್ಲಾ ಮೀನುಗಾರರೂ ಇರುವುದು. ಸಂಘ ಪರಿವಾರಿಗಳು (ಹಾಗಂತ ನೇರ ಪ್ರಸ್ತಾಪ ಚಿತ್ರದಲ್ಲಿ ಇಲ್ಲದಿದ್ದರೂ ಇದು ಸರ್ವವಿದಿತ) ಈ ಎಲ್ಲ ನೆಲದಲ್ಲೇ ಇದ್ದ ಗುಣಗಳೊಡನೆ ಒಂದಷ್ಟು ಹೊರಗಿನದನ್ನು ಬೆರೆಸಿ, ಗಾಳಿಸುದ್ದಿಗಳನ್ನು ಹಬ್ಬಿಸಿ ಜಾಣ್ಮೆಯಿಂದ ಹೇಗೆ ವೈಷಮ್ಯವನ್ನು ಬಿತ್ತುತ್ತಾರೆ ಎಂಬುದನ್ನು ಕಾಸರವಳ್ಳಿ ಅತ್ಯಂತ ಸಮರ್ಥವಾಗಿ ಚಿತ್ರಿಸುತ್ತಾರೆ.</p>
<p>ಹೀಗೆ ಚಿತ್ರದ ಅಗಲ ಕ್ಯಾನ್ವಾಸನ್ನು ನೋಡುವುದು ಒಂದು ಬಗೆ. ಅದನ್ನು ಬಿಟ್ಟು ಚಿತ್ರದ ಒಂದೊಂದು ಪಾತ್ರದ ಜಾಡು ಹಿಡಿದು ಹೊರಟರೆ ಒಂದೊಂದು ಹೊಸ ಲೋಕಗಳೇ ತೆರೆದುಕೊಳ್ಳುತ್ತವೆ. ಉದಾಹರಣೆಯ ರೂಪದಲ್ಲಿ ನೇತ್ರು ಮತ್ತು ಗುಲಾಬಿ ಪಾತ್ರಗಳ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ನೋಡಬಹುದು. ಇಬ್ಬರೂ ಕನಸುಗಾರರು. ತಮ್ಮ ಸೀಮಿತ ಪ್ರಪಂಚದಿಂದಾಚೆಯ ಬಗ್ಗೆ ಹಂಬಲಿಕೆ ಇರುವವರು. ಟೀವಿ ಧಾರಾವಾಹಿಯ ಪಾತ್ರಗಳಿಗಿರುವ ನಾಟಕೀಯತೆ, ರೊಮಾನ್ಸ್ ಕಂಡು ಹಿಗ್ಗುವವರು. ಬಿಸಿ ರಕ್ತದ ತರುಣಿ ನೇತ್ರು ಈ ಕನಸನ್ನು ನನಸು ಮಾಡಿಕೊಳ್ಳುವ ಸಾಹಸಕ್ಕೆ ಇಳಿಯುತ್ತಾಳೆ. ಕೊನೆಗೆ ಸಂಪೂರ್ಣ ವಿಫಲಳಾಗುತ್ತಾಳೆ. ಬುರ್ಖಾ ಹಾಕಿಕೊಳ್ಳದೆ ದೋಣಿ ಹತ್ತದ, ಜಾತಿ ಮತ್ತು ಕೌಟುಂಬಿಕ ಎರಡೂ ನೆಲೆಯಲ್ಲಿಯೂ ಏಕಾಂಗಿಯಾದ ಗುಲಾಬಿ ನೇತ್ರುವಿನಂತೆ ಸೋಲನ್ನು ಒಪ್ಪಿಕೊಳ್ಳದೆ ಇರುವುದನ್ನು ಚಿತ್ರಿಸುವ ಮೂಲಕ ಮುಸ್ಲಿಂ ಮಹಿಳೆಯರ ಅಸಯಾಕತೆಯ ಬಗ್ಗೆ ನಮ್ಮ ಮನದಲ್ಲಿರುವ ಸ್ಥಿರ ಚಿತ್ರಗಳನ್ನು ಕಾಸರವಳ್ಳಿ ಅಲ್ಲಾಡಿಸುತ್ತದೆ.</p>
<p>ನೇತ್ರುವಿನ ಸೋಲಿನ ಮೂಲ ಇರುವುದು ಅವಳು ನಂಬಿದ ರಂಜಕ ಧಾರಾವಹಿಯ ತರ್ಕದಲ್ಲಿಯೇ? ಗುಲಾಬಿ ಟಾಕೀಸ್ನಲ್ಲಿ ಹೆಂಗಸರು ಮತ್ತು ಗಂಡಸರು ಟಿವಿ ಮುಖೇನ ಕಾಣುವ ಪ್ರಪಂಚ ಸಂಪೂರ್ಣ ಭಿನ್ನವಾದದ್ದು. ಒಂದು ಧಾರವಾಹಿಗಳದಾದರೆ ಇನ್ನೊಂದು ವಾರ್ತೆಗಳದು. ಈ ರೀತಿಯ compartmentalisaiton ತೀರಾ watertight ಆಯಿತೇನೋ, ಈ ಮೂಲಕ ಹೆಂಗಸರು ಯಾವತ್ತೂ ಭಾವನಾತ್ಮಕ ಜೀವಿಗಳು ಎಂಬ stereotype ಇನ್ನಷ್ಟು ಕಾಸರವಳ್ಳಿ ಬಲಗೊಳ್ಳುತ್ತಿದೆಯೇನೋ ಅನ್ನಿಸುವಷ್ಟು ಈ ಎರಡು ಪ್ರಪಂಚಗಳು ಭಿನ್ನ. ಅದೇನೇ ಇರಲಿ, ನೇತ್ರು ಮತ್ತು ಇತರ ಹೆಂಗಸರು ಈ ಧಾರಾವಾಹಿಗಳ ಪ್ರಪಂಚವನ್ನು ಪೂರ್ಣ ನಂಬಿ ಅದರಾಚೆಯ ವಾರ್ತೆಗಳ ಪ್ರಪಂಚದ ಗೋಜಿಗೇ ಹೋಗುವುದಿಲ್ಲ. ರಾಜಕೀಯ ಲೇಪವೇ ಇಲ್ಲದ ಕನಸುಗಾರಿಕೆಯನ್ನು ಮಾರುವ ಸ್ಯಾಟಲೈಟ್ ಟೀವಿಯ ಬಗ್ಗೆ ಮತ್ತು ಬಲ ಪಂಥೀಯ ರಾಜಕೀಯದಲ್ಲಿ ಅಡಕವಾಗಿರುವ ಪುರುಷ ಪ್ರಾಧಾನ್ಯತೆಯ ಬಗ್ಗೆ ಈ ಪಾತ್ರ ಕನ್ನಡಿ ಹಿಡಿಯುತ್ತದೆ. ಈ ಥರದ ಅನೇಕ ಲೇಯರ್ ಗಳನ್ನು ಸಿನೆಮಾದಲ್ಲಿ ನೋಡಬಹುದು.</p>
<p>ನೇತ್ರುವಿನಷ್ಟೇ ಕನಸುಗಳಿಗೆ ಮಾರು ಹೋಗುವ, ಅ-ರಾಜಕೀಯ ನೆಲೆಯಲ್ಲಿಯೇ ನಿಲ್ಲುವ ಗುಲಾಬಿಯ ಶಕ್ತಿ ಎಲ್ಲಿಂದ ಬರುತ್ತದೆ? ಇದು ಅವಳ ವಯಸ್ಸಿನೊಂದಿಗೆ, ಜೀವನಾನುಭವದೊಂದಿಗೆ ಬರುವ ripeness ಇರಬಹುದೆ? ಇದು ಅವಳ ವ್ಯಕ್ತಿತ್ವಕ್ಕೆ ಅಂತರ್ಗತವಾದ ತರ್ಕಕ್ಕೆ ಮೀರಿದ ಶಕ್ತಿಯೇ? ಅಥವಾ ಅವಳ ಸೂಲಗಿತ್ತಿಯ skill ಅವಳಿಗೆ ಒಂದು ವಿಶೇಷ ಆತ್ಮಸ್ಥೈರ್ಯ್ ನೀಡುತ್ತದೆಯೆ? ಯಾವುದಾದರೂ ಇರಬಹುದು ಅಥವ ಎಲ್ಲವೂ ಇರಬಹುದು. ನಿರ್ಣಾಯಕವಾಗಿ ಏನನ್ನೂ ಹೇಳದೆ ಇದನ್ನು ನಮ್ಮ ಯೋಚನೆಗೆ ಸಿನೆಮಾ ಬಿಡುತ್ತದೆ.</p>
<p>ಈ ಸ್ತ್ರೀ ಪ್ರಪಂಚದ ಬಗ್ಗೆ ಮಾತನಾಡುವಾಗ ಸಿನೆಮಾದ ಸಂದರ್ಭದಿಂದ (ಕಾರ್ಗಿಲ್ ಯುದ್ಧದ ಸಮಯ) ಈಚೆಗೆ ನಡೆದ ಕೆಲವು ವಿದ್ಯಮಾನಗಳನ್ನು ಸಿನೆಮಾಗೆ ನೇರ ಸಂಬಂಧವಿಲ್ಲದಿದ್ದರೂ ಪ್ರಸ್ತಾಪಿಸಬೇಕು ಅನ್ನಿಸುತ್ತದೆ. ಇವತ್ತು ನಮ್ಮ ಕೋಮುವಾದಿ ಪರಿಭಾಷೆ ಮತ್ತು ಅದನ್ನು ಕಾರ್ಯಗತ ಮಾಡುವ ಕಾರ್ಯತಂತ್ರಗಳು ಇನ್ನಷ್ಟು ಬದಲಾಗಿವೆ. ಗುಜರಾತ್ ಗಲಭೆಯಲ್ಲಿ, ಒರಿಸ್ಸಾ ಗಲಭೆಯಲ್ಲಿ ಹೆಂಗಸರ ಪ್ರಪಂಚ ಕೋಮುವಾದಕ್ಕೆ ವಿರುದ್ಧವಾಗಿ ನಿಲ್ಲುವಂತದು ಎಂಬ ನಂಬಿಕೆ ಬುಡಮೇಲು ಮಾಡುವ ಅನೇಕ ಘಟನೆಗಳು ನಡೆದಿವೆ. ಇಲ್ಲಿ ಸಂಘ ಪರಿವಾರದ ದುರ್ಗಾವಾಹಿನಿ ಪಡೆಗಳು ವಾತಾವರಣವನ್ನು ಕದಡುವಲ್ಲಿ ತಮ್ಮದೇ ಪ್ರಮುಖ ಪಾತ್ರ ವಹಿಸಿವೆ. ಹೆಣ್ಣಿನ ಗುಣದದಲ್ಲಿಯೇ ಕೋಮುವಾದಕ್ಕೆ ವಿರೋಧವಾಗಿ ನಿಲ್ಲುವ ಸಹಜ ಗುಣ ಎಂಬ ಆಶಾವಾದವನ್ನು ಕಾರ್ಗಿಲ್ ನಂತರದ ವಿದ್ಯಮಾನಗಳು ಸುಳ್ಳು ಮಾಡಿವೆ.</p>
<p>ಹಾಗಾಗಿ ಗುಲಾಬಿ ಟಾಕೀಸಿನ ಹೆಣ್ಣು ಪ್ರಪಂಚದ ಕೋಮುವಾದಿ ಶಕ್ತಿಗಳಿಂದ insular ಆಗಿ ಉಳಿಯುವ ಶಕ್ತಿಯನ್ನು ಈಗಿನ ಸಂದರ್ಭಕ್ಕೆ ಆರೋಪಿಸುವ ತಪ್ಪು ನೋಡುಗರು ಮಾಡಿದರೆ ಅದು ಇಂದಿನ ಸಂದರ್ಭವನ್ನು ಸರಳೀಕರಿಸಿದಂತಾದೀತು ಎಂಬುದು ಸಿನೆಮಾ ನೋಡುವಾಗ ಒಮ್ಮೊಮ್ಮೆ ನೆನಪು ಮಾಡಿಕೊಳ್ಳುವುದು ಒಳಿತು.</p>
<p>ಶುಭಂ ಹೇಳುವುದಕ್ಕೆ ಮುಂಚೆ ಮೂಲಕತೆಯ ವಿಷಯಕ್ಕೆ ಮರಳಿ ಒಂದು ಪ್ರಶ್ನೆ: ಕಾಸರವಳ್ಳಿಯವರ ಹಿಂದಿನ ಚಿತ್ರ ನಾಯಿ ನೆರಳುನ ಉತ್ತರಾರ್ಧಕ್ಕೂ ಮತ್ತು ಭೈರಪ್ಪನವರ ಮೂಲಕತೆಗೂ ಯಾವುದೇ ಸಂಬಂಧವಿರಲಿಲ್ಲ. ಗುಲಾಬಿ&#8230; ಸಿನೆಮಾಕ್ಕೂ ಮೂಲ ಕತೆಗೂ ತಲೆಯಿಂದ ಬಾಲದವರೆಗೆ ಏನೂ ಸಂಬಂಧ ಇರುವಂತೆ ಕಾಣುವುದಿಲ್ಲ. ಇದು ಕಾಸರವಳ್ಳಿಯವರದೇ ಕತೆ. ಇಂದಿನ ಸಂದರ್ಭಕ್ಕೆ ತುಂಬ ಪ್ರಸ್ತುತವಾದ ಮತ್ತು ಮನ ಮುಟ್ಟುವ ಕತೆ. ಹಾಗಂತಾದ ಮೇಲೆ ಯಾವುದೋ ಒಂದು ಸಾಹಿತ್ಯ ಕೃತಿಯನ್ನು ಆಧರಿಸಿಯೇ ಚಿತ್ರ ಮಾಡಬೇಕೆಂಬ ಹಠ ಯಾಕೆ ಅಂತ ಅರ್ಥವಾಗುವುದಿಲ್ಲ. ಈ ರೀತಿಯ ಆಧಾರ ಗುಲಾಬಿಗಂತೂ ಅಗತ್ಯ ಇರಲಿಲ್ಲವೇನೋ ಅಂತಲೇ ಅನ್ನಿಸುತ್ತದೆ.</p>
  <a rel="nofollow" href="http://feeds.wordpress.com/1.0/gocomments/bageshree.wordpress.com/65/"><img alt="" border="0" src="http://feeds.wordpress.com/1.0/comments/bageshree.wordpress.com/65/" /></a> <a rel="nofollow" href="http://feeds.wordpress.com/1.0/godelicious/bageshree.wordpress.com/65/"><img alt="" border="0" src="http://feeds.wordpress.com/1.0/delicious/bageshree.wordpress.com/65/" /></a> <a rel="nofollow" href="http://feeds.wordpress.com/1.0/gostumble/bageshree.wordpress.com/65/"><img alt="" border="0" src="http://feeds.wordpress.com/1.0/stumble/bageshree.wordpress.com/65/" /></a> <a rel="nofollow" href="http://feeds.wordpress.com/1.0/godigg/bageshree.wordpress.com/65/"><img alt="" border="0" src="http://feeds.wordpress.com/1.0/digg/bageshree.wordpress.com/65/" /></a> <a rel="nofollow" href="http://feeds.wordpress.com/1.0/goreddit/bageshree.wordpress.com/65/"><img alt="" border="0" src="http://feeds.wordpress.com/1.0/reddit/bageshree.wordpress.com/65/" /></a> <img alt="" border="0" src="http://stats.wordpress.com/b.gif?host=bageshree.wordpress.com&blog=3977069&post=65&subd=bageshree&ref=&feed=1" /></div>]]></content:encoded>
			<wfw:commentRss>http://bageshree.wordpress.com/2008/10/13/%e0%b2%97%e0%b3%81%e0%b2%b2%e0%b2%be%e0%b2%ac%e0%b2%bf-%e0%b2%9f%e0%b2%be%e0%b2%95%e0%b3%80%e0%b2%b8%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%a6%e0%b3%8a%e0%b2%a1%e0%b3%8d/feed/</wfw:commentRss>
		<slash:comments>8</slash:comments>
	
		<media:content url="http://1.gravatar.com/avatar/5f2a5091a45da876c2ac1f5531cdc8b6?s=96&#38;d=identicon&#38;r=G" medium="image">
			<media:title type="html">Bageshree</media:title>
		</media:content>

		<media:content url="http://bageshree.wordpress.com/wp-includes/js/tinymce/plugins/wordpress/img/trans.gif" medium="image">
			<media:title type="html">More...</media:title>
		</media:content>
	</item>
		<item>
		<title>ಸಮಯವನ್ನು ನುಂಗುವ ಸಮಯ</title>
		<link>http://bageshree.wordpress.com/2008/09/21/%e0%b2%b8%e0%b2%ae%e0%b2%af%e0%b2%b5%e0%b2%a8%e0%b3%8d%e0%b2%a8%e0%b3%81-%e0%b2%a8%e0%b3%81%e0%b2%82%e0%b2%97%e0%b3%81%e0%b2%b5-%e0%b2%b8%e0%b2%ae%e0%b2%af/</link>
		<comments>http://bageshree.wordpress.com/2008/09/21/%e0%b2%b8%e0%b2%ae%e0%b2%af%e0%b2%b5%e0%b2%a8%e0%b3%8d%e0%b2%a8%e0%b3%81-%e0%b2%a8%e0%b3%81%e0%b2%82%e0%b2%97%e0%b3%81%e0%b2%b5-%e0%b2%b8%e0%b2%ae%e0%b2%af/#comments</comments>
		<pubDate>Sun, 21 Sep 2008 08:30:30 +0000</pubDate>
		<dc:creator>Bageshree</dc:creator>
				<category><![CDATA[Uncategorized]]></category>

		<guid isPermaLink="false">http://bageshree.wordpress.com/?p=43</guid>
		<description><![CDATA[ಕೇಂಬ್ರಿಡ್ಜಿನಲ್ಲಿ ಜಾನ್ ಟೈಲರ್ ಎಂಬಾತ ಡೆಸೈನ್ ಮಾಡಿದ ಒಂದು ಹೊಸ ತರದ ಗಡಿಯಾರದ ಚರ್ಚೆ ಪೇಪರುಗಳ ತುಂಬೆಲ್ಲಾ ನಡೆಯುತ್ತಿದೆ. ಅದರ ಚಿತ್ರ ನೋಡಿದರೆ ಮುಳ್ಳೇ ಇಲ್ಲದ ಈ ಗಡಿಯಾರದಲ್ಲಿ ಸಮಯ ನೋಡುವುದು ಹೇಗೆ ಅಂತ ಅರ್ಥವಾಗುವುದಿಲ್ಲ. ಅದು ಆಗಾಗ ನಿಧಾನಕ್ಕೆ, ಆಗಾಗ ಬೇಗ ಓಡಿ, ಆಗಾಗ ನಿಂತು ಹೋಗಿ &#8220;ಸಮಯ&#8221; ಎಂಬುದು ಕಾರಾರುವಾಕ್ಕಾದದ್ದು ಎಂಬ ಕಲ್ಪನೆಯನ್ನು ಪ್ರಶ್ನಿಸುತ್ತದಂತೆ. ಇದರ ಮೇಲೆ ಕೂತ ಬೃಹತ್ ಮಿಡತೆ ಆಗಾಗ ಬಾಲ ಅಲ್ಲಾಡಿಸ್ಸುತ್ತಾ, ಕಣ್ಣುಗಳನ್ನು ಹಳದಿ, ಕೆಂಪು ಬಣ್ಣಕ್ಕೆ ತಿರುಗಿಸುತ್ತಾ ಸಮಯವನ್ನು [...]<img alt="" border="0" src="http://stats.wordpress.com/b.gif?host=bageshree.wordpress.com&blog=3977069&post=43&subd=bageshree&ref=&feed=1" />]]></description>
			<content:encoded><![CDATA[<div class='snap_preview'><br /><p>ಕೇಂಬ್ರಿಡ್ಜಿನಲ್ಲಿ ಜಾನ್ ಟೈಲರ್ ಎಂಬಾತ ಡೆಸೈನ್ ಮಾಡಿದ ಒಂದು ಹೊಸ ತರದ ಗಡಿಯಾರದ ಚರ್ಚೆ ಪೇಪರುಗಳ ತುಂಬೆಲ್ಲಾ ನಡೆಯುತ್ತಿದೆ. ಅದರ ಚಿತ್ರ ನೋಡಿದರೆ ಮುಳ್ಳೇ ಇಲ್ಲದ ಈ ಗಡಿಯಾರದಲ್ಲಿ ಸಮಯ ನೋಡುವುದು ಹೇಗೆ ಅಂತ ಅರ್ಥವಾಗುವುದಿಲ್ಲ. ಅದು ಆಗಾಗ ನಿಧಾನಕ್ಕೆ, ಆಗಾಗ ಬೇಗ ಓಡಿ, ಆಗಾಗ ನಿಂತು ಹೋಗಿ &#8220;ಸಮಯ&#8221; ಎಂಬುದು ಕಾರಾರುವಾಕ್ಕಾದದ್ದು ಎಂಬ ಕಲ್ಪನೆಯನ್ನು ಪ್ರಶ್ನಿಸುತ್ತದಂತೆ. ಇದರ ಮೇಲೆ ಕೂತ ಬೃಹತ್ ಮಿಡತೆ ಆಗಾಗ ಬಾಲ ಅಲ್ಲಾಡಿಸ್ಸುತ್ತಾ, ಕಣ್ಣುಗಳನ್ನು ಹಳದಿ, ಕೆಂಪು ಬಣ್ಣಕ್ಕೆ ತಿರುಗಿಸುತ್ತಾ ಸಮಯವನ್ನು ಹೊಂಚುಹಾಕಿ ನುಂಗುತ್ತಾ ಕೂತಿರುತ್ತದಂತೆ.<br />
ಅಚಲವಾಗಿ ಕೂತು ನಮ್ಮ ದಿನದ ಓಟವನ್ನು ಅರ್ಥ ಸ್ವಾರ್ಥಗಳಿಗೆ ಎಡೆಗೊಡದೆ ನಿರ್ಭಾವದಿಂದ ಅಳೆಯುವ ನಮ್ಮೆಲ್ಲರ ಮನೆಯ ಗೋಡೆಯ ಮೇಲಿನ ಗಡಿಯಾರ ಎಂಬ ಯಂತ್ರ ಒಂದು installation ಕೃತಿಯೂ, ಮೆಟಫಿಸಿಕಲ್ ಸಿಂಬಲ್ಲೂ ಹೌದಲ್ಲವಾ ಅಂತ ಪೇಪರ್ರಿನ ಸುದ್ದಿ ಓದುವಾಗ ಅನ್ನಿಸುತ್ತಾ ಇದೆ. ಮೇಲೆ ಮಿಡತೆ ಕೂರದ ಮಾಮೂಲು ಗಡಿಯಾರಗಳೂ ನಮ್ಮ ಧಾವಂತವನ್ನು ನೋಡಿ ಒಳಗೊಳಗೇ ನಗುತ್ತಾ &#8220;ಓಡು, ಓಡು&#8221; ಅಂತ ತಮಾಷೆ ನೋಡುತ್ತಿರಬಹುದು!<br />
ಗಡಿಯಾರದ ಕಣ್ಣು ತಪ್ಪಿಸಿ ಒಂದೆರಡು ಗಳಿಗೆಗಳನ್ನು ಕದ್ದು ಅನುಭವಿಸುವ ವಿಫಲ ಪ್ರಯತ್ನಗಳನ್ನು ನಾವೆಲ್ಲಾ ಮಾಡುತ್ತಿರುತ್ತೇವೆ ಅಲ್ಲವಾ? ಪ್ರೀತಿ, ಕಲೆ, ದೇವರ ಕಲ್ಪನೆ ಅಲ್ಲವೂ ಈ ಕಾಲದ ಚಕ್ರದ ಕೆಳಗೆ ಒಂದು ಪುಟ್ಟ ಕಲ್ಲಿಟ್ಟು ಸ್ವಲ್ಪವಾದರೂ ನಿಧಾನ ಮಾಡುವ ಪ್ರಯತ್ನಗಳೇ ಅನ್ನಬಹುದು.<span id="more-43"></span><br />
ನಮ್ಮ ಸಾಹಿತ್ಯದ ತುಂಬೆಲ್ಲಾ ಪ್ರೀತಿಯ ಆಲಿಂಗನದಲ್ಲಿ ಓಡುವ ಸಮಯವನ್ನು ಧಿಕ್ಕರಿಸಿ ಮೈಮರೆತಿರುವ ಪ್ರಿಯತಮ-ಪ್ರಿಯತಮೆಯರು. ಈ ರೀತಿಯ ಪದ್ಯ, ಹಾಡುಗಳಲ್ಲಿ ನನಗೆ ಪ್ರಿಯವಾದದ್ದು &#8220;ಆಜ್ ಜಾನೆ ಕಿ ಜಿದ್ ನಾ ಕರೊ&#8221; ಎಂಬ ಫರೀದಾ ಖಾನಂ ಹಾಡು. &#8220;ಮಾನ್ಸೂನ್ ವೆಡ್ಡಿಂಗ್&#8221; ಚಿತ್ರದಲ್ಲಿ ಬಳಸಲಾದ ಈ ಹಾಡಿನ remix ಆಶಾ ಭೊಂಸ್ಲೆ ಹಾಡಿದ್ದಾರೆ. &#8220;ವಕ್ತ್ ಕಿ ಕೈದ್ ಮೆ ಜಿಂದಗೀ ಹೈ ಮಗರ್, ಚಂದ್ ಘಡಿಯಾ ಯಹೀ ಹೈ ಜೊ ಆಜಾದ್ ಹೈ,&#8221; ಅನ್ನುತ್ತಾಳೆ ಇಲ್ಲಿನ ಪ್ರಿಯತಮೆ. &#8220;How soon hath Time, the subtle thief of youth,/ Stol&#8217;n on his wing my three-and-twentieth year!&#8221; ಎನ್ನುವ ಜಾನ್ ಮಿಲ್ಟನ್ ಕೊನೆಗೆ ದೇವರ ಮೇಲೆ ಭಾರ ಹಾಕಿ ನಿಟ್ಟುಸಿರು ಬಿಡುತ್ತಾನೆ. ಎಲ್ಲದನ್ನೂ ತರಿದು ಹಾಕುವ ಸಮಯದ ಕುಡುಗೋಲಿನ ಬಗ್ಗೆ ಶೇಕ್ಸ್ ಪಿಯರ್ ಅನೇಕ ಸಾನೆಟ್ಟುಗಳನ್ನು ಬರೆದಿದ್ದಾನೆ. ಆದರೆ ಪ್ರೀತಿಗೆ ಈ ಬೀಸುವ ಕುಡುಗೋಲನ್ನು ತಪ್ಪಿಸಿಕೊಳ್ಳುವ ಶಕ್ತಿ ಇದೆ, ಈ ಪ್ರೀತಿಯನ್ನು ಅಜರಾಮರಗೊಳಿಸುವ ಶಕ್ತಿ ತನ್ನ ಬರವಣಿಗೆಗಿದೆ ಅನ್ನುತ್ತಾನೆ.<br />
&#8220;Love&#8217;s not Time&#8217;s fool, though rosy lips and cheeks<br />
Within his bending sickle&#8217;s compass come;<br />
Love alters not with his brief hours and weeks,<br />
But bears it out even to the edge of doom.<br />
If this be error, and upon me prov&#8217;d,<br />
I never writ, nor no man ever lov&#8217;d.&#8221;<br />
ಮತ್ತೊಂದು ಸಾನೆಟ್ಟಿನಲ್ಲಿ ಹೀಗೆ ಬರೆಯುತ್ತಾನೆ:<br />
&#8220;But thy eternal summer shall not fade,<br />
Nor lose possession of that fair thou owest;<br />
Nor shall Death brag thou wander&#8217;st in his shade,<br />
When in eternal lines to time thou growest;<br />
So long as men can breathe, or eyes can see<br />
So long lives this, and this gives life to thee.&#8221;<br />
ವಾವ್! ಮೆಚ್ಚಬೇಕಾದ confidence ಅಲ್ಲವಾ?<br />
ಆದರೂ ಎಲ್ಲಾ ಹಾರಟ, ಮಾತುಗಳ ನಂತರ ಮನುಷ್ಯನನ್ನು ಆವರಿಸುವುದು ನಿಸ್ಸಹಾಯಕತೆ ಮತ್ತು ವಿಷಾದ ಇರಬಹುದೆ? ಕೆಲವು ನೀಲು ಪದ್ಯಗಳು ಇದನ್ನು ಎಷ್ಟು ಸರಳವಾಗಿ, ತಟ್ಟುವಂತೆ ಹೇಳುತ್ತವೆ:<br />
&#8220;ಹುಟ್ಟು ಸಾವಿನ ಬಗ್ಗೆ ನಡೆವ ಚರ್ಚೆ ಕೂಡ<br />
ಸಾವಿನತ್ತ ಸಾಗುವ<br />
ಪುಟ್ಟ ಗಲಾಟೆ.&#8221;<br />
ಇನ್ನೂ ಚೆಂದದ ಪದ್ಯ ಇದು:<br />
&#8220;ಕೋಟ್ಯಾಂತರ ವರ್ಷಗಳಿಂದ<br />
ಮೂಡಿ ಮುಳುಗುತ್ತಿರುವ ಸೂರ್ಯನಿಗೆ<br />
ನನ್ನಂಥ ಹೆಣ್ಣು ಕೂಡ<br />
ಅಲ್ಪವಿರಾಮದ ಚಿಹ್ನೆ ಕೂಡ ಅಲ್ಲ.&#8221;<br />
ಕಾಲದ ಬಗ್ಗೆಯೇ ಸುಮಾರಷ್ಟು ನೀಲು ಪದ್ಯಗಳಿಗೆ. ತುಂಟತನದಿಂದ ಹಿಡಿದು ವಿಷಾದದವರೆಗೆ ಅನೇಕ ಮೂಡ್ ಗಳಲ್ಲಿ ಕಾಲದ ಬಗ್ಗೆ ಇವು ಚಿಂತನೆಗಳು.<br />
ಏನು ಮಾಡುವುದು ಹೇಳಿ. ಕಾಲ ಓಡತ್ತೆ, ಕಪ್ಪು ತಲೆ ಬೆಳ್ಳಗಾಗತ್ತೆ, ರೇಷ್ಮೆ ನುಣುಪಿನ ಚರ್ಮ ಸುಕ್ಕು ಬೀಳತ್ತೆ, ಸಣ್ಣನೆ ಸೊಂಟದ ಸುತ್ತಾ ಟಯರುಗಳು ಹರಡುತ್ತವೆ, ಒಮ್ಮೆ ಹೆಮ್ಮೆಯಿಂದ ಆಕಾಶ ನೋಡುತ್ತಿದ್ದ ಸ್ತನಗಳು ನಾಚಿಕೆಯಿಂದ ತಲೆ ಬಗ್ಗಿಸಲಾರಂಭಿಸುತ್ತವೆ, ಡಯಾಬಿಟಿಸ್ ಇಲ್ಲದಿದ್ದರೂ ಅದರ ಭೀತಿಯಂತೂ ಶುರುವಾಗುತ್ತದೆ&#8230;<br />
ಸರಿ, ಸರಿ. ಹೌದು ಎಲ್ಲಾ ಸರಿ. ಹಾಗಂತ ಹೆದರಿ ಗಡಿಯಾರವನ್ನೇ ನೋಡುತ್ತಾ ಕೂತುಕೊಳ್ಳೂವುದಕ್ಕಾಗುವುದಿಲ್ಲವಲ್ಲ. ಅದಕ್ಕೆ ಇರಬೇಕು ನಾವೆಲ್ಲಾ ಓಟದಲ್ಲಿಯೇ ಮಗ್ನರಾಗಿ ನಮ್ಮ ಅಡುಗಡುಗು ಅಳೆಯುವ ಗಡಿಯಾರದ ಕಡೆ ಓಟದ ಗತಿಯನ್ನು ಇನ್ನೂ ಚುರುಕುಗೊಳಿಸಿಕೊಳ್ಳಬೇಕಾ ಎಂದು ತಿಳಿದುಕೊಳ್ಳುವುದಕ್ಕೆ ಮಾತ್ರ ದೃಷ್ಟಿ ಹಾಯಿಸುವುದು. ಹಿಂದೆ grandfather clockಗಳು ಇಡೀ ಮನೆಗೆ ಕೇಳಿಸುವಂತೆ ಶಬ್ದ ಮಾಡುತ್ತಾ ಇದ್ದವು. ವಾರಕ್ಕೊಮ್ಮೆ ಖಡ್ಡಾಯವಾಗಿ ಅದರ ಮುಂದೆ ನಿಂತು ಕೀಲಿ ಕೊಡಬೇಕಿತ್ತು. ಈಗೀಗ ಗಡಿಯಾರಗಳಿಗೆ ಕೀಲಿ ಕೊಡುವ ಕೆಲಸ ಕೂಡ ಇಲ್ಲ. ತಿರುಗುವ pebdulum ಇಲ್ಲ. ಒಮ್ಮೆ ಬ್ಯಾಟರಿ ತುಂಬಿಸಿ ಬಿಟ್ಟರೆ ಮತ್ತೆ ಅದರ ಜೊತೆ ಯಾವ ಸಂಬಂಧವೂ ಬೇಡ. ಓಲಾಡುವ pendulum ನೋಡುವಾಗ, ಕೀಲಿ ಕೊಡುವಾಗ ಮನುಷ್ಯನಿಗೆ ತನ್ನ ಕ್ಷಣಿಕತೆಯ ಅನುಭವ ಆಗುತ್ತಿತ್ತೇ? ಗೊಡವೆಯೇ ಬೇಡವೆಂದು ಈ ಬ್ಯಾಟರಿ ಗಡಿಯಾರಗಳನ್ನು ಸೃಷ್ಟಿಸಿದನೆ? ಗೊತ್ತಿಲ್ಲ. ಅಂತೂ ಹೀಗೆ ಮಾಡಿದ್ದರಿಂದ ನಮಗೆ ಕೀಲಿ ಕೊಡುವ ಸಮಯವಂತೂ ಉಳಿಯಿತು!<br />
ಇರಲಿ. ಇಷ್ಟೊಂದು ಫಿಲಾಸಫಿ ಮಾತಾಡಿ ಸಮಯ ಹಾಳು ಮಾಡುವುದು ಬೇಡ. ಮತ್ತೊಂದು ನೀಲು ಪದ್ಯ ನೆನಪು ಬರ್ತಾ ಇದೆ:<br />
&#8220;ತತ್ವಜ್ನಾನಿ ಜಗತ್ತನ್ನು<br />
ಮಾಯೆ ಎಂದರೂ<br />
ಕೇವಲ ಹುರಿಗಾಳು ತಿನ್ನುವಾಗ ಕೂಡ<br />
ನನಗೆ ಜಗತ್ತು ನಿಜ ಅನ್ನಿಸುವುದು.&#8221;<br />
ಬನಶಂಕರಿ ಪಾರ್ಕಿನ ಹತ್ತಿರ ಒಂದು ಎಸ್ ಎಲ್ ವಿ ಹೋಟೆಲ್ ಇದೆ. ಅಲ್ಲಿ ಯಾವಾಗಲೂ ನೂಕು ನುಗ್ಗಲು. ಒಂಭತ್ತು ಗಂಟೆ ಸುಮಾರಿಗೆ ಹೋದರೆ ಪಕ್ಕದವರಿಗೆ ಚಟ್ನಿ ಸ್ನಾನ ಮಾಡಿಸದೆ ಇಡ್ಲಿ ಪ್ಲೇಟು ತೆಗೆದುಕೊಂಡು ಹೊರ ಬರುವುದೇ ಹರಸಾಹಸ. ಕೂರುವುದುಕ್ಕೆ ಅಲ್ಲಿ ಜಾಗ ಇಲ್ಲ. ಅಲ್ಲೇ ಕೊಳಕು ಜಗಲಿಯ ಮೇಲೆ ಕುಳಿತು ಪಕ್ಕದಲ್ಲಿ ಪಾನ್ ಪರಾಗ್ ಜಗಿದು ಉಗಿದ ಗುರುತುಗಳು ಕಂಡರೂ ಕಾಣದಂತೆ ನಟಿಸುತ್ತಾ ತಿನ್ನಬೇಕು. ಆದರೆ ಅಲ್ಲಿ ಕೂರುವ ಮಜ ಏನೆಂದರೆ ಹರಿಬರಿಯಲ್ಲಿ ಬೆಳಗಾಗೆದ್ದು ಅಫೀಸಿಗೆ ಓಡುವವರನ್ನು ಕಾಫಿ ಹೀರುತ್ತಾ ಕೂತು ನೋಡುವುದು. ಪಾಪ ಟಾಯ್ಲೆಟ್ ಗೆ ಹೋಗಲಿಕ್ಕೆ ಟೈಮ್ ಇರಲಿಲ್ಲವೇನೊ ಅನ್ನಿಸುವಂತೆ ಹುಬ್ಬು ಗಂಟಿಕ್ಕಿಕೊಂಡು, &#8220;ಪೇಪೇಪೇ&#8221; ಎಂದು ಬೇಡವಾದರೂ ಹಾರನ್ನು ಹೊಡೆಯುತ್ತಾ ಹೋಗುತ್ತಿರುತ್ತಾರೆ. ನಾವೂ ಇದೇ ಮೂಡಿಗೆ ಸೇರಿ ರೋಡಿಗೆ ಇಳಿಯುವುದಕ್ಕೆ ಮುಂಚೆ ಈ ಓಡುವ ಜಗತ್ತನ್ನು ನಾವು ಇದಕ್ಕೆ ಸೇರಿದವರಲ್ಲವೇನೋ ಎಂಬಂತೆ ನೋಡುತ್ತಾ ಕಳೆಯ ಈ ಕ್ಷಣಗಳು&#8230; ಆಹಾ!<br />
ಇವತ್ತಿನ ಪೇಪರ್ರಿನಲ್ಲಿ ಕೇಂಬ್ರಿಡ್ಜಿನಲ್ಲಿ ಜಾನ್ ಟೈಲರ್ ನ ಗಡಿಯಾರದ ಕೆಳಗೆ ಅದನ್ನು ಬಿಡುಗಡೆ ಮಾಡಿದ ವಿಜ್ನಾನಿ ಸ್ಟೀಫನ್ ಹಾಕಿಂಗ್ ಚಿತ್ರವಿದೆ. ಯಂತ್ರದ ಸಹಾಯವಿಲ್ಲದೆ ಮಾತಾಡಲಿಕ್ಕೂ ಆಗದ ಈತ ಸಮಯದ ಬಗ್ಗೆ ಪುಸ್ತಕ ಬರೆದಿದ್ದಾನೆ. ಆಕಾಶದಲ್ಲಿ ಹಾರಿದ್ದಾನೆ, ಎರಡನೆ ಮದುವೆ ಮಾಡಿಕೊಂಡು ಆಕೆಯನ್ನೂ divorce ಮಾಡಿದ್ದಾನೆ. ಈತನ ತಲೆಯಲ್ಲಿ ಅವನ ತಲೆಯ ಹಿಂದಿನ ವಿಚಿತ್ರ ಗಡಿಯಾರ ಮತ್ತು ಅದರ ಕುಳಿತ ಸಮಯ ನುಂಗುವ ಕೆಂಗಣ್ಣ ಮಿಡತೆಯ ಬಗ್ಗೆ ಏನು ಅನ್ನಿಸುತ್ತಿರಬಹುದು?<br />
ನನ್ನ ಕಂಪ್ಯೂಟರ್ರಿನ ಸದ್ದು ಮಾಡದ ಗಡಿಯಾರದಲ್ಲೀಗ ಒಂದು ಗಂಟೆ ಐವತ್ತು ನಿಮಿಷ. ಇವತ್ತು ಭಾನುವಾರ ಅಂತ ಅಡಿಗೆಗೆ, ಸ್ನಾನಕ್ಕೆ ಎಲ್ಲ ರಜ ಕೊಟ್ಟುಬಿಟ್ಟರೆ ಹೇಗೆ ಅಂತ ಈ ಚಿತ್ರ ನೋಡುತ್ತಾ ಯೋಚಿಸುತ್ತಾ ಇದ್ದೇನೆ.</p>
  <a rel="nofollow" href="http://feeds.wordpress.com/1.0/gocomments/bageshree.wordpress.com/43/"><img alt="" border="0" src="http://feeds.wordpress.com/1.0/comments/bageshree.wordpress.com/43/" /></a> <a rel="nofollow" href="http://feeds.wordpress.com/1.0/godelicious/bageshree.wordpress.com/43/"><img alt="" border="0" src="http://feeds.wordpress.com/1.0/delicious/bageshree.wordpress.com/43/" /></a> <a rel="nofollow" href="http://feeds.wordpress.com/1.0/gostumble/bageshree.wordpress.com/43/"><img alt="" border="0" src="http://feeds.wordpress.com/1.0/stumble/bageshree.wordpress.com/43/" /></a> <a rel="nofollow" href="http://feeds.wordpress.com/1.0/godigg/bageshree.wordpress.com/43/"><img alt="" border="0" src="http://feeds.wordpress.com/1.0/digg/bageshree.wordpress.com/43/" /></a> <a rel="nofollow" href="http://feeds.wordpress.com/1.0/goreddit/bageshree.wordpress.com/43/"><img alt="" border="0" src="http://feeds.wordpress.com/1.0/reddit/bageshree.wordpress.com/43/" /></a> <img alt="" border="0" src="http://stats.wordpress.com/b.gif?host=bageshree.wordpress.com&blog=3977069&post=43&subd=bageshree&ref=&feed=1" /></div>]]></content:encoded>
			<wfw:commentRss>http://bageshree.wordpress.com/2008/09/21/%e0%b2%b8%e0%b2%ae%e0%b2%af%e0%b2%b5%e0%b2%a8%e0%b3%8d%e0%b2%a8%e0%b3%81-%e0%b2%a8%e0%b3%81%e0%b2%82%e0%b2%97%e0%b3%81%e0%b2%b5-%e0%b2%b8%e0%b2%ae%e0%b2%af/feed/</wfw:commentRss>
		<slash:comments>3</slash:comments>
	
		<media:content url="http://1.gravatar.com/avatar/5f2a5091a45da876c2ac1f5531cdc8b6?s=96&#38;d=identicon&#38;r=G" medium="image">
			<media:title type="html">Bageshree</media:title>
		</media:content>
	</item>
	</channel>
</rss>